<p><strong>ಕಮಲನಗರ: </strong>‘ವಿದ್ಯಾರ್ಥಿಗಳು ಸಮಾಜ ಗುರುತಿಸುವಂಥ ಸಾಧನೆ ಮಾಡಬೇಕು’ ಎಂದು ಪಿಯು ಕಾಲೇಜು ಪ್ರಾಂಶುಪಾಲ ಶಿವಾಜಿ.ಆರ್.ಎಚ್ ಸಲಹೆ ನೀಡಿದರು.</p>.<p>ಪಟ್ಟಣದ ಶಾಂತಿವರ್ಧಕ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಪಾಲಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಾಕಷ್ಟು ಪ್ರಯತ್ನಪಡುತ್ತಾರೆ. ಹೀಗಾಗಿ ಮಕ್ಕಳು ಪೋಷಕರ ಆಶಯ ಈಡೇರಿಕೆಗೆ ಶ್ರಮಿಸಬೇಕು ಎಂದರು.</p>.<p>ಆಡಳಿತಾಧಿಕಾರಿ ವಿವೇಕಾನಂದ ಜೋಶಿ ಮಾತನಾಡಿ,‘ಆತ್ಮವಿಶ್ವಾಸದಿಂದ ಮಾತ್ರ ಜೀವನದಲ್ಲಿ ಉತ್ತುಂಗದ ಸಾಧನೆ ಮಾಡಲು ಸಾಧ್ಯ’ ಎಂದು ಹೇಳಿದರು.</p>.<p>ಶಾಲೆಯ ಮುಖ್ಯಶಿಕ್ಷಕ ಎಂ.ಎನ್.ಬಿಲಗುಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಮೇಲ್ವಿಚಾರಕ ಪ್ರಕಾಶ ಮಾನಕರಿ, ವಿಶ್ವನಾಥ ಡೋಣಗಾಪುರೆ, ರಾಜಕುಮಾರ.ಎಂ,ರಾಂಪುರೆ, ಸತೀಶ ಮಟಕೆ, ರೇಖಾ ಕರಕರೆ, ವಿಜಯಲಕ್ಷ್ಮೀ ಕೋಟೆ, ಜ್ಞಾನೋಬಾ ಭೂರೆ, ದತ್ತು ಸೂರ್ಯವಂಶಿ, ಜಯಂತಿ ಮಂಗಳೂರೆ, ಚಂದ್ರಕಾಂತ ಭೈರಪ್ಪ ಹಾಗೂ ಮಕ್ಕಳು ಇದ್ದರು.</p>.<p>ಶಿಕ್ಷಕಿ ಸವಿತಾ ಬಿರಾದಾರ ನಿರೂಪಿಸಿದರು. ರಾಮೇಶ್ವರ ಬಿರಾದಾರ ಸ್ವಾಗತಿಸಿದರು. ರೇಖಾ ಕರಕರೆ ವಂದಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಕಮಲನಗರ: </strong>‘ವಿದ್ಯಾರ್ಥಿಗಳು ಸಮಾಜ ಗುರುತಿಸುವಂಥ ಸಾಧನೆ ಮಾಡಬೇಕು’ ಎಂದು ಪಿಯು ಕಾಲೇಜು ಪ್ರಾಂಶುಪಾಲ ಶಿವಾಜಿ.ಆರ್.ಎಚ್ ಸಲಹೆ ನೀಡಿದರು.</p>.<p>ಪಟ್ಟಣದ ಶಾಂತಿವರ್ಧಕ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಪಾಲಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಾಕಷ್ಟು ಪ್ರಯತ್ನಪಡುತ್ತಾರೆ. ಹೀಗಾಗಿ ಮಕ್ಕಳು ಪೋಷಕರ ಆಶಯ ಈಡೇರಿಕೆಗೆ ಶ್ರಮಿಸಬೇಕು ಎಂದರು.</p>.<p>ಆಡಳಿತಾಧಿಕಾರಿ ವಿವೇಕಾನಂದ ಜೋಶಿ ಮಾತನಾಡಿ,‘ಆತ್ಮವಿಶ್ವಾಸದಿಂದ ಮಾತ್ರ ಜೀವನದಲ್ಲಿ ಉತ್ತುಂಗದ ಸಾಧನೆ ಮಾಡಲು ಸಾಧ್ಯ’ ಎಂದು ಹೇಳಿದರು.</p>.<p>ಶಾಲೆಯ ಮುಖ್ಯಶಿಕ್ಷಕ ಎಂ.ಎನ್.ಬಿಲಗುಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಮೇಲ್ವಿಚಾರಕ ಪ್ರಕಾಶ ಮಾನಕರಿ, ವಿಶ್ವನಾಥ ಡೋಣಗಾಪುರೆ, ರಾಜಕುಮಾರ.ಎಂ,ರಾಂಪುರೆ, ಸತೀಶ ಮಟಕೆ, ರೇಖಾ ಕರಕರೆ, ವಿಜಯಲಕ್ಷ್ಮೀ ಕೋಟೆ, ಜ್ಞಾನೋಬಾ ಭೂರೆ, ದತ್ತು ಸೂರ್ಯವಂಶಿ, ಜಯಂತಿ ಮಂಗಳೂರೆ, ಚಂದ್ರಕಾಂತ ಭೈರಪ್ಪ ಹಾಗೂ ಮಕ್ಕಳು ಇದ್ದರು.</p>.<p>ಶಿಕ್ಷಕಿ ಸವಿತಾ ಬಿರಾದಾರ ನಿರೂಪಿಸಿದರು. ರಾಮೇಶ್ವರ ಬಿರಾದಾರ ಸ್ವಾಗತಿಸಿದರು. ರೇಖಾ ಕರಕರೆ ವಂದಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>