‘ನನ್ನ ಅಜ್ಜ ನಾಗೇಂದ್ರ ಘೋಡ್ಕೆ, ತಂದೆ ಪಂಢರಿನಾಥ ಘೋಡ್ಕೆ ಉತ್ತಮ ಹೆಸರು ಪಡೆದವರು. ಸಂತಪುರ ಅಭಿವೃದ್ಧಿ ಮತ್ತು ತಾಲ್ಲೂಕು ರಚನೆಗಾಗಿ ಹೋರಾಟ ಮಾಡಿದ್ದಾರೆ. ಅಂದಿನ ಪ್ರಧಾನಿ ವಾಜಪೇಯಿ ಅವರನ್ನೂ ಭೇಟಿ ಮಾಡಿದ್ದಾರೆ. ಊರಿಗೆ ಮೊರಾರ್ಜಿ ಶಾಲೆ ಮಂಜೂರಾಗಿರುವುದು ಗೊತ್ತಾಗಿ 6 ಎಕರೆ ಜಮೀನನ್ನು ಉಚಿತವಾಗಿ ಕೊಟ್ಟಿದ್ದಾರೆ. ಸಂತಪುರ ಬಸ್ ನಿಲ್ದಾಣಕ್ಕೆ ತಮ್ಮ ಗೆಳೆಯರೊಬ್ಬರ ಜಮೀನು ಕೊಡಿಸಿದ್ದಾರೆ. ಸಹಾಯ ಅರಸಿ ಬಂದ ಬಡವರಿಗೆ ಅವರು ಎಂದೂ ವಾಪಸ್ ಕಳುಹಿಸಿಲ್ಲ. ಹೀಗಾಗಿ ಜನ ಈಗಲೂ ಅವರನ್ನು ಸ್ಮರಿಸುತ್ತಾರೆ’ ಎಂದು ಸಾಯಿಕುಮಾರ ಘೋಡ್ಕೆ ಹೇಳುತ್ತಾರೆ.