ತೆರಿಗೆ ಪಾವತಿಸುವ ಸಂಬಂಧ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಹೀಗಿದ್ದರೂ ಮಾಲೀಕರು ತೆರಿಗೆ ಕಟ್ಟಿರಲಿಲ್ಲ. ಹೀಗಾಗಿ ಖುದ್ದು ಸಿಬ್ಬಂದಿ ವರ್ಗದವರೊಂದಿಗೆ ಸ್ಥಳಕ್ಕೆ ಬಂದು ಬೀಗ ಹಾಕಿಸಿದ್ದಾರೆ. ತೆರಿಗೆ ಪಾವತಿಸುವುದಾಗಿ ಕೆಲವರು ಮೌಖಿಕವಾಗಿ ಹೇಳಿದರು. ಆದರೆ, ಅದಕ್ಕೊಪ್ಪದ ಪೌರಾಯುಕ್ತರು, ಪಾವತಿಸಿದ ರಸೀದಿ ತೋರಿಸಿದ ನಂತರವೇ ಮಳಿಗೆಗಳ ಬೀಗ ಹಿಂತಿರುಗಿಸಲಾಗುವುದು ಎಂದು ಹೇಳಿ ಕಳಿಸಿದರು.