<p><strong>ಶಹಾಬಾದ:</strong> ಚಿತ್ತಾಪುರ ತಾಲ್ಲೂಕಿನ ಭಂಕೂರ ಗ್ರಾಮದ ಸಮಸ್ಯೆ ಕುರಿತು `ಪ್ರಜಾವಾಣಿ' ಬುಧವಾರದಂದು (ದಿನಾಂಕ ಜುಲೈ17 ರ ಸಂಚಿಕೆಯಲ್ಲಿ) ಪ್ರಕಟಿಸಿದ್ದ `ಗ್ರಾಮಾಯಣ'ದ `ಭಂಕೂರ: ಸಮಸ್ಯೆಗಳ ಊರು' ಲೇಖನಕ್ಕೆ ಸ್ಪಂದಿಸಿ ಗ್ರಾಮದ ಮುಖ್ಯರಸ್ತೆ ಬಗ್ಗೆ ತಕ್ಷಣವೆ ಕ್ರಮ ತೆಗೆದುಕೊಂಡಿದೆ. ಮಳೆಯಿಂದಾಗಿ ಅಡ್ಡಾಡಲು ತೊಂದರೆಯಾದ್ದ ಮುಖ್ಯರಸ್ತೆಗೆ ಗುರುವಾರ ಮುರುಮ್ ಹಾಕಿಸಿ ತಾತ್ಕಾಲಿಕ ದುರಸ್ತಿ ಮಾಡಿಸಿದೆ.<br /> <br /> ಗ್ರಾಮದ ಮುಖ್ಯರಸ್ತೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಸ್ತೆ `ಕೆಸರು ಗದ್ದೆ'ಯಂತಾಗಿತ್ತು. ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಅವರನ್ನು `ಮುಖ್ಯರಸ್ತೆ'ಯಲ್ಲೆ ನಡೆಸಿಕೊಂಡು ಹೋದ ಗ್ರಾಮದ ಶರಣಗೌಡ ಕೊಡದೂರ, ಈರಣ್ಣ ಕಾರ್ಗಿಲ್, ನಾಗೇಂದ್ರ ಮಾಚನೂರ ಹಾಗೂ ಶರಣು ದೊಡ್ಡಮನಿ ರಸ್ತೆಯ ದುಃಸ್ಥಿತಿ ಬಗ್ಗೆ ವಿವರಣೆ ನೀಡಿದರು. <br /> <br /> ಟೆಂಡರ್ ಕೆಲಸ: ಭಂಕೂರ ಮುಖ್ಯರಸ್ತೆಗೆ ಈಚಿನ ವಿಧಾನಸಭೆ ಚುನಾವಣೆ ನಂತರ ಟೆಂಡರ್ ಪ್ರಕ್ರೀಯೆ ನಡೆದಿದ್ದು `ಟೆಂಡರ್' ನೀಡುವ ಕೆಲಸ ಬಾಕಿ ಇದೆ. ಈ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಾಡದೆ ಪಂಚಾಯತ್ ರಾಜ್ಯ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದ್ದು ಇದಕ್ಕಾಗಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ(ಹೆಚ್.ಕೆ.ಡಿ.ಬಿ)ಯಿಂದ ಸುಮಾರು 26 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.<br /> <br /> ಸದ್ಯ ಮಳೆ ಸುರಿಯುತ್ತಿದ್ದು, ಮುಗಿದ ನಂತರ ಕಾಮಗಾರಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಕಾಮಗಾರಿ ತಡವಾಗಲು ಹಿಂದಿನ ಶಾಸಕ ವ್ಮಾಲೀಕ ನಾಯಕ ಅವರ `ಕಾಣಿಕೆ'ಯೂ ಇದೆ ಎಂದು ಭಂಕೂರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮೀಕಾಂತ ಕಂದಗೋಳ ಆಪಾದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಬಾದ:</strong> ಚಿತ್ತಾಪುರ ತಾಲ್ಲೂಕಿನ ಭಂಕೂರ ಗ್ರಾಮದ ಸಮಸ್ಯೆ ಕುರಿತು `ಪ್ರಜಾವಾಣಿ' ಬುಧವಾರದಂದು (ದಿನಾಂಕ ಜುಲೈ17 ರ ಸಂಚಿಕೆಯಲ್ಲಿ) ಪ್ರಕಟಿಸಿದ್ದ `ಗ್ರಾಮಾಯಣ'ದ `ಭಂಕೂರ: ಸಮಸ್ಯೆಗಳ ಊರು' ಲೇಖನಕ್ಕೆ ಸ್ಪಂದಿಸಿ ಗ್ರಾಮದ ಮುಖ್ಯರಸ್ತೆ ಬಗ್ಗೆ ತಕ್ಷಣವೆ ಕ್ರಮ ತೆಗೆದುಕೊಂಡಿದೆ. ಮಳೆಯಿಂದಾಗಿ ಅಡ್ಡಾಡಲು ತೊಂದರೆಯಾದ್ದ ಮುಖ್ಯರಸ್ತೆಗೆ ಗುರುವಾರ ಮುರುಮ್ ಹಾಕಿಸಿ ತಾತ್ಕಾಲಿಕ ದುರಸ್ತಿ ಮಾಡಿಸಿದೆ.<br /> <br /> ಗ್ರಾಮದ ಮುಖ್ಯರಸ್ತೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಸ್ತೆ `ಕೆಸರು ಗದ್ದೆ'ಯಂತಾಗಿತ್ತು. ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಅವರನ್ನು `ಮುಖ್ಯರಸ್ತೆ'ಯಲ್ಲೆ ನಡೆಸಿಕೊಂಡು ಹೋದ ಗ್ರಾಮದ ಶರಣಗೌಡ ಕೊಡದೂರ, ಈರಣ್ಣ ಕಾರ್ಗಿಲ್, ನಾಗೇಂದ್ರ ಮಾಚನೂರ ಹಾಗೂ ಶರಣು ದೊಡ್ಡಮನಿ ರಸ್ತೆಯ ದುಃಸ್ಥಿತಿ ಬಗ್ಗೆ ವಿವರಣೆ ನೀಡಿದರು. <br /> <br /> ಟೆಂಡರ್ ಕೆಲಸ: ಭಂಕೂರ ಮುಖ್ಯರಸ್ತೆಗೆ ಈಚಿನ ವಿಧಾನಸಭೆ ಚುನಾವಣೆ ನಂತರ ಟೆಂಡರ್ ಪ್ರಕ್ರೀಯೆ ನಡೆದಿದ್ದು `ಟೆಂಡರ್' ನೀಡುವ ಕೆಲಸ ಬಾಕಿ ಇದೆ. ಈ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಾಡದೆ ಪಂಚಾಯತ್ ರಾಜ್ಯ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದ್ದು ಇದಕ್ಕಾಗಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ(ಹೆಚ್.ಕೆ.ಡಿ.ಬಿ)ಯಿಂದ ಸುಮಾರು 26 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.<br /> <br /> ಸದ್ಯ ಮಳೆ ಸುರಿಯುತ್ತಿದ್ದು, ಮುಗಿದ ನಂತರ ಕಾಮಗಾರಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಕಾಮಗಾರಿ ತಡವಾಗಲು ಹಿಂದಿನ ಶಾಸಕ ವ್ಮಾಲೀಕ ನಾಯಕ ಅವರ `ಕಾಣಿಕೆ'ಯೂ ಇದೆ ಎಂದು ಭಂಕೂರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮೀಕಾಂತ ಕಂದಗೋಳ ಆಪಾದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>