‘ನನ್ನ ತಂದೆ, ತಾಯಿ, ನನಗೆ ಹಾಗೂ ನನ್ನ ಪತ್ನಿಗೆ ಕೋವಿಡ್ ಸೋಂಕು ತಗುಲಿತು. ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದೆವು. ಆದರೆ, ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಬಡ ಸೋಂಕಿತರು ಹಾಗೂ ಅವರ ಕುಟುಂಬದ ಸದಸ್ಯರ ಸಂಕಷ್ಟ ಮನ ಕಲುಕಿತು. ಬಡ ಸೋಂಕಿತರಿಗೆ ನೆರವಾಗಲು ನಿರ್ಧರಿಸಿ, ಉಚಿತ ಆಹಾರ ಸೇವೆ ಆರಂಭಿಸಿದ್ದೇವೆ’ ಎಂದು ಆಕಾಶ ಪಾಟೀಲ ತಿಳಿಸಿದರು.