‘ಕೌಟುಂಬಿಕ ಕಾರ್ಯಕ್ರಮ, ಸರ್ಕಾರಿ ಕಚೇರಿಯಲ್ಲಿ ಸಭೆ, ಕಾರ್ಯಾಗಾರ ಇದ್ದರೆ ನಮ್ಮ ಅಂಗಡಿಯಿಂದಲೇ ಉಪಾಹಾರ ಒಯ್ಯುತ್ತಾರೆ. ಗುಣಮಟ್ಟ ಇರುವ ಕಾರಣ ಆರೋಗ್ಯ ಇಲಾಖೆಯ ಸಿಬ್ಬಂದಿ ನಮ್ಮ ಅಂಗಡಿಯ ಉಪಾಹಾರವನ್ನು ಹೆಚ್ಚು ಇಷ್ಟಪಡುತ್ತಾರೆ. ದಿನವಿಡೀ ದೋಸೆಯನ್ನೇ ಮಾಡುವುದಿಲ್ಲ. ಅರ್ಧದಿನ ಮಾತ್ರ ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ. ದೋಸೆ ಹಿಟ್ಟು ಮುಗಿದ ಮೇಲೆ ನಿತ್ಯ ಸಂಜೆ ಮತ್ತೆ ನಾಳಿನ ತಯಾರಿ ನಡೆಸುತ್ತೇವೆ. ಹಣಕ್ಕೆ ಬೆನ್ನು ಹತ್ತಿದರೆ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಕಡಿಮೆ ಮಾಡಿದರೂ ಚೆನ್ನಾಗಿ ಮಾಡುತ್ತೇವೆ’ ಎಂದು ಹೆಮ್ಮೆಯಿಂದ ವಿವರಿಸುತ್ತಾರೆ.