<p><strong>ಹುಲಸೂರ</strong>: ಸಮೀಪದ ಭಾಲ್ಕಿ ತಾಲ್ಲೂಕಿನ ಅಳವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನ ಬೇಸತ್ತು ಹೋಗಿದ್ದಾರೆ.</p><p>ರಾತ್ರಿ ಹೊಲಗಳಲ್ಲಿ ಕಟ್ಟಿರುವ ಜಾನುವಾರು, ಸೋಲಾರ ಬೇಲಿ ಬ್ಯಾಟರಿ, ಪ್ಲೇಟ್, ಟ್ರ್ಯಾಕ್ಟರ್ನ ಟ್ರಾಲಿ, ಪಂಪಸೆಟ್ಗಳನ್ನು ಕದ್ದೊಯ್ಯುತ್ತಿದ್ದು, ರೈತರಿಗೆ ಹಾನಿಯುಂಟು ಮಾಡುತ್ತಿದ್ದಾರೆ.</p><p>ಅಳವಾಯಿ ಗ್ರಾಮದ ರೋಹಿದಾಸ ಅಟೋಮೊಬೈಲ್ನಲ್ಲಿ ಮೊಬೈಲ್, ಗ್ರಾಮದಲ್ಲಿರುವ ಮಾಧವ ಕೊಠಮಾಳೆ ಹಾಗೂ ನರಸಿಂಗ ಶಿಂಧೆ ಎಂಬುವವರಿಗೆ ಸೇರಿದ ಎರಡೂ ದಾಬಾಗಳಲ್ಲಿ ಸುಮಾರು ₹1.80 ಲಕ್ಷ ಮೌಲ್ಯದ ಸಾಮಗ್ರಿ, ಎಲ್ಲಮವಾಡಿ ಗ್ರಾಮದ ಮಾಧವ ಪಿನಾಟೆ ಅವರ ಟ್ರ್ಯಾಕ್ಟರ್ನ ಟ್ರಾಲಿ, ದೇವಿದಾಸ ಗುರ್ಮೆ ಅವರ ಭಾವಿಯಲ್ಲಿನ ಮೋಟಾರ್, ಪ್ರಭಾಕರ ಪಾಂಚಾಳ ಅವರ ಕೇಬಲ್ ವೈಯರ್ ಸೇರಿ ಹಲವು ಮೌಲ್ಯದ ವಸ್ತುಗಳು ಕಳುವಾಗಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.</p>.<p>‘ಕೂಡಲೆ ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಬೇಕು. ರೈತರ ಜಾನುವಾರು, ಪಂಪಸೆಟ್ ಮತ್ತಿತರ ಪರಿಕರಗಳನ್ನು ಜಪ್ತಿ ಮಾಡಿ ರೈತರಿಗೆ ಮರಳಿಸಬೇಕು’ ಎಂದು ಅಳವಾಯಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ</strong>: ಸಮೀಪದ ಭಾಲ್ಕಿ ತಾಲ್ಲೂಕಿನ ಅಳವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನ ಬೇಸತ್ತು ಹೋಗಿದ್ದಾರೆ.</p><p>ರಾತ್ರಿ ಹೊಲಗಳಲ್ಲಿ ಕಟ್ಟಿರುವ ಜಾನುವಾರು, ಸೋಲಾರ ಬೇಲಿ ಬ್ಯಾಟರಿ, ಪ್ಲೇಟ್, ಟ್ರ್ಯಾಕ್ಟರ್ನ ಟ್ರಾಲಿ, ಪಂಪಸೆಟ್ಗಳನ್ನು ಕದ್ದೊಯ್ಯುತ್ತಿದ್ದು, ರೈತರಿಗೆ ಹಾನಿಯುಂಟು ಮಾಡುತ್ತಿದ್ದಾರೆ.</p><p>ಅಳವಾಯಿ ಗ್ರಾಮದ ರೋಹಿದಾಸ ಅಟೋಮೊಬೈಲ್ನಲ್ಲಿ ಮೊಬೈಲ್, ಗ್ರಾಮದಲ್ಲಿರುವ ಮಾಧವ ಕೊಠಮಾಳೆ ಹಾಗೂ ನರಸಿಂಗ ಶಿಂಧೆ ಎಂಬುವವರಿಗೆ ಸೇರಿದ ಎರಡೂ ದಾಬಾಗಳಲ್ಲಿ ಸುಮಾರು ₹1.80 ಲಕ್ಷ ಮೌಲ್ಯದ ಸಾಮಗ್ರಿ, ಎಲ್ಲಮವಾಡಿ ಗ್ರಾಮದ ಮಾಧವ ಪಿನಾಟೆ ಅವರ ಟ್ರ್ಯಾಕ್ಟರ್ನ ಟ್ರಾಲಿ, ದೇವಿದಾಸ ಗುರ್ಮೆ ಅವರ ಭಾವಿಯಲ್ಲಿನ ಮೋಟಾರ್, ಪ್ರಭಾಕರ ಪಾಂಚಾಳ ಅವರ ಕೇಬಲ್ ವೈಯರ್ ಸೇರಿ ಹಲವು ಮೌಲ್ಯದ ವಸ್ತುಗಳು ಕಳುವಾಗಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.</p>.<p>‘ಕೂಡಲೆ ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಬೇಕು. ರೈತರ ಜಾನುವಾರು, ಪಂಪಸೆಟ್ ಮತ್ತಿತರ ಪರಿಕರಗಳನ್ನು ಜಪ್ತಿ ಮಾಡಿ ರೈತರಿಗೆ ಮರಳಿಸಬೇಕು’ ಎಂದು ಅಳವಾಯಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>