<p><strong>ಬೀದರ್: </strong>ಶ್ರಾವಣದ ಕೊನೆಯ ಸೋಮವಾರ ಇಲ್ಲಿಯ ಐತಿಹಾಸಿಕ ಪಾಪನಾಶ ಹಾಗೂ ನರಸಿಂಹ ಝರಣಿ ದೇಗುಲಕ್ಕೆ ಭಕ್ತರ ದಂಡೇ ಹರಿದು ಬಂದಿತು.</p>.<p>ಪಾಪನಾಶ ದೇಗುಲದಲ್ಲಿ ಸಹಸ್ರಾರು ಭಕ್ತರು ಶ್ರದ್ಧೆ, ಭಕ್ತಿಯಿಂದ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. ನಸುಕಿನ ಜಾವದಿಂದಲೇ ಭಕ್ತರು ದೇವಸ್ಥಾನದ ಕಡೆಗೆ ಮುಖ ಮಾಡಿದರು. ಹೆಚ್ಚಿನವರು ಬಸ್, ಕಾರು, ಜೀಪ್, ಬೈಕ್, ಆಟೊಗಳಲ್ಲಿ ದೇವಸ್ಥಾನಕ್ಕೆ ಬಂದರೆ, ಕೆಲವರು ಕಾಲ್ನಡಿಗೆ ಮೂಲಕ ಆಗಮಿಸಿ ಹರಕೆ ತೀರಿಸಿದರು.</p>.<p>ದೇಗುಲದ ಆವರಣದ ಪುಷ್ಕರಣೆಯಲ್ಲಿ ಮಹಿಳೆಯರು, ಮಕ್ಕಳು ಸ್ನಾನ ಮಾಡಿದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶಿವಲಿಂಗಕ್ಕೆ ಬಿಲ್ವ ಪತ್ರಿ, ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ಕೃತಾರ್ಥರಾದರು.<br />ಬೆಳಿಗ್ಗೆಯಿಂದ ಸಂಜೆಯವರೆಗೂ ದೇವಸ್ಥಾನದ ಪರಿಸರದಲ್ಲಿ ಭಕ್ತ ಸಮೂಹ ಕಂಡು ಬಂದಿತು. ಓಂನಮ ಶಿವಾಯ ಜಪ ನಿರಂತರ ಮೊಳಗಿತು.</p>.<p>ಅನೇಕರು ಭಕ್ತರಿಗಾಗಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದರು. ಶಿರಾ, ಬಾಳೆಹಣ್ಣನ್ನು ಕೂಡ ವಿತರಿಸಿದರು. ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭಿಕ್ಷುಕರು, ರೋಗಿಗಳಿಗೆ ಭಕ್ತರು ದಾನ ಮಾಡಿದರು.</p>.<p>ತಾತ್ಕಾಲಿಕ ಕಾಯಿ, ಕರ್ಪೂರ, ದೇವರ ಫೊಟೊಗಳು, ವಿಗ್ರಹ, ವಿಭೂತಿ, ಬೆಂಡು ಬತಾಸು, ತಿನಿಸುಗಳ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಆಟಿಕೆಗಳ ಅಂಗಡಿಗಳಲ್ಲಿ ವಿವಿಧ ಆಟಿಕೆಗಳನ್ನು ಖರೀದಿಸಲು ಚಿಣ್ಣರು ಮುಗಿ ಬಿದ್ದರು.</p>.<p>ರೈಲು, ಬಸ್, ಕಾರು, ಜೀಪು, ಬಲೂನ್, ಕನ್ನಡಕ, ತುತ್ತೂರಿ, ಬುಗರಿ ಮೊದಲಾದ ಆಟಿಕೆಗಳು ಮಕ್ಕಳ ಚಿತ್ತವನ್ನು ತಮ್ಮತ್ತ ಸೆಳೆದವು. ಮಕ್ಕಳು ತಮಗೆ ಇಷ್ಟವಾದ ಆಟಿಕೆ ಖರೀದಿಸಿ ಸಂಭ್ರಮಿಸಿದರು.</p>.<p>ನರಸಿಂಹ ಝರಣಿ: ನಗರದ ಇನ್ನೊಂದು ಐತಿಹಾಸಿಕ ದೇವಸ್ಥಾನದ ಆಗಿರುವ ನರಸಿಂಹ ಝರಣಿಯಲ್ಲೂ ಅಸಂಖ್ಯಾತರ ಭಕ್ತರು ದೇವರ ದರ್ಶನ ಪಡೆದರು.</p>.<p>ನಗರ, ಜಿಲ್ಲೆ, ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ ಭಕ್ತರು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿ ಭಾವದಿಂದ ಪಾಲ್ಗೊಂಡರು.</p>.<p>ದೇವಸ್ಥಾನದ ಪುಷ್ಕರಣೆಯಲ್ಲಿ ಸ್ನಾನ ಮಾಡಿದ ನಂತರ ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ಅನ್ನ ಪ್ರಸಾದ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಶ್ರಾವಣದ ಕೊನೆಯ ಸೋಮವಾರ ಇಲ್ಲಿಯ ಐತಿಹಾಸಿಕ ಪಾಪನಾಶ ಹಾಗೂ ನರಸಿಂಹ ಝರಣಿ ದೇಗುಲಕ್ಕೆ ಭಕ್ತರ ದಂಡೇ ಹರಿದು ಬಂದಿತು.</p>.<p>ಪಾಪನಾಶ ದೇಗುಲದಲ್ಲಿ ಸಹಸ್ರಾರು ಭಕ್ತರು ಶ್ರದ್ಧೆ, ಭಕ್ತಿಯಿಂದ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. ನಸುಕಿನ ಜಾವದಿಂದಲೇ ಭಕ್ತರು ದೇವಸ್ಥಾನದ ಕಡೆಗೆ ಮುಖ ಮಾಡಿದರು. ಹೆಚ್ಚಿನವರು ಬಸ್, ಕಾರು, ಜೀಪ್, ಬೈಕ್, ಆಟೊಗಳಲ್ಲಿ ದೇವಸ್ಥಾನಕ್ಕೆ ಬಂದರೆ, ಕೆಲವರು ಕಾಲ್ನಡಿಗೆ ಮೂಲಕ ಆಗಮಿಸಿ ಹರಕೆ ತೀರಿಸಿದರು.</p>.<p>ದೇಗುಲದ ಆವರಣದ ಪುಷ್ಕರಣೆಯಲ್ಲಿ ಮಹಿಳೆಯರು, ಮಕ್ಕಳು ಸ್ನಾನ ಮಾಡಿದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶಿವಲಿಂಗಕ್ಕೆ ಬಿಲ್ವ ಪತ್ರಿ, ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ಕೃತಾರ್ಥರಾದರು.<br />ಬೆಳಿಗ್ಗೆಯಿಂದ ಸಂಜೆಯವರೆಗೂ ದೇವಸ್ಥಾನದ ಪರಿಸರದಲ್ಲಿ ಭಕ್ತ ಸಮೂಹ ಕಂಡು ಬಂದಿತು. ಓಂನಮ ಶಿವಾಯ ಜಪ ನಿರಂತರ ಮೊಳಗಿತು.</p>.<p>ಅನೇಕರು ಭಕ್ತರಿಗಾಗಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದರು. ಶಿರಾ, ಬಾಳೆಹಣ್ಣನ್ನು ಕೂಡ ವಿತರಿಸಿದರು. ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭಿಕ್ಷುಕರು, ರೋಗಿಗಳಿಗೆ ಭಕ್ತರು ದಾನ ಮಾಡಿದರು.</p>.<p>ತಾತ್ಕಾಲಿಕ ಕಾಯಿ, ಕರ್ಪೂರ, ದೇವರ ಫೊಟೊಗಳು, ವಿಗ್ರಹ, ವಿಭೂತಿ, ಬೆಂಡು ಬತಾಸು, ತಿನಿಸುಗಳ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಆಟಿಕೆಗಳ ಅಂಗಡಿಗಳಲ್ಲಿ ವಿವಿಧ ಆಟಿಕೆಗಳನ್ನು ಖರೀದಿಸಲು ಚಿಣ್ಣರು ಮುಗಿ ಬಿದ್ದರು.</p>.<p>ರೈಲು, ಬಸ್, ಕಾರು, ಜೀಪು, ಬಲೂನ್, ಕನ್ನಡಕ, ತುತ್ತೂರಿ, ಬುಗರಿ ಮೊದಲಾದ ಆಟಿಕೆಗಳು ಮಕ್ಕಳ ಚಿತ್ತವನ್ನು ತಮ್ಮತ್ತ ಸೆಳೆದವು. ಮಕ್ಕಳು ತಮಗೆ ಇಷ್ಟವಾದ ಆಟಿಕೆ ಖರೀದಿಸಿ ಸಂಭ್ರಮಿಸಿದರು.</p>.<p>ನರಸಿಂಹ ಝರಣಿ: ನಗರದ ಇನ್ನೊಂದು ಐತಿಹಾಸಿಕ ದೇವಸ್ಥಾನದ ಆಗಿರುವ ನರಸಿಂಹ ಝರಣಿಯಲ್ಲೂ ಅಸಂಖ್ಯಾತರ ಭಕ್ತರು ದೇವರ ದರ್ಶನ ಪಡೆದರು.</p>.<p>ನಗರ, ಜಿಲ್ಲೆ, ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ ಭಕ್ತರು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿ ಭಾವದಿಂದ ಪಾಲ್ಗೊಂಡರು.</p>.<p>ದೇವಸ್ಥಾನದ ಪುಷ್ಕರಣೆಯಲ್ಲಿ ಸ್ನಾನ ಮಾಡಿದ ನಂತರ ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ಅನ್ನ ಪ್ರಸಾದ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>