<p><strong>ಔರಾದ್:</strong> ಇಲ್ಲಿಯ ಬಸ್ ನಿಲ್ದಾಣದಲ್ಲಿ ಗಲೀಜಾಗಿದ್ದು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.<br /> ನಿಲ್ದಾಣದ ಖಾಲಿ ಜಾಗದಲ್ಲಿ ಕಸದ ರಾಶಿ ಬಿದ್ದು ಸುತ್ತಲೂ ಗಬ್ಬು ವಾಸನೆ ಬರುತ್ತಿದೆ. ಮತ್ತೊಂದೆಡೆ ಖಾಲಿ ಜಾಗ ಮೂತ್ರಾಲಯವಾಗಿ ಬಳಕೆಯಾಗಿ ನಿಲ್ದಾಣದಲ್ಲಿ ನೈರ್ಮಲ್ಯ ಸಮಸ್ಯೆ ನಿರ್ಮಾಣವಾಗಿದೆ. ನಿತ್ಯ ಕಸ ಗೂಡಿಸದೆ ಇರುವುದು ನಿಲ್ದಾಣದ ಒಳಗೂ ಹೊರಗೂ ಪ್ರಯಾಣಿಕರಿಗೆ ಕಸದ ಸ್ವಾಗತ ಸಿಗುತ್ತಿದೆ.<br /> <br /> ಈ ಕುರಿತು ಬಸ್ ನಿಲ್ದಾಣದ ಮೇಲ್ವಿಚಾರಕರನ್ನು ವಿಚಾರಿಸಿದರೆ `ಅಕ್ಕಪಕ್ಕದ ಅಂಗಡಿ ಮತ್ತು ಮನೆಯವರು ನಿಲ್ದಾಣದೊಳಗೆ ಕಸ ತಂದು ಹಾಕುತ್ತಿದ್ದಾರೆ. ಪಟ್ಟಣ ಪಂಚಾಯಿತಿಯವರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ದೂರುತ್ತಾರೆ.<br /> <br /> `ಕಸ ಗೂಡಿಸುವವರು ನಿತ್ಯ ಬರುವುದಿಲ್ಲ. ಹೀಗಾಗಿ ಅಲ್ಲಲ್ಲಿ ಕಸ ಬಿದ್ದು ಪ್ರಯಾಣಿಕರು ಆಕ್ಷೇಪಿಸುವಂತಾಗಿದೆ. ಈ ವಿಷಯ ಘಟಕ ವ್ಯವಸ್ಥಾಪಕರ ಗಮನಕ್ಕೂ ತರಲಾಗಿದೆ' ಎನ್ನುತ್ತಾರೆ.<br /> <br /> `ನಿಲ್ದಾಣದ ಸುತ್ತ ಖಾಸಗಿ ವಾಹನಗಳ ಹಾವಳಿ ದೊಡ್ಡ ಸಮಸ್ಯೆಯಾಗಿದೆ. ನಿಲ್ದಾಣದ ಎರಡೂ ದ್ವಾರಗಳು ಆಕ್ರಮಿಸಿ ಬಸ್ಗಳು ಓಡಾಡಲು ಅಡ್ಡಿಪಡಿಸುತ್ತಿವೆ.<br /> <br /> ನಿಲ್ದಾಣ ಎದುರಿನ ರಸ್ತೆ ಮೇಲಿನ ವ್ಯಾಪಾರವೂ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ಸಲ ಲಿಖಿತ ಮನವಿ ಸಲ್ಲಿಸಿದರೂ ಖಾಸಗಿ ವಾಹನಗಳ ಹಾವಳಿ ತಪ್ಪುತ್ತಿಲ್ಲ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.<br /> ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ನಿಯಮಿತವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂಬ ದೂರುಗಳಿವೆ.<br /> <br /> ಹೊಸದಾಗಿ ತಂದ ಕಸ ಸಂಗ್ರಹ ತೊಟ್ಟಿಗಳು ಅಲ್ಲಲ್ಲಿ ಇಟ್ಟು ಆಗಾಗ ವಿಲೇವಾರಿ ಮಾಡಿದರೆ ಪಟ್ಟಣದಲ್ಲಿ ನೈರ್ಮಲ್ಯ ಸಮಸ್ಯೆ ಆಗುವುದಿಲ್ಲ.<br /> <br /> ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿಯವರು ಅಗತ್ಯ ಕ್ರಮ ಕೈಗೊಳ್ಳುವಂತೆ ಇಲ್ಲಿಯ ವಿವಿಧ ಜನಪರ ಸಂಘಟನೆಗಳು ಬೇಡಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್:</strong> ಇಲ್ಲಿಯ ಬಸ್ ನಿಲ್ದಾಣದಲ್ಲಿ ಗಲೀಜಾಗಿದ್ದು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.<br /> ನಿಲ್ದಾಣದ ಖಾಲಿ ಜಾಗದಲ್ಲಿ ಕಸದ ರಾಶಿ ಬಿದ್ದು ಸುತ್ತಲೂ ಗಬ್ಬು ವಾಸನೆ ಬರುತ್ತಿದೆ. ಮತ್ತೊಂದೆಡೆ ಖಾಲಿ ಜಾಗ ಮೂತ್ರಾಲಯವಾಗಿ ಬಳಕೆಯಾಗಿ ನಿಲ್ದಾಣದಲ್ಲಿ ನೈರ್ಮಲ್ಯ ಸಮಸ್ಯೆ ನಿರ್ಮಾಣವಾಗಿದೆ. ನಿತ್ಯ ಕಸ ಗೂಡಿಸದೆ ಇರುವುದು ನಿಲ್ದಾಣದ ಒಳಗೂ ಹೊರಗೂ ಪ್ರಯಾಣಿಕರಿಗೆ ಕಸದ ಸ್ವಾಗತ ಸಿಗುತ್ತಿದೆ.<br /> <br /> ಈ ಕುರಿತು ಬಸ್ ನಿಲ್ದಾಣದ ಮೇಲ್ವಿಚಾರಕರನ್ನು ವಿಚಾರಿಸಿದರೆ `ಅಕ್ಕಪಕ್ಕದ ಅಂಗಡಿ ಮತ್ತು ಮನೆಯವರು ನಿಲ್ದಾಣದೊಳಗೆ ಕಸ ತಂದು ಹಾಕುತ್ತಿದ್ದಾರೆ. ಪಟ್ಟಣ ಪಂಚಾಯಿತಿಯವರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ದೂರುತ್ತಾರೆ.<br /> <br /> `ಕಸ ಗೂಡಿಸುವವರು ನಿತ್ಯ ಬರುವುದಿಲ್ಲ. ಹೀಗಾಗಿ ಅಲ್ಲಲ್ಲಿ ಕಸ ಬಿದ್ದು ಪ್ರಯಾಣಿಕರು ಆಕ್ಷೇಪಿಸುವಂತಾಗಿದೆ. ಈ ವಿಷಯ ಘಟಕ ವ್ಯವಸ್ಥಾಪಕರ ಗಮನಕ್ಕೂ ತರಲಾಗಿದೆ' ಎನ್ನುತ್ತಾರೆ.<br /> <br /> `ನಿಲ್ದಾಣದ ಸುತ್ತ ಖಾಸಗಿ ವಾಹನಗಳ ಹಾವಳಿ ದೊಡ್ಡ ಸಮಸ್ಯೆಯಾಗಿದೆ. ನಿಲ್ದಾಣದ ಎರಡೂ ದ್ವಾರಗಳು ಆಕ್ರಮಿಸಿ ಬಸ್ಗಳು ಓಡಾಡಲು ಅಡ್ಡಿಪಡಿಸುತ್ತಿವೆ.<br /> <br /> ನಿಲ್ದಾಣ ಎದುರಿನ ರಸ್ತೆ ಮೇಲಿನ ವ್ಯಾಪಾರವೂ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ಸಲ ಲಿಖಿತ ಮನವಿ ಸಲ್ಲಿಸಿದರೂ ಖಾಸಗಿ ವಾಹನಗಳ ಹಾವಳಿ ತಪ್ಪುತ್ತಿಲ್ಲ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.<br /> ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ನಿಯಮಿತವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂಬ ದೂರುಗಳಿವೆ.<br /> <br /> ಹೊಸದಾಗಿ ತಂದ ಕಸ ಸಂಗ್ರಹ ತೊಟ್ಟಿಗಳು ಅಲ್ಲಲ್ಲಿ ಇಟ್ಟು ಆಗಾಗ ವಿಲೇವಾರಿ ಮಾಡಿದರೆ ಪಟ್ಟಣದಲ್ಲಿ ನೈರ್ಮಲ್ಯ ಸಮಸ್ಯೆ ಆಗುವುದಿಲ್ಲ.<br /> <br /> ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿಯವರು ಅಗತ್ಯ ಕ್ರಮ ಕೈಗೊಳ್ಳುವಂತೆ ಇಲ್ಲಿಯ ವಿವಿಧ ಜನಪರ ಸಂಘಟನೆಗಳು ಬೇಡಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>