‘ಸಮಗ್ರ ಸಹಕಾರ ಕ್ಷೇತ್ರದ ಅನೇಕ ಆದಾಯ ತೆರಿಗೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೌಹಾರ್ದ ಸಹಕಾರಿಯು ರಾಷ್ಟ್ರಮಟ್ಟದ ಸಂಸ್ಥೆಯಾದ ಸಹಕಾರ ಭಾರತಿಯೊಂದಿಗೆ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವರಿಗೆ ಮನವಿಯನ್ನೂ ಸಲ್ಲಿಸಲಾಗಿದೆ’ ಎಂದು ತಿಳಿಸಿದರು. ಜಿಲ್ಲಾ ಸೌಹಾರ್ದ ಸಂಯುಕ್ತ ಸಹಕಾರಿಯ ಉಪಾಧ್ಯಕ್ಷ ಸಂಜೀವ ಕುಮಾರ ಪಾಟೀಲ, ನಿರ್ದೇಶಕರಾದ ಜಗನ್ನಾಥ ಕರಂಜೆ, ನಂದಾ ವಿವೇಕಾನಂದ, ಶ್ರೀಕಾಂತ ಸ್ವಾಮಿ, ಸಂಯೋಜಕ ವೀರಶೆಟ್ಟಿ ಕಾಮಣ್ಣ, ಅಮೃತ ಹೊಸಮನಿ ಸುದ್ದಿಗೋಷ್ಠಿಯಲ್ಲಿ ಇದ್ದರು.