<p>ಬಸವಕಲ್ಯಾಣ: ಶ್ರಾವಣ ತಿಂಗಳು ಹಬ್ಬಗಳ ಮಾಸ. ಇಡೀ ತಿಂಗಳು ಮನೆ, ಮಠ, ಮಂದಿರಗಳಲ್ಲಿ ದೇವರ ಪೂಜೆ, ಭಜನೆ, ಉಪವಾಸ ವ್ರತಾಚರಣೆ ನಡೆಯುತ್ತದೆ. ಈ ಮಾಸದಲ್ಲಿ ಪ್ರಥಮವಾಗಿ ಅಂದರೆ ಐದನೇ ದಿನ ಪಂಚಮಿ ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ಹಾವಿನ ಹುತ್ತಕ್ಕೆ ಅಥವಾ ನಾಗ ಶಿಲ್ಪಕ್ಕೆ ಪೂಜೆ ಸಲ್ಲಿಸುತ್ತಾರೆ. ಕೆಲವೆಡೆ ಜೀವಂತ ಹಾವುಗಳನ್ನು ಹಿಡಿದು ಪೂಜೆ ಸಲ್ಲಿಸುವ ಪರಿಪಾಠವೂ ಇದೆ.<br /> <br /> ಭಾರತೀಯರು ನಿಸರ್ಗದ ಆರಾಧಕರು. ದಸರಾಕ್ಕೆ ಬನ್ನಿ ಮರದ ಪೂಜೆ, ಕಾರಹುಣ್ಣಿಮೆಗೆ ಮತ್ತು ಹೋಳಾಕ್ಕೆ ಎತ್ತುಗಳ ಪೂಜೆ, ದೀಪಾವಳಿಗೆ ಗೋವುಗಳ ಪೂಜೆ, ವಟಸಾವಿತ್ರಿ ಪೂರ್ಣಿಮೆಗೆ ವಟವೃಕ್ಷದ ಪೂಜೆ ನಡೆಯುತ್ತದೆ.<br /> <br /> ಆದರೆ ನಾಗರ ಪಂಚಮಿ ಇವುಗಳಲ್ಲಿ ವಿಶಿಷ್ಟವಾದದ್ದು. ನಾಡಿಗೆ ದೊಡ್ಡದು ಎನಿಸಿಕೊಳ್ಳುವ ಹಬ್ಬ. ಶ್ರೀಕೃಷ್ಣನು ಕಾಳಿಂಗಸರ್ಪವನ್ನು ಮಣಿಸಿ ವಿಜಯಸಾಧಿಸಿದ ದಿನದ ಪ್ರತೀಕವಾಗಿಯೂ ಇದನ್ನು ಅಚರಿಸಲಾಗುತ್ತದೆ. <br /> <br /> ನಾಗದೇವರ ಆರಾಧನೆ ಪ್ರಾಚೀನವಾದದ್ದು, ಬೌದ್ಧ, ಜೈನ್ ಧರ್ಮಗಳಲ್ಲಿಯೂ ನಾಗಪೂಜೆಗೆ ಮಹತ್ವವಿದೆ. ಮಳೆಗಾಲದ ತಂಪು ವಾತಾವರಣದಲ್ಲಿ ಹಾವುಗಳು ಹೆಚ್ಚಾಗಿ ಓಡಾಡುತ್ತವೆ. <br /> <br /> ಅವು ಯಾರಿಗೂ ಕಚ್ಚಬಾರದು ಎಂದು ಅವುಗಳನ್ನು ಪೂಜೆಮಾಡುವ ಸಂಪ್ರದಾಯ ಬೆಳೆದಿದೆ ಎಂದೂ ಹೇಳಲಾಗುತ್ತದೆ.ಪಂಚಮಿಯ ದಿನ ಅನ್ನ, ಹೋಳಿಗೆ, ಪಾಯಸ ಮಾಡಿ ಹಾವಿನ ಹುತ್ತಕ್ಕೆ ಹಾಲೆರೆದು ಕುಂಕುಮ, ಅರಿಶಿಣ ಹಚ್ಚಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಗುತ್ತದೆ. <br /> <br /> ನವವಧುಗಳು ತಪ್ಪದೇ ತವರು ಮನೆಗೆ ಹೋಗಿ ತವರಿನ ಮತ್ತು ಗಂಡನಮನೆಯವರ ಹಿತ ಬಯಸಿ ನಾಗಪೂಜೆ ಸಲ್ಲಿಸುತ್ತಾರೆ. ಜೋಳ ಮತ್ತು ಅಕ್ಕಿಯ ಅಳ್ಳು ಹುರಿದು ಹಂಚುವ ಸಂಪ್ರದಾಯವೂ ಇದೆ. ಸಂಜೆ ಮಹಿಳೆಯರೆಲ್ಲರೂ ಕೂಡಿ ಜೋಕಾಲಿ ಆಡುತ್ತಾರೆ. ಭುಲಾಯಿ ಹಾಕಿ ಪದ ಹಾಡುತ್ತಾರೆ.<br /> <br /> ಇದು ಅಣ್ಣ ತಂಗಿಯರ ಮಧ್ಯದ ಸಂಬಂಧ ವೃದ್ಧಿಸುವ ಹಬ್ಬವೂ ಆಗಿದೆ ಎಂದು ಜಾನಪದಗೀತೆಗಳು ಹೇಳುತ್ತವೆ. ಅಕ್ಕ ತಂಗಿಯರು ತವರಿಗೆ ಹೋದೊಡನೆ ಹೊಲಕ್ಕೆ ಹೋಗಿ ಮಳೆ, ಬೆಳೆ ಸರಿಯಾಗಿದೆಯೋ ಎಂಬುದನ್ನು ನೋಡಿ ಎಲ್ಲರೂ ಸಂತಸದಿಂದಿದ್ದರೆ ಹಿರಿಹಿರಿ ಹಿಗ್ಗುತ್ತಾರೆ.<br /> <br /> ಒಂದುವೇಳೆ ಬರಗಾಲದ ಛಾಯೆ ಆವರಿಸಿದರೆ ಮಮ್ಮಲ ಮರಗುತ್ತಾರೆ. ಮುಂದೆ ದೀಪಾವಳಿಗೆ ಅಣ್ಣನ ಮನೆ ತುಂಬುವಂತಾಗಲಿ, ಸಿರಿ ಸಮೃದ್ಧಿ ಹೆಚ್ಚಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಲ್ಲಿಂದ ಬಂದು ತಮ್ಮ ಪತಿರಾಯನಿಗೆ ತವರಿನ ವಾರ್ತೆ ತಿಳಿಸುತ್ತಾರೆ ಎಂಬುದು ಜಾನಪದ ಹಾಡುಗಳಲ್ಲಿ ಚಿತ್ರಿತವಾಗಿದೆ.<br /> <br /> ಈ ಸಲ ಮಳೆರಾಯ ಸ್ವಲ್ಪ ತಡವಾಗಿಯೇ ಆಗಮಿಸಿದ್ದರಿಂದ ಕೆಲವೆಡೆ ಬಿತ್ತನೆ ಆಗಿಲ್ಲ. ಆದ್ದರಿಂದ ಪಂಚಮಿ ಹಬ್ಬದ ಸಂಭ್ರಮ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ಶ್ರಾವಣ ತಿಂಗಳು ಹಬ್ಬಗಳ ಮಾಸ. ಇಡೀ ತಿಂಗಳು ಮನೆ, ಮಠ, ಮಂದಿರಗಳಲ್ಲಿ ದೇವರ ಪೂಜೆ, ಭಜನೆ, ಉಪವಾಸ ವ್ರತಾಚರಣೆ ನಡೆಯುತ್ತದೆ. ಈ ಮಾಸದಲ್ಲಿ ಪ್ರಥಮವಾಗಿ ಅಂದರೆ ಐದನೇ ದಿನ ಪಂಚಮಿ ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ಹಾವಿನ ಹುತ್ತಕ್ಕೆ ಅಥವಾ ನಾಗ ಶಿಲ್ಪಕ್ಕೆ ಪೂಜೆ ಸಲ್ಲಿಸುತ್ತಾರೆ. ಕೆಲವೆಡೆ ಜೀವಂತ ಹಾವುಗಳನ್ನು ಹಿಡಿದು ಪೂಜೆ ಸಲ್ಲಿಸುವ ಪರಿಪಾಠವೂ ಇದೆ.<br /> <br /> ಭಾರತೀಯರು ನಿಸರ್ಗದ ಆರಾಧಕರು. ದಸರಾಕ್ಕೆ ಬನ್ನಿ ಮರದ ಪೂಜೆ, ಕಾರಹುಣ್ಣಿಮೆಗೆ ಮತ್ತು ಹೋಳಾಕ್ಕೆ ಎತ್ತುಗಳ ಪೂಜೆ, ದೀಪಾವಳಿಗೆ ಗೋವುಗಳ ಪೂಜೆ, ವಟಸಾವಿತ್ರಿ ಪೂರ್ಣಿಮೆಗೆ ವಟವೃಕ್ಷದ ಪೂಜೆ ನಡೆಯುತ್ತದೆ.<br /> <br /> ಆದರೆ ನಾಗರ ಪಂಚಮಿ ಇವುಗಳಲ್ಲಿ ವಿಶಿಷ್ಟವಾದದ್ದು. ನಾಡಿಗೆ ದೊಡ್ಡದು ಎನಿಸಿಕೊಳ್ಳುವ ಹಬ್ಬ. ಶ್ರೀಕೃಷ್ಣನು ಕಾಳಿಂಗಸರ್ಪವನ್ನು ಮಣಿಸಿ ವಿಜಯಸಾಧಿಸಿದ ದಿನದ ಪ್ರತೀಕವಾಗಿಯೂ ಇದನ್ನು ಅಚರಿಸಲಾಗುತ್ತದೆ. <br /> <br /> ನಾಗದೇವರ ಆರಾಧನೆ ಪ್ರಾಚೀನವಾದದ್ದು, ಬೌದ್ಧ, ಜೈನ್ ಧರ್ಮಗಳಲ್ಲಿಯೂ ನಾಗಪೂಜೆಗೆ ಮಹತ್ವವಿದೆ. ಮಳೆಗಾಲದ ತಂಪು ವಾತಾವರಣದಲ್ಲಿ ಹಾವುಗಳು ಹೆಚ್ಚಾಗಿ ಓಡಾಡುತ್ತವೆ. <br /> <br /> ಅವು ಯಾರಿಗೂ ಕಚ್ಚಬಾರದು ಎಂದು ಅವುಗಳನ್ನು ಪೂಜೆಮಾಡುವ ಸಂಪ್ರದಾಯ ಬೆಳೆದಿದೆ ಎಂದೂ ಹೇಳಲಾಗುತ್ತದೆ.ಪಂಚಮಿಯ ದಿನ ಅನ್ನ, ಹೋಳಿಗೆ, ಪಾಯಸ ಮಾಡಿ ಹಾವಿನ ಹುತ್ತಕ್ಕೆ ಹಾಲೆರೆದು ಕುಂಕುಮ, ಅರಿಶಿಣ ಹಚ್ಚಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಗುತ್ತದೆ. <br /> <br /> ನವವಧುಗಳು ತಪ್ಪದೇ ತವರು ಮನೆಗೆ ಹೋಗಿ ತವರಿನ ಮತ್ತು ಗಂಡನಮನೆಯವರ ಹಿತ ಬಯಸಿ ನಾಗಪೂಜೆ ಸಲ್ಲಿಸುತ್ತಾರೆ. ಜೋಳ ಮತ್ತು ಅಕ್ಕಿಯ ಅಳ್ಳು ಹುರಿದು ಹಂಚುವ ಸಂಪ್ರದಾಯವೂ ಇದೆ. ಸಂಜೆ ಮಹಿಳೆಯರೆಲ್ಲರೂ ಕೂಡಿ ಜೋಕಾಲಿ ಆಡುತ್ತಾರೆ. ಭುಲಾಯಿ ಹಾಕಿ ಪದ ಹಾಡುತ್ತಾರೆ.<br /> <br /> ಇದು ಅಣ್ಣ ತಂಗಿಯರ ಮಧ್ಯದ ಸಂಬಂಧ ವೃದ್ಧಿಸುವ ಹಬ್ಬವೂ ಆಗಿದೆ ಎಂದು ಜಾನಪದಗೀತೆಗಳು ಹೇಳುತ್ತವೆ. ಅಕ್ಕ ತಂಗಿಯರು ತವರಿಗೆ ಹೋದೊಡನೆ ಹೊಲಕ್ಕೆ ಹೋಗಿ ಮಳೆ, ಬೆಳೆ ಸರಿಯಾಗಿದೆಯೋ ಎಂಬುದನ್ನು ನೋಡಿ ಎಲ್ಲರೂ ಸಂತಸದಿಂದಿದ್ದರೆ ಹಿರಿಹಿರಿ ಹಿಗ್ಗುತ್ತಾರೆ.<br /> <br /> ಒಂದುವೇಳೆ ಬರಗಾಲದ ಛಾಯೆ ಆವರಿಸಿದರೆ ಮಮ್ಮಲ ಮರಗುತ್ತಾರೆ. ಮುಂದೆ ದೀಪಾವಳಿಗೆ ಅಣ್ಣನ ಮನೆ ತುಂಬುವಂತಾಗಲಿ, ಸಿರಿ ಸಮೃದ್ಧಿ ಹೆಚ್ಚಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಲ್ಲಿಂದ ಬಂದು ತಮ್ಮ ಪತಿರಾಯನಿಗೆ ತವರಿನ ವಾರ್ತೆ ತಿಳಿಸುತ್ತಾರೆ ಎಂಬುದು ಜಾನಪದ ಹಾಡುಗಳಲ್ಲಿ ಚಿತ್ರಿತವಾಗಿದೆ.<br /> <br /> ಈ ಸಲ ಮಳೆರಾಯ ಸ್ವಲ್ಪ ತಡವಾಗಿಯೇ ಆಗಮಿಸಿದ್ದರಿಂದ ಕೆಲವೆಡೆ ಬಿತ್ತನೆ ಆಗಿಲ್ಲ. ಆದ್ದರಿಂದ ಪಂಚಮಿ ಹಬ್ಬದ ಸಂಭ್ರಮ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>