ಉಡಬಾಳದಿಂದ ಚಿಟಗುಪ್ಪ ಪಟ್ಟಣಕ್ಕೆ ಹೋಗಬೇಕಾದರೆ ಬಹಳ ಸಮಸ್ಯೆ ಆಗುತ್ತಿದೆ. ಯಾರೂ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲತ್ತಿ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ರಸ್ತೆ ದುರಸ್ತಿ ಮಾಡಿ ಅನಾಹುತ ತಪ್ಪಿಸಬೇಕು.
– ಭರತ್ ರೆಡ್ಡಿ, ನಿರ್ಣಾ ನಿವಾಸಿ
ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆ ಬಂದರೆ ನೀರು ನಿಂತು ತಗ್ಗು ಇರುವುದೇ ಗೊತ್ತಾಗುವುದಿಲ್ಲ. ಇದರಿಂದ ಬೀಳುವುದು ಖಚಿತ. ಎದುರು ಯಾರಾದರೂ ಬಂದರೆ ಮತ್ತಷ್ಟು ಸಮಸ್ಯೆ. ಬೇಗ ರಸ್ತೆ ದುರಸ್ತಿ ಮಾಡಬೇಕು.
– ಶಿವಕುಮಾರ, ವಾಹನ ಸವಾರ
ರಸ್ತೆ ಅಭಿವೃದ್ಧಿಗಾಗಿ ಮೇಲಧಿಕಾರಿಗಳಿಗೆ ಅನುದಾನದ ಪ್ರಸ್ತಾವ ಸಲ್ಲಿಸಲಾಗಿದೆ.