ಅನ್ಯಾಯ ಮೂಲಕ ಪರರ ಸಂಪತ್ತು, ರಾಜ್ಯ, ಧನ ಅಥವಾ ಅಧಿಕಾರ ಅಪಹರಿಸುವುದು ಸ್ತೇಯವಾಗಿದೆ. ಶ್ರೀಮಂತರು ಸಂಗ್ರಹದಲ್ಲಿಯೇ ಸುಖವೆಂದರಿದವರು. ಬಡವರ ರಕ್ತ ಹೀರಿ ಧನ ಗಳಿಸುತ್ತಾರೆ. ಕಾರ್ಖಾನೆ ಮಾಲೀಕರು ಕಡಿಮೆ ವೇತನ ನೀಡಿ ಹೆಚ್ಚು ದುಡಿಸಿಕೊಳ್ಳುವರು. ವ್ಯಾಪಾರಿಗಳು ಅನ್ನ ಮೊದಲಾದ ದಿನಸಿ ಸಾಮಗ್ರಿ ಸಂಗ್ರಹಿಸಿಟ್ಟು ಇಲ್ಲವೆಂದು ಹೇಳಿ ಅದಕ್ಕೆ ಉನ್ನತ ಬೆಲೆ ಬಂದಾಗ ಮಾರುವರು. ಕೆಲವರು ಕಲಬೆರಕೆ ಮಾಡುವರು. ಲಂಚ ತಿನ್ನುವರು. ಅನ್ಯಾಯವನ್ನು ನ್ಯಾಯವೆಂದು ಸಿದ್ಧಪಡಿಸುವುದು ಇವೆ ಮೊದಲಾದ ಸ್ತೇಯಗಳು ದೇಶದಿಂದ ನಾಶವಾದರೆ ರಾಮರಾಜ್ಯ ನಿರ್ಮಾಣವಾಗುವುದೇನಶ್ಚರ್ಯವಲ್ಲ. ಮದ್ಯಪಾನ ಮಾಡದವರು, ಪರಸ್ತ್ರೀ ನೋಡದವರು, ಹಿಂಸಾಚಾರಕ್ಕೆ ತಲೆಬಾಗದವರಿದ್ದ ಕಾಲವೇ ರಾಮರಾಜ್ಯ.