ಸದಸ್ಯರಾದ ಲಿಂಗರಾಜ, ಸುಧಾಕರ್, ಶಿವರಾಜ ಪಾಟೀಲ, ಕಿಶೋರಕುಮಾರ ಮಾತನಾಡಿ, ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಬೀಜ, ರಸಗೊಬ್ಬರ, ತಾಡಪತ್ರಿ ವಿತರಣೆಯಾಗಬೇಕು. ಕೃಷಿಹೊಂಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಬೇರೆ ಜಿಲ್ಲೆ, ರಾಜ್ಯಗಳಿಂದ ಪ್ರಯಾಣ ಮುಗಿಸಿ ಬಂದವರಿಗೆ ಗ್ರಾಮೀಣ ಭಾಗದ ಶಾಲಾ- ಕಾಲೇಜುಗಳಲ್ಲಿ ಕ್ವಾರಂಟೈನ್ ಮಾಡುವುದು ಬೇಡ. ಆನ್ಲೈನ್ ಶಿಕ್ಷಣ ಪದ್ದತಿ ಮಕ್ಕಳ ವರ್ತನೆ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ತಕ್ಷಣವೇ ನಿಲ್ಲಿಸಬೇಕು ಎಂದು ತಿಳಿಸಿದರು.