<p><strong>ಬಸವಕಲ್ಯಾಣ</strong>: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಾರ ಹುಣ್ಣಿಮೆಯನ್ನು ವಟ ಪೂರ್ಣಿಮೆ ಎಂದೂ ಆಚರಿಸುವ ಕಾರಣ ಒಂದೆಡೆ ಮಹಿಳೆಯರು ವಟ ವೃಕ್ಷಕ್ಕೆ ದಾರ ಕಟ್ಟಿ ಪೂಜಿಸುವ ಸಂಭ್ರಮ ಎದ್ದು ಕಂಡರೆ ಇನ್ನೊಂದೆಡೆ ರೈತಾಪಿ ಜನರು ಎತ್ತುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು.</p>.<p>ಪಂಚಾಂಗದ ಪ್ರಕಾರ ಹುಣ್ಣಿಮೆ ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಬೆಳಿಗ್ಗೆವರೆಗೆ ಇತ್ತು. ಆದ್ದರಿಂದ ಕೆಲವರು ಮಂಗಳವಾರ, ಇನ್ನುಳಿದವರು ಬುಧವಾರ ಪೂಜೆ ಸಲ್ಲಿಸಿದರು. ವಟ ವೃಕ್ಷ ಪೂಜೆಗೆ ಮಹಿಳೆಯರು ಹೆಚ್ಚಿನ ಆಸಕ್ತಿ ತೋರಿರುವುದು ಕಂಡು ಬಂತು.</p>.<p>ನವ ವಿವಾಹಿತೆಯರು, ವೃದ್ಧರು ಒಳಗೊಂಡು ಮನೆಯಲ್ಲಿನ ಬಹುತೇಕರು ಹೊಸ ಸೀರೆ ಉಟ್ಟುಕೊಂಡು ವಟ ವೃಕ್ಷಕ್ಕೆ ದಾರ ಸುತ್ತಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ಪತಿಯ ಸೌಖ್ಯ ಬಯಸಿ ನಡೆಸುವ ವಟ ವೃಕ್ಷದ ಪೂಜೆ ಮಹಾರಾಷ್ಟ್ರದಲ್ಲಿ ಹೆಚ್ಚಿತ್ತು. ಅಲ್ಲಿನ ಪ್ರಭಾವದಿಂದ ಈಗ ತಾಲ್ಲೂಕಿನಾದ್ಯಂತ ಈ ಪೂಜೆ ನಡೆಯುತ್ತಿದೆ.</p>.<p>ಕೊಹಿನೂರ, ಮಂಠಾಳ, ಮುಡಬಿ ಹೋಬಳಿಗಳ ವ್ಯಾಪ್ತಿಯಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಎತ್ತುಗಳ ಪೂಜೆಯೂ ನಡೆಯಿತು. ರೈತರು ಎತ್ತುಗಳ ಕೋಡುಗಳಿಗೆ ಬಣ್ಣ ಹಚ್ಚಿ ಕೋಡು ಬಳೆ ಹಾಕಿ ಕುಟುಂಬ ಸಮೇತರಾಗಿ ನೈವೇದ್ಯ ಅರ್ಪಿಸಿದರು. ನಂತರ ಪ್ರತಿಯೊಬ್ಬರ ಮನೆಯಲ್ಲಿ ಹೋಳಿಗೆ ಊಟ ಸವಿಯಲಾಯಿತು.</p>.<p>ಹಾರಕೂಡದಲ್ಲಿ ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಮೆರವಣಿಗೆ ಮತ್ತು ಕರಿ ಕಡಿಯುವ ಕಾರ್ಯಕ್ರಮ ನಡೆಯಿತು.</p>.<p>ಮಂಠಾಳ, ಅತ್ಲಾಪುರದಲ್ಲಿ ಎತ್ತುಗಳ ಮೆರವಣಿಗೆ ನಡೆಸಿ ಊರ ಅಗಸೆಯಲ್ಲಿ ತಳೀರು ತೋರಣಗಳಿಂದ ಸಿಂಗರಿಸಿದ ಕರಿ (ಹಗ್ಗ)ಯನ್ನು ಗ್ರಾಮದ ಮುಖಂಡರು ಕಡಿದರು. ಎಲ್ಲೆಡೆ ಸಂಭ್ರಮದ ವಾತಾವರಣವಿತ್ತು.<br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಾರ ಹುಣ್ಣಿಮೆಯನ್ನು ವಟ ಪೂರ್ಣಿಮೆ ಎಂದೂ ಆಚರಿಸುವ ಕಾರಣ ಒಂದೆಡೆ ಮಹಿಳೆಯರು ವಟ ವೃಕ್ಷಕ್ಕೆ ದಾರ ಕಟ್ಟಿ ಪೂಜಿಸುವ ಸಂಭ್ರಮ ಎದ್ದು ಕಂಡರೆ ಇನ್ನೊಂದೆಡೆ ರೈತಾಪಿ ಜನರು ಎತ್ತುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು.</p>.<p>ಪಂಚಾಂಗದ ಪ್ರಕಾರ ಹುಣ್ಣಿಮೆ ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಬೆಳಿಗ್ಗೆವರೆಗೆ ಇತ್ತು. ಆದ್ದರಿಂದ ಕೆಲವರು ಮಂಗಳವಾರ, ಇನ್ನುಳಿದವರು ಬುಧವಾರ ಪೂಜೆ ಸಲ್ಲಿಸಿದರು. ವಟ ವೃಕ್ಷ ಪೂಜೆಗೆ ಮಹಿಳೆಯರು ಹೆಚ್ಚಿನ ಆಸಕ್ತಿ ತೋರಿರುವುದು ಕಂಡು ಬಂತು.</p>.<p>ನವ ವಿವಾಹಿತೆಯರು, ವೃದ್ಧರು ಒಳಗೊಂಡು ಮನೆಯಲ್ಲಿನ ಬಹುತೇಕರು ಹೊಸ ಸೀರೆ ಉಟ್ಟುಕೊಂಡು ವಟ ವೃಕ್ಷಕ್ಕೆ ದಾರ ಸುತ್ತಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ಪತಿಯ ಸೌಖ್ಯ ಬಯಸಿ ನಡೆಸುವ ವಟ ವೃಕ್ಷದ ಪೂಜೆ ಮಹಾರಾಷ್ಟ್ರದಲ್ಲಿ ಹೆಚ್ಚಿತ್ತು. ಅಲ್ಲಿನ ಪ್ರಭಾವದಿಂದ ಈಗ ತಾಲ್ಲೂಕಿನಾದ್ಯಂತ ಈ ಪೂಜೆ ನಡೆಯುತ್ತಿದೆ.</p>.<p>ಕೊಹಿನೂರ, ಮಂಠಾಳ, ಮುಡಬಿ ಹೋಬಳಿಗಳ ವ್ಯಾಪ್ತಿಯಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಎತ್ತುಗಳ ಪೂಜೆಯೂ ನಡೆಯಿತು. ರೈತರು ಎತ್ತುಗಳ ಕೋಡುಗಳಿಗೆ ಬಣ್ಣ ಹಚ್ಚಿ ಕೋಡು ಬಳೆ ಹಾಕಿ ಕುಟುಂಬ ಸಮೇತರಾಗಿ ನೈವೇದ್ಯ ಅರ್ಪಿಸಿದರು. ನಂತರ ಪ್ರತಿಯೊಬ್ಬರ ಮನೆಯಲ್ಲಿ ಹೋಳಿಗೆ ಊಟ ಸವಿಯಲಾಯಿತು.</p>.<p>ಹಾರಕೂಡದಲ್ಲಿ ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಮೆರವಣಿಗೆ ಮತ್ತು ಕರಿ ಕಡಿಯುವ ಕಾರ್ಯಕ್ರಮ ನಡೆಯಿತು.</p>.<p>ಮಂಠಾಳ, ಅತ್ಲಾಪುರದಲ್ಲಿ ಎತ್ತುಗಳ ಮೆರವಣಿಗೆ ನಡೆಸಿ ಊರ ಅಗಸೆಯಲ್ಲಿ ತಳೀರು ತೋರಣಗಳಿಂದ ಸಿಂಗರಿಸಿದ ಕರಿ (ಹಗ್ಗ)ಯನ್ನು ಗ್ರಾಮದ ಮುಖಂಡರು ಕಡಿದರು. ಎಲ್ಲೆಡೆ ಸಂಭ್ರಮದ ವಾತಾವರಣವಿತ್ತು.<br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>