ಮೆರವಣಿಗೆಯಲ್ಲಿ ಮಹಿಳೆಯರು ಲಂಬಾಣಿ ದಿರಿಸಿನಲ್ಲಿ ಕಂಗೊಳಿಸಿದರು
ಕುದುರೆಗಳ ಮೇಲೆ ಶರಣರ ವೇಷಧಾರಿಗಳ ಮೆರವಣಿಗೆ
ವಚನಗಳನ್ನು ರಕ್ಷಿಸಿದ ಅತ್ಯಂತ ಮಹತ್ವದ ದಿನವಿಂದು. ನಾವೆಲ್ಲರೂ ಲಿಂಗಾಯತ ಎನ್ನುವುದು ಮರೆಯಬಾರದು. ನಡೆ-ನುಡಿ ಒಂದಾಗಿರಬೇಕು. ವಿಶ್ವದೆಲ್ಲೆಡೆ ವಚನ ವಿಜಯೋತ್ಸವ ಆಚರಿಸುವ ದಿನ ಬರುತ್ತದೆ
–ಶಿವಾನಂದ ಸ್ವಾಮೀಜಿ ಪೀಠಾಧಿಪತಿ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠ
ಜಗ ಬದುಕಲಿ ಜನ ಬದುಕಲೆಂದು ಬಸವಾದಿ ಶರಣರು ಪ್ರಾಣತ್ಯಾಗ ಮಾಡಿ ವಚನ ಸಾಹಿತ್ಯವನ್ನು ರಚಿಸಿ ರಕ್ಷಿಸಿದ್ದಾರೆ. ಕಲ್ಯಾಣ ಕ್ರಾಂತಿಯ ಫಲವಾಗಿ ಸ್ವಾತಂತ್ರ್ಯತೆ ಸಮಾನತೆಗೆ ಬೆಲೆ ಬಂದಿದೆ
ಗಂಗಾಂಬಿಕಾ ಅಕ್ಕ ಅಧ್ಯಕ್ಷೆ ಬಸವ ಸೇವಾ ಪ್ರತಿಷ್ಠಾನ
ಬಸವತತ್ವ ಸಮಾನತೆ ಮಾನವೀಯತೆ ಮತ್ತು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಶಾಂತಿಯುತ ಮಾರ್ಗ ಧರ್ಮವಾಗಿದೆ
ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ಬಸವಕಲ್ಯಾಣ ಅನುಭವ ಮಂಟಪ
ಲಿಂಗಾಯತ ಎಂಬುದು ಜಾತಿಯಲ್ಲ ಅದೊಂದು ಧರ್ಮ. ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ. ಕಾಯಕ ಮೊದಲು ಎಂದು ಬೆವರಿಗೆ ಬೆಲೆ ಕೊಟ್ಟಿದ್ದು ವಚನ ಪರಂಪರೆ