<p>ರಸೂಲಾಬಾದ್(ಜನವಾಡ): ಬೀದರ್ ತಾಲ್ಲೂಕಿನ ಪುಟ್ಟ ಗ್ರಾಮ ರಸೂಲಾಬಾದ್ನ ಬೀದಿ ದೀಪಗಳ ಬಿಲ್ ಸೊನ್ನೆಯಾಗಿದೆ. ಪಂಚಾಯಿತಿ ಮೇಲಿದ್ದ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಹೊರೆ ಇಳಿದಿದೆ. ಗ್ರಾಮದಲ್ಲಿ ಆಗಾಗ ಆಗುತ್ತಿದ್ದ ವಿದ್ಯುತ್ ಕಡಿತದ ಸಮಸ್ಯೆಗೂ ಮುಕ್ತಿ ದೊರೆತಿದೆ.</p>.<p>ಗ್ರಾಮದಲ್ಲಿ ಅಮೃತ ಯೋಜನೆಯಡಿ ಅಳವಡಿಸಿದ ಬೀದಿ ದೀಪಗಳು ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿವೆ. ಮಾಳೆಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ 50 ಮನೆಗಳಿವೆ. ಜನಸಂಖ್ಯೆ 250 ಇದೆ. ಹಿಂದೆ ಗ್ರಾಮದಲ್ಲಿ ಉರಿಯುತ್ತಿದ್ದ ಬೀದಿ ದೀಪಗಳಿಗೆ ಗ್ರಾಮ ಪಂಚಾಯಿತಿ ಜೆಸ್ಕಾಂಗೆ ಮಾಸಿಕ ₹20 ಸಾವಿರ ಬಿಲ್ ಪಾವತಿಸುತ್ತಿತ್ತು. ಸೋಲಾರ್ ದೀಪಗಳಿಂದ ವಿದ್ಯುತ್ ಬಿಲ್ ಭರಿಸುವ ತಾಪತ್ರಯ ತಪ್ಪಿದೆ.</p>.<p>ಅಮೃತ ಯೋಜನೆಯಡಿ ಗ್ರಾಮದಲ್ಲಿ ಹೊಸ ಕಂಬಗಳೊಂದಿಗೆ ಒಟ್ಟು 24 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. <br /> ದೀಪಗಳು ರಾತ್ರಿ ಹೊತ್ತು ಉರಿಯುತ್ತವೆ. ಬೆಳಗಾಗುತ್ತಲೇ ತಾನಾಗಿಯೇ ಬಂದ್ ಆಗುತ್ತವೆ. ರಾತ್ರಿ ಗಾಳಿ, ಮಳೆ ಸುರಿದರೂ ನಿರಂತರ ಬೆಳಗುತ್ತವೆ.</p>.<p>‘ಗ್ರಾಮ ಪಂಚಾಯಿತಿಗೆ ಅಮೃತ ಯೋಜನೆಯಡಿ ಸೋಲಾರ್ ದೀಪಗಳ ಅಳವಡಿಕೆಗೆ ₹4 ಲಕ್ಷ ಅನುದಾನ ಬಂದಿತ್ತು. ಅದರಲ್ಲಿ ಎರಡು ವರ್ಷಗಳ ಹಿಂದೆ ರಸೂಲಾಬಾದ್ನಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ’ ಎಂದು ತಿಳಿಸುತ್ತಾರೆ ಮಾಳೆಗಾಂವ್ ಪಿಡಿಒ ಅನಿಲಕುಮಾರ ಚಿಟ್ಟಾ.</p>.<p>‘ಗ್ರಾಮದ ಬೀದಿಗಳಲ್ಲಿ ಸೋಲಾರ್ ದೀಪ ಅಳವಡಿಸಿದ ನಂತರ ಜೆಸ್ಕಾಂನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಹೀಗಾಗಿ ಪ್ರತಿ ತಿಂಗಳು ರೂ. 20 ಸಾವಿರದಂತೆ ಎರಡು ವರ್ಷಗಳಲ್ಲಿ ಪಂಚಾಯಿತಿಗೆ ರೂ. 4.80 ಲಕ್ಷ ವಿದ್ಯುತ್ ಬಿಲ್ ಉಳಿತಾಯವಾಗಿದೆ’ ಎಂದು ಹೇಳುತ್ತಾರೆ.</p>.<p>‘ಜೆಸ್ಕಾಂ ದೀಪಗಳು ಮಳೆ, ಗಾಳಿಗೆ ಹಾಳಾದರೆ ಬದಲಿಸಬೇಕಾಗುತ್ತಿತ್ತು. ಅದಕ್ಕೆ ಸಮಯ ಹಿಡಿಯುತ್ತಿತ್ತು. ವರ್ಷದಲ್ಲಿ ಎರಡು ಬಾರಿ ನಿರ್ವಹಣೆ ಮಾಡಬೇಕಾಗಿತ್ತು. ಸೋಲಾರ್ ದೀಪಗಳಿಗೆ ಆ ಸಮಸ್ಯೆ ಇಲ್ಲ’ ಎಂದು ತಿಳಿಸುತ್ತಾರೆ.</p>.<p>‘ಸೋಲಾರ್ ದೀಪಗಳು ಆಟೊಮೆಟಿಕ್ ಆಗಿ ಆನ್ ಮತ್ತು ಆಫ್ ಆಗುತ್ತವೆ. ನಿತ್ಯ ಸಂಜೆ 6.45ಕ್ಕೆ ಬೆಳಗಲು ಆರಂಭಿಸುತ್ತವೆ. ಬೆಳಿಗ್ಗೆ 6ಕ್ಕೆ ಬಂದ್ ಆಗುತ್ತವೆ. ಗುತ್ತಿಗೆದಾರರ ಐದು ವರ್ಷಗಳ ನಿರ್ವಹಣೆ ಅವಧಿ ಇದೆ. ಈವರೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ’ ಎಂದು ಹೇಳುತ್ತಾರೆ.</p>.<p>‘ಸೋಲಾರ್ ದೀಪಗಳಿಂದ ಉಳಿತಾಯ ಆಗುವ ವಿದ್ಯುತ್ ಬಿಲ್ ಹಣದಿಂದ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಿದೆ’ ಎಂದು ತಿಳಿಸುತ್ತಾರೆ.</p>.<p>‘ಅಮೃತ ಯೋಜನೆ ಅನುದಾನ ಗ್ರಾಮದಲ್ಲಿ ಸದ್ಬಳಕೆಯಾಗಿದೆ. ಸೋಲಾರ್ ಬೀದಿ ದೀಪಗಳಿಂದ ಗ್ರಾಮದಲ್ಲಿ ರಾತ್ರಿ ಸತತ ಬೆಳಕಿರುತ್ತದೆ. ಬಿರುಗಾಳಿ, ಮಳೆಯಲ್ಲೂ ಬೀದಿ ದೀಪಗಳು ಉರಿಯುತ್ತವೆ. ಅವಘಡಗಳ ಭಯವಿಲ್ಲ’ ಎಂದು ಹೇಳುತ್ತಾರೆ. ಗ್ರಾಮದ ಪ್ರಭು ಟೇಕಮಳೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಸೂಲಾಬಾದ್(ಜನವಾಡ): ಬೀದರ್ ತಾಲ್ಲೂಕಿನ ಪುಟ್ಟ ಗ್ರಾಮ ರಸೂಲಾಬಾದ್ನ ಬೀದಿ ದೀಪಗಳ ಬಿಲ್ ಸೊನ್ನೆಯಾಗಿದೆ. ಪಂಚಾಯಿತಿ ಮೇಲಿದ್ದ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಹೊರೆ ಇಳಿದಿದೆ. ಗ್ರಾಮದಲ್ಲಿ ಆಗಾಗ ಆಗುತ್ತಿದ್ದ ವಿದ್ಯುತ್ ಕಡಿತದ ಸಮಸ್ಯೆಗೂ ಮುಕ್ತಿ ದೊರೆತಿದೆ.</p>.<p>ಗ್ರಾಮದಲ್ಲಿ ಅಮೃತ ಯೋಜನೆಯಡಿ ಅಳವಡಿಸಿದ ಬೀದಿ ದೀಪಗಳು ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿವೆ. ಮಾಳೆಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ 50 ಮನೆಗಳಿವೆ. ಜನಸಂಖ್ಯೆ 250 ಇದೆ. ಹಿಂದೆ ಗ್ರಾಮದಲ್ಲಿ ಉರಿಯುತ್ತಿದ್ದ ಬೀದಿ ದೀಪಗಳಿಗೆ ಗ್ರಾಮ ಪಂಚಾಯಿತಿ ಜೆಸ್ಕಾಂಗೆ ಮಾಸಿಕ ₹20 ಸಾವಿರ ಬಿಲ್ ಪಾವತಿಸುತ್ತಿತ್ತು. ಸೋಲಾರ್ ದೀಪಗಳಿಂದ ವಿದ್ಯುತ್ ಬಿಲ್ ಭರಿಸುವ ತಾಪತ್ರಯ ತಪ್ಪಿದೆ.</p>.<p>ಅಮೃತ ಯೋಜನೆಯಡಿ ಗ್ರಾಮದಲ್ಲಿ ಹೊಸ ಕಂಬಗಳೊಂದಿಗೆ ಒಟ್ಟು 24 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. <br /> ದೀಪಗಳು ರಾತ್ರಿ ಹೊತ್ತು ಉರಿಯುತ್ತವೆ. ಬೆಳಗಾಗುತ್ತಲೇ ತಾನಾಗಿಯೇ ಬಂದ್ ಆಗುತ್ತವೆ. ರಾತ್ರಿ ಗಾಳಿ, ಮಳೆ ಸುರಿದರೂ ನಿರಂತರ ಬೆಳಗುತ್ತವೆ.</p>.<p>‘ಗ್ರಾಮ ಪಂಚಾಯಿತಿಗೆ ಅಮೃತ ಯೋಜನೆಯಡಿ ಸೋಲಾರ್ ದೀಪಗಳ ಅಳವಡಿಕೆಗೆ ₹4 ಲಕ್ಷ ಅನುದಾನ ಬಂದಿತ್ತು. ಅದರಲ್ಲಿ ಎರಡು ವರ್ಷಗಳ ಹಿಂದೆ ರಸೂಲಾಬಾದ್ನಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ’ ಎಂದು ತಿಳಿಸುತ್ತಾರೆ ಮಾಳೆಗಾಂವ್ ಪಿಡಿಒ ಅನಿಲಕುಮಾರ ಚಿಟ್ಟಾ.</p>.<p>‘ಗ್ರಾಮದ ಬೀದಿಗಳಲ್ಲಿ ಸೋಲಾರ್ ದೀಪ ಅಳವಡಿಸಿದ ನಂತರ ಜೆಸ್ಕಾಂನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಹೀಗಾಗಿ ಪ್ರತಿ ತಿಂಗಳು ರೂ. 20 ಸಾವಿರದಂತೆ ಎರಡು ವರ್ಷಗಳಲ್ಲಿ ಪಂಚಾಯಿತಿಗೆ ರೂ. 4.80 ಲಕ್ಷ ವಿದ್ಯುತ್ ಬಿಲ್ ಉಳಿತಾಯವಾಗಿದೆ’ ಎಂದು ಹೇಳುತ್ತಾರೆ.</p>.<p>‘ಜೆಸ್ಕಾಂ ದೀಪಗಳು ಮಳೆ, ಗಾಳಿಗೆ ಹಾಳಾದರೆ ಬದಲಿಸಬೇಕಾಗುತ್ತಿತ್ತು. ಅದಕ್ಕೆ ಸಮಯ ಹಿಡಿಯುತ್ತಿತ್ತು. ವರ್ಷದಲ್ಲಿ ಎರಡು ಬಾರಿ ನಿರ್ವಹಣೆ ಮಾಡಬೇಕಾಗಿತ್ತು. ಸೋಲಾರ್ ದೀಪಗಳಿಗೆ ಆ ಸಮಸ್ಯೆ ಇಲ್ಲ’ ಎಂದು ತಿಳಿಸುತ್ತಾರೆ.</p>.<p>‘ಸೋಲಾರ್ ದೀಪಗಳು ಆಟೊಮೆಟಿಕ್ ಆಗಿ ಆನ್ ಮತ್ತು ಆಫ್ ಆಗುತ್ತವೆ. ನಿತ್ಯ ಸಂಜೆ 6.45ಕ್ಕೆ ಬೆಳಗಲು ಆರಂಭಿಸುತ್ತವೆ. ಬೆಳಿಗ್ಗೆ 6ಕ್ಕೆ ಬಂದ್ ಆಗುತ್ತವೆ. ಗುತ್ತಿಗೆದಾರರ ಐದು ವರ್ಷಗಳ ನಿರ್ವಹಣೆ ಅವಧಿ ಇದೆ. ಈವರೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ’ ಎಂದು ಹೇಳುತ್ತಾರೆ.</p>.<p>‘ಸೋಲಾರ್ ದೀಪಗಳಿಂದ ಉಳಿತಾಯ ಆಗುವ ವಿದ್ಯುತ್ ಬಿಲ್ ಹಣದಿಂದ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಿದೆ’ ಎಂದು ತಿಳಿಸುತ್ತಾರೆ.</p>.<p>‘ಅಮೃತ ಯೋಜನೆ ಅನುದಾನ ಗ್ರಾಮದಲ್ಲಿ ಸದ್ಬಳಕೆಯಾಗಿದೆ. ಸೋಲಾರ್ ಬೀದಿ ದೀಪಗಳಿಂದ ಗ್ರಾಮದಲ್ಲಿ ರಾತ್ರಿ ಸತತ ಬೆಳಕಿರುತ್ತದೆ. ಬಿರುಗಾಳಿ, ಮಳೆಯಲ್ಲೂ ಬೀದಿ ದೀಪಗಳು ಉರಿಯುತ್ತವೆ. ಅವಘಡಗಳ ಭಯವಿಲ್ಲ’ ಎಂದು ಹೇಳುತ್ತಾರೆ. ಗ್ರಾಮದ ಪ್ರಭು ಟೇಕಮಳೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>