<p><strong>ಬೀದರ್:</strong> ನಗರ ಸ್ವಚ್ಚತೆಯ ದೃಷ್ಟಿಯಿಂದ ನಗರಸಭೆಗೆ ಮಳೆಗಾಲ ಪಾಠವಾಗಬೇಕು. ಆದರೆ, ಪ್ರತಿ ಮಳೆಗಾಲ ಬಂದಾಗಲೂ ನಗರದ ಮಟ್ಟಿಗೆ ಪರಿಸ್ಥಿತಿ ಬದಲಾಗುವುದಿಲ್ಲ.<br /> <br /> ತ್ಯಾಜ್ಯ ವಿಲೇವಾರಿಯ ದೃಷ್ಟಿಯಿಂದ ಮೊದಲೇ ಅವ್ಯವಸ್ಥೆಯ ಕೂಪವಾಗಿರುವ ನಗರದಲ್ಲಿ ಮಳೆಯ ನೀರು ಸೇರಿ ನಗರ ಸಾರ್ವಜನಿಕರಿಗೆ ಕಿರಿಕಿರಿಯ ಅನುಭವ ನೀಡುತ್ತಿದೆ.<br /> <br /> ಒಂದೆಡೆ ಸುರಿವ ಮಳೆಯ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ಅಲ್ಲಿಯೇ ನಿಂತು ಪಾದಚಾರಿಗಳು, ವಾಹನಗಳ ಸಂಚಾರಕ್ಕೂ ಕಿರಿಕಿರಿ ಎನಿಸಿದರೆ; ಇದಕ್ಕೂ ದೊಡ್ಡದಾಗಿ ವಿಲೇವಾರಿ ಯಾಗದ ತ್ಯಾಜ್ಯ ಕೊಳೆತು ಗಬ್ಬು ನಾರುವ ಸ್ಥಿತಿ ಬರುತ್ತಿದೆ.<br /> <br /> ನಗರದ ಬಸವೇಶ್ವರ ವೃತ್ತ, ರೋಟರಿ ವೃತ್ತದ ಆವರಣ, ಗುಂಪಾ ರಸ್ತೆ ಹೀಗೆ ಎಲ್ಲ ಕಡೆಯೂ ಕಾಣ ಬರುವ ಚಿತ್ರಣ. ಸ್ವಚ್ಛತೆ ಕಾಣದ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು, ದಿನೇ ದಿನೇ ಹೆಚ್ಚುವರಿ ಕಸ ಸೇರ್ಪಡೆಯಾಗುತ್ತಿದೆ. ಸುರಿದ ನೀರು ಹರಿದು ಹೋಗುವ ಸಾಧ್ಯತೆ ಇಲ್ಲ.<br /> <br /> ಒಂದೆಡೆ, ಡೆಂಗೇ ಜ್ವರ ಮತ್ತು ಸಾಂಕ್ರಾಮಿಕ ರೋಗಗಳ ಭೀತಿಯ ಹಿನ್ನೆಲೆಯಲ್ಲಿ ನೈರ್ಮಲ್ಯದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕೋರುತ್ತಾರೆ.<br /> <br /> ಇನ್ನೊಂದೆಡೆ ನೈರ್ಮಲ್ಯ ರಕ್ಷಣೆಯಲ್ಲಿ ಪ್ರದಾನ ಪಾತ್ರ ವಹಿಸಬೇಕಾದ ಸ್ಥಳೀಯ ಆಡಳಿತವಾದ ನಗರಸಭೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ.<br /> <br /> ಕಸ ಸಾಗಣೆ ಕುರಿತಂತೆ ನಗರಸಭೆಯ ನಿರ್ಲಕ್ಷ್ಯವನ್ನು ಗಮನಿಸಬೇಕಾದರೆ ನಗರಸಭೆ ಆವರಣಕ್ಕೆ ಭೇಟಿ ನೀಡಬೇಕು.<br /> ಸುಸ್ಥಿತಿಯಲ್ಲಿ ಇಲ್ಲದ ಕಸ ಸಾಗಣೆ ವಾಹನಗಳು, ಸ್ವಚ್ಛತಾ ಪರಿಕರಗಳು ಅಲ್ಲಿ ತುಕ್ಕು ಹಿಡಿಯುತ್ತಾ ಬಿದ್ದಿವೆ. ಈ ಕುರಿತು ಹಿಂದೆ ಗಮನಸೆಳದಾಗ ನಗರಸಭೆ ಆಯುಕ್ತರು ಪೌರಕಾರ್ಮಿಕರ ಕೊರತೆಯ ಕಾರಣ ನೀಡಿದ್ದರು.<br /> <br /> ಮಳೆಗಾಲದ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳ ಕುರಿತ ಮಾಹಿತಿಗಾಗಿ ನಗರಸಭೆ ಆಯುಕ್ತರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.<br /> <br /> ನೂತನ ಸದಸ್ಯರು ಚುನಾಯಿತರಾಗಿದ್ದರು ಇನ್ನೂ ಚುನಾಯಿತ ಮಂಡಳಿ ಅಧಿಕಾರಕ್ಕೆ ಬಂದಿಲ್ಲ. ಸದ್ಯ, ಜಿಲ್ಲಾಧಿಕಾರಿಗಳೇ ನಗರಸಭೆಯ ಆಡಳಿತಾಧಿಕಾರಿಗಳು ಆಗಿದ್ದಾರೆ. ಸ್ವಚ್ಚತೆ ಬಗೆಗೆ ತಾತ್ಕಾಲಿಕ ಪರಿಹಾರ ಕ್ರಮಗಳಿಗಾದರೂ ಒತ್ತು ನೀಡುತ್ತಾರಾ ಕಾದು ನೋಡಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ನಗರ ಸ್ವಚ್ಚತೆಯ ದೃಷ್ಟಿಯಿಂದ ನಗರಸಭೆಗೆ ಮಳೆಗಾಲ ಪಾಠವಾಗಬೇಕು. ಆದರೆ, ಪ್ರತಿ ಮಳೆಗಾಲ ಬಂದಾಗಲೂ ನಗರದ ಮಟ್ಟಿಗೆ ಪರಿಸ್ಥಿತಿ ಬದಲಾಗುವುದಿಲ್ಲ.<br /> <br /> ತ್ಯಾಜ್ಯ ವಿಲೇವಾರಿಯ ದೃಷ್ಟಿಯಿಂದ ಮೊದಲೇ ಅವ್ಯವಸ್ಥೆಯ ಕೂಪವಾಗಿರುವ ನಗರದಲ್ಲಿ ಮಳೆಯ ನೀರು ಸೇರಿ ನಗರ ಸಾರ್ವಜನಿಕರಿಗೆ ಕಿರಿಕಿರಿಯ ಅನುಭವ ನೀಡುತ್ತಿದೆ.<br /> <br /> ಒಂದೆಡೆ ಸುರಿವ ಮಳೆಯ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ಅಲ್ಲಿಯೇ ನಿಂತು ಪಾದಚಾರಿಗಳು, ವಾಹನಗಳ ಸಂಚಾರಕ್ಕೂ ಕಿರಿಕಿರಿ ಎನಿಸಿದರೆ; ಇದಕ್ಕೂ ದೊಡ್ಡದಾಗಿ ವಿಲೇವಾರಿ ಯಾಗದ ತ್ಯಾಜ್ಯ ಕೊಳೆತು ಗಬ್ಬು ನಾರುವ ಸ್ಥಿತಿ ಬರುತ್ತಿದೆ.<br /> <br /> ನಗರದ ಬಸವೇಶ್ವರ ವೃತ್ತ, ರೋಟರಿ ವೃತ್ತದ ಆವರಣ, ಗುಂಪಾ ರಸ್ತೆ ಹೀಗೆ ಎಲ್ಲ ಕಡೆಯೂ ಕಾಣ ಬರುವ ಚಿತ್ರಣ. ಸ್ವಚ್ಛತೆ ಕಾಣದ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು, ದಿನೇ ದಿನೇ ಹೆಚ್ಚುವರಿ ಕಸ ಸೇರ್ಪಡೆಯಾಗುತ್ತಿದೆ. ಸುರಿದ ನೀರು ಹರಿದು ಹೋಗುವ ಸಾಧ್ಯತೆ ಇಲ್ಲ.<br /> <br /> ಒಂದೆಡೆ, ಡೆಂಗೇ ಜ್ವರ ಮತ್ತು ಸಾಂಕ್ರಾಮಿಕ ರೋಗಗಳ ಭೀತಿಯ ಹಿನ್ನೆಲೆಯಲ್ಲಿ ನೈರ್ಮಲ್ಯದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕೋರುತ್ತಾರೆ.<br /> <br /> ಇನ್ನೊಂದೆಡೆ ನೈರ್ಮಲ್ಯ ರಕ್ಷಣೆಯಲ್ಲಿ ಪ್ರದಾನ ಪಾತ್ರ ವಹಿಸಬೇಕಾದ ಸ್ಥಳೀಯ ಆಡಳಿತವಾದ ನಗರಸಭೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ.<br /> <br /> ಕಸ ಸಾಗಣೆ ಕುರಿತಂತೆ ನಗರಸಭೆಯ ನಿರ್ಲಕ್ಷ್ಯವನ್ನು ಗಮನಿಸಬೇಕಾದರೆ ನಗರಸಭೆ ಆವರಣಕ್ಕೆ ಭೇಟಿ ನೀಡಬೇಕು.<br /> ಸುಸ್ಥಿತಿಯಲ್ಲಿ ಇಲ್ಲದ ಕಸ ಸಾಗಣೆ ವಾಹನಗಳು, ಸ್ವಚ್ಛತಾ ಪರಿಕರಗಳು ಅಲ್ಲಿ ತುಕ್ಕು ಹಿಡಿಯುತ್ತಾ ಬಿದ್ದಿವೆ. ಈ ಕುರಿತು ಹಿಂದೆ ಗಮನಸೆಳದಾಗ ನಗರಸಭೆ ಆಯುಕ್ತರು ಪೌರಕಾರ್ಮಿಕರ ಕೊರತೆಯ ಕಾರಣ ನೀಡಿದ್ದರು.<br /> <br /> ಮಳೆಗಾಲದ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳ ಕುರಿತ ಮಾಹಿತಿಗಾಗಿ ನಗರಸಭೆ ಆಯುಕ್ತರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.<br /> <br /> ನೂತನ ಸದಸ್ಯರು ಚುನಾಯಿತರಾಗಿದ್ದರು ಇನ್ನೂ ಚುನಾಯಿತ ಮಂಡಳಿ ಅಧಿಕಾರಕ್ಕೆ ಬಂದಿಲ್ಲ. ಸದ್ಯ, ಜಿಲ್ಲಾಧಿಕಾರಿಗಳೇ ನಗರಸಭೆಯ ಆಡಳಿತಾಧಿಕಾರಿಗಳು ಆಗಿದ್ದಾರೆ. ಸ್ವಚ್ಚತೆ ಬಗೆಗೆ ತಾತ್ಕಾಲಿಕ ಪರಿಹಾರ ಕ್ರಮಗಳಿಗಾದರೂ ಒತ್ತು ನೀಡುತ್ತಾರಾ ಕಾದು ನೋಡಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>