ಬೀದರ್: ಲಿಂಗಾಯತ ಮಹಾಮಠ ಹಾಗೂ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ವಚನ ವಿಜಯೋತ್ಸವ ಫೆಬ್ರುವರಿ 25, 26 ಹಾಗೂ 27 ರಂದು ನಡೆಯಲಿದೆ.
ಈ ವರ್ಷದ ವಚನ ವಿಜಯೋತ್ಸವವನ್ನು ಅತ್ಯಂತ ಸರಳವಾಗಿ ನೆರವೇರಿಸಲು ನಿರ್ಧರಿಸಲಾಗಿದೆ. ನಗರದ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣ ಹಾಗೂ ಗಂಗಾಂಬಿಕೆ ಅಕ್ಕ ಅವರ ನೇತೃತ್ವದಲ್ಲಿ ನಡೆಯಲಿದ್ದು, ಮೆರವಣಿಗೆಯನ್ನು ರದ್ದುಪಡಿಸಲಾಗಿದೆ.
ಶರಣರು ತಮ್ಮ-ತಮ್ಮ ಮನೆಗಳಲ್ಲೇ ಇಷ್ಟಲಿಂಗ ಯೋಗ, ಸಮಗ್ರ ಗುರುವಚನ ಪಾರಾಯಣ, ಧರ್ಮಗ್ರಂಥಕ್ಕೆ ಗೌರವಾರ್ಪಣೆ ಮಾಡಬೇಕು ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಿಳಿಸಿದ್ದಾರೆ.