ಈ ಸಂದರ್ಭದಲ್ಲಿ ಗ್ರಾಮಸ್ಥರು ಬೆಡಕುಂದಾ ಗ್ರಾಮದಲ್ಲಿ ಯೋಧ ರಾಮದಾಸ ಚಂದಾಪುರೆ ಅವರ ಸ್ಮಾರಕ ನಿರ್ಮಿಸಿಕೊಡಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿದರು. ಸಚಿವ ಪ್ರಭು ಚವಾಣ್ ಮಾತನಾಡಿ,‘ರಾಮದಾಸ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುವುದು. ನಿವೇಶನ ಒದಗಿಸಿದರೆ ಸ್ಮಾರಕ ನಿರ್ಮಿಸಲಾಗುವುದು. ಅವರ ಮಗುವಿನ ಶಿಕ್ಷಣ ಸೇರಿದಂತೆ ಇತರ ವೆಚ್ಚಗಳನ್ನು ಭರಿಸಲಾಗುವುದು’ ಎಂದು ಹೇಳಿದರು.