‘ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳಿಗೆ ನೀರು ನುಗ್ಗುತ್ತಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ವಾರಪೂರ್ತಿ ಸುರಿದ ಭಾರಿ ಮಳೆಗೂ ಮನೆಗಳಲ್ಲಿ ನೀರು ತುಂಬಿದ್ದವು. ಆವಾಗ ಜೆಸಿಬಿಯಿಂದ ನೀರು ಹರಿದು ಹೋಗಲು ತಾತ್ಕಾಲಿಕವಾಗಿ ದಾರಿ ಮಾಡಿ ಕೊಟ್ಟಿದ್ದರು. ಕೆಲ ದಿನ ಗ್ರಾಮದ ಶಾಲೆಯಲ್ಲಿ ಉಳಿದುಕೊಂಡಿದ್ದೇವು. ಸಮಸ್ಯೆಗೆ ಸೂಕ್ತ ಪರಿಹಾರ ಸಿಗದೆ ಇರುವುದರಿಂದ ಮಂಗಳವಾರ ರಾತ್ರಿ ಸುರಿದ ಮಳೆ ನೀರು ಸಂಪೂರ್ಣವಾಗಿ ಮನೆಯನ್ನು ಆವರಿಸಿಕೊಂಡಿವೆ. ಒಲೆ ನೀರಿನಲ್ಲಿ ಮುಳುಗಿರುವುದರಿಂದ ರಾತ್ರಿ, ಬೆಳಿಗ್ಗೆ ಅಡುಗೆ ಮಾಡಿಲ್ಲ. ಮಕ್ಕಳು, ನಾವು ಉಪವಾಸ ಇದ್ದೀವಿ’ ಎಂದು ರಾಯಪ್ಪ, ಲಕ್ಷ್ಮಣ, ಅಮ್ಮವ, ಸುನಿತಾ ಅಳಲು ತೋಡಿಕೊಂಡರು.