ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇರ್ಡಾ ಜಲಾಶಯ ಒಳಹರಿವು ಹೆಚ್ಚಳ: ಎಚ್ಚರಿಕೆ

Published 31 ಜುಲೈ 2023, 16:02 IST
Last Updated 31 ಜುಲೈ 2023, 16:02 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಖೇರ್ಡಾ ಹತ್ತಿರದ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯದ ಒಳಹರಿವು ಹೆಚ್ಚಳಗೊಂಡಿದ್ದು ವೆಸ್ಟವೇರ್ ಮೂಲಕ ನೀರು ಹೊರ ಹೋಗುತ್ತಿದೆ. ಆದ್ದರಿಂದ ಸಮೀಪದ ಗ್ರಾಮಸ್ಥರು ಜಾಗೃತಿಯಿಂದ ಇರಬೇಕು ಎಂದು ಎಚ್ಚರಿಸಲಾಗಿದೆ.

ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪಿದೆ. ಆದ್ದರಿಂದ 930 ಕುಸೆಕ್‌ ನೀರು ಹೊರ ಹೋಗುತ್ತಿದೆ. ಈ ಕಾರಣ ಕಾಲುವೆ ಹಾಗೂ ನಾಲೆಯ ಸಮೀಪದ ಗ್ರಾಮಗಳಾದ ಖೇರ್ಡಾ, ಧನ್ನೂರ್ (ಆರ್), ಹಳ್ಳಿಖೇಡ್ (ಕೆ), ಕಿಣ್ಣಿಸಡಕ್, ಜಂಬಗಾ ಮತ್ತಿತರೆ ಗ್ರಾಮಗಳ ಜನರು ನಾಲೆ ದಾಟಬಾರದು. ಮಹಿಳೆಯರು ಬಟ್ಟೆಗಳನ್ನು ಸ್ವಚ್ಛಗೊಳಿಸಬಾರದು. ಜಾನುವಾರುಗಳಿಗೆ ನೀರಿನಲ್ಲಿ ಬಿಡಬಾರದು ಎಂದು ನೀರಾವರಿ ಇಲಾಖೆ ಜೆಇ ಚಂದ್ರಕಾಂತ ಕೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT