ಬಸವಕಲ್ಯಾಣ: ತಾಲ್ಲೂಕಿನ ಶಿವಪುರದ ಮಲ್ಲಪ್ಪ ಕೋಟೆ ಎನ್ನುವವರ ಮನೆಯ ಪಕ್ಕದಲ್ಲಿ ಭಾನುವಾರ ಸಂಜೆ ಒಮ್ಮೇಲೆ ಮೂರು ಹಾವುಗಳು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ್ದವು.
ಈ ವಿಷಯ ಉಪ ಅರಣ್ಯ ಅಧಿಕಾರಿ ನಿಸಾರ ಮಣಿಯಾರಗೆ ತಿಳಿಸಿದಾಗ ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಉರಗ ತಜ್ಞ ಗನಿಸಾಹೇಬ್ ತಡೋಳಾ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಸಾಗಿಸಿದ್ದಾರೆ.
‘ಹಾವುಗಳು ವಿಷಕಾರಿ ಆಗಿರಲಿಲ್ಲ. ಸಮೀಪದ ನಾರಾಯಣಪುರ ಕೆರೆಯಿಂದ ಬಂದಿರುವ ಸಾಧ್ಯತೆ ಇದೆ’ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.