<p><strong>ಬೀದರ್: </strong>ವಚನಗಳು ಮತ್ತು ತತ್ವಪದಗಳು ನವೋದಯ ಸಾಹಿತ್ಯ ಪ್ರಕಾರದ ಬೇರುಗಳಾಗಿದ್ದು, ಈ ಶ್ರೀಮಂತ ಸಾಹಿತ್ಯವನ್ನು ಕೃತಿರೂಪದಲ್ಲಿ ಹೆಚ್ಚಾಗಿ ಹೊರತರುವ ಅಗತ್ಯವಿದೆ ಎಂದು ಸಾಹಿತಿ ಡಾ. ಕೆ.ಆರ್. ಸಿದ್ದಗಂಗಮ್ಮಾ ಅವರು ಭಾನುವಾರ ಆಭಿಪ್ರಾಯಪಟ್ಟರು.<br /> <br /> ನಗರದ ರಂಗಮಂದಿರದಲ್ಲಿ ಅವರು ಬೀದರ್ ಜಿಲ್ಲಾ ದ್ವಿತೀಯ ಮಹಿಳಾ ಸಾಹಿತ್ಯ ಸಮ್ಮೇಳನದ ಎರಡನೇ ದಿನದಂದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ತತ್ವಕಾರರು ಮತ್ತು ವಚನಕಾರರ ಶಕ್ತಿ ದೊಡ್ಡದು. ದೇಶಿ ಸೊಗಡನ್ನು ದಾಖಲಿಸುವ ಮೂಲಕ ಆ ಸಾಹಿತ್ಯದ ಶ್ರೀಮಂತಿಕೆ ಮತ್ತು ಬೇರು ಹೊಸ ಪೀಳಿಗೆಯನ್ನು ತಲುಪುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.<br /> <br /> ಕವನ ರಚನೆ ಭಾವನೆಗಳಿಗೆ ಪೂರಕವಾಗಿ ಇರಬೇಕು. ಕೇವಲ ಕವಿಗೋಷ್ಠಿಗೆಂದೋ, ಪ್ರಕಟಣೆಗಾಗಿಯೇ ತುರ್ತಾಗಿ ಪದಗಳನ್ನು ಪೋಣಿಸುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು.<br /> <br /> <strong>ಕವನಗಳ ವೈವಿಧ್ಯತೆ: </strong>ಬಳಿಕ ನಡೆದ ಕವಿಗೋಷ್ಠಿಯಲ್ಲಿ 25ಕ್ಕೂ ಹೆಚ್ಚಿನ ಕವಯತ್ರಿಯರು ಕವನಗಳನ್ನು ವಾಚಿಸಿ ಗಮನಸೆಳೆದರು.<br /> ವರದಕ್ಷಿಣೆ, ಶಿಕ್ಷಣ, ಗೆಳೆತನ, ಬಾಂಧವ್ಯದ ಜೊತೆಗೆ ಸಮಕಾಲೀನ ವಿಷಯಗಳಾದ ಶಾದಿಭಾಗ್ಯವನ್ನು ಕವನದ ವಸ್ತುವಾಗಿಸಿ ವಾಚನೆ ಮಾಡಿದ್ದು ಸೆಳೆಯಿತು. ಕವನವನ್ನು ಕೆಲವರು ವಾಚಿಸಿದರೆ, ಕೆಲವರು ಓದಿದರು.<br /> <br /> ಅರುಂಧತಿ ಚಾಂದ್ಕವಡೆ ಅವರಿಗೆ ಹೆಣ್ಣಿನ ಕ್ಷಮಯಾಧರಿತ್ರಿ ಗುಣವೇ ಕವನದ ವಸ್ತುವಾದರೆ; ಶಾಂತಾ ಖಂಡ್ರೆ ಅವರು ‘ಹೆಣ್ಣೆ ನೀ ಹೇಡಿಯಾಗಬೇಡ; ಬೆಂಕಿಯೊಳಗಿನ ಉಪ್ಪು ಸಿಡಿವಂತೆ ನೀ ಸಿಡಿದೇಳು’ ಎಂದು ಕರೆ ನೀಡಿದರು.<br /> ಸುಮನ್ ಹೆಬ್ಬಾರ್ ಅವರು ಶಾದಿಭಾಗ್ಯವನ್ನೇ ಕವನದ ವಸ್ತುವಾಗಿಸಿ ಗಮನಸೆಳೆದರು. ‘ಜಾತಿಗೊಂದು ಜಯಂತಿ, ಜಾತಿಗೊಂದು ಭಾಗ್ಯ..ಇವು ಕಾಳಸಂತೆಕೋರರಿಗೆ ಬಯಸದೇ ಬಂದ ಭಾಗ್ಯ’ ಎಂದು ವ್ಯಂಗ್ಯವಾಡುವ ಜೊತೆಗೆ, ‘ಬೇಕಾಗಿದೆ ಉದ್ಯೋಗ ಭಾಗ್ಯ, ಶೌಚಾಲಯ ಭಾಗ್ಯ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯ ಭಾಗ್ಯ’ ಎಂಬ ಬೇಡಿಕೆಯನ್ನುಮಂಡಿಸಿದವು. ಈ ಬೇಡಿಕೆಗೆ ಚಪ್ಪಾಳೆಗಳ ಅನುಮೋದನೆಯೂ ದೊರೆಯಿತು.<br /> <br /> ನೀಲಾಂಬಿಕಾ ಗುರಶೆಟ್ಟಿ ಅವರು, ‘ಸಂಬಂಧಗಳೇ ಹೀಗೆ..’ ಕವನದಲ್ಲಿ ಅದರ ವ್ಯಾಖ್ಯಾನವನ್ನು ಕಟ್ಟಿಕೊಟ್ಟರೆ, ಲಾವಣ್ಯ ಹಂಗಲಗಿ ಅವರು, ಗೆಳೆತಿಯ ಆಪ್ತತೆಯನ್ನೇ ಕವನವಾಗಿಸಿದ್ದರು. ರಾಜಮ್ಮ ಚಿಕ್ಕಪೇಟೆ ಅವರು ವರದಕ್ಷಿಣೆ ಸಮಸ್ಯೆಯತ್ತ ಬೆಳೆಕು ಚೆಲ್ಲಿದರೆ; ಶೈಲಜಾ ದಿವಾಕರ್ ಅವರು, ಕನ್ನಡ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಕವನದಲ್ಲಿ ಬಣ್ಣಿಸಿದರು.<br /> <br /> ಇದೇ ಸಂದರ್ಭದಲ್ಲಿ ಶೈಲಜಾ ದಿವಾಕರ್ ಅವರ ‘ಭಾವನಾ ಹಕ್ಕಿ’ ಕವನ ಸಂಕಲದ ಬಿಡುಗಡೆಯೂ ಆಯಿತು. ಸಾರಿಕಾ ಗಂಗಾ, ಕರುಣಾ ಸಲಗಾರ ಮೀನಾ ಬೋರಾಳಕರ ಅವರು ಕವನ ವಾಚಿಸಿದರು. ಜಗದೇವಿ ಬೋಸ್ಲೆ ಸ್ವಾಗತಿಸಿದರು. ಪ್ರತಿಭಾ ಚಾಮಾ ನಿರೂಪಿಸಿದರು. ನಿರ್ಮಲಾ ಗುತ್ತೆ ವಂದಿಸಿದರು.<br /> <br /> ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ನೀಲಾ ಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಸಿದ್ರಾಮಪ್ಪಾ ಮಾಸಿಮಾಡೆ ಅವರು ವೇದಿಕೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ವಚನಗಳು ಮತ್ತು ತತ್ವಪದಗಳು ನವೋದಯ ಸಾಹಿತ್ಯ ಪ್ರಕಾರದ ಬೇರುಗಳಾಗಿದ್ದು, ಈ ಶ್ರೀಮಂತ ಸಾಹಿತ್ಯವನ್ನು ಕೃತಿರೂಪದಲ್ಲಿ ಹೆಚ್ಚಾಗಿ ಹೊರತರುವ ಅಗತ್ಯವಿದೆ ಎಂದು ಸಾಹಿತಿ ಡಾ. ಕೆ.ಆರ್. ಸಿದ್ದಗಂಗಮ್ಮಾ ಅವರು ಭಾನುವಾರ ಆಭಿಪ್ರಾಯಪಟ್ಟರು.<br /> <br /> ನಗರದ ರಂಗಮಂದಿರದಲ್ಲಿ ಅವರು ಬೀದರ್ ಜಿಲ್ಲಾ ದ್ವಿತೀಯ ಮಹಿಳಾ ಸಾಹಿತ್ಯ ಸಮ್ಮೇಳನದ ಎರಡನೇ ದಿನದಂದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ತತ್ವಕಾರರು ಮತ್ತು ವಚನಕಾರರ ಶಕ್ತಿ ದೊಡ್ಡದು. ದೇಶಿ ಸೊಗಡನ್ನು ದಾಖಲಿಸುವ ಮೂಲಕ ಆ ಸಾಹಿತ್ಯದ ಶ್ರೀಮಂತಿಕೆ ಮತ್ತು ಬೇರು ಹೊಸ ಪೀಳಿಗೆಯನ್ನು ತಲುಪುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.<br /> <br /> ಕವನ ರಚನೆ ಭಾವನೆಗಳಿಗೆ ಪೂರಕವಾಗಿ ಇರಬೇಕು. ಕೇವಲ ಕವಿಗೋಷ್ಠಿಗೆಂದೋ, ಪ್ರಕಟಣೆಗಾಗಿಯೇ ತುರ್ತಾಗಿ ಪದಗಳನ್ನು ಪೋಣಿಸುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು.<br /> <br /> <strong>ಕವನಗಳ ವೈವಿಧ್ಯತೆ: </strong>ಬಳಿಕ ನಡೆದ ಕವಿಗೋಷ್ಠಿಯಲ್ಲಿ 25ಕ್ಕೂ ಹೆಚ್ಚಿನ ಕವಯತ್ರಿಯರು ಕವನಗಳನ್ನು ವಾಚಿಸಿ ಗಮನಸೆಳೆದರು.<br /> ವರದಕ್ಷಿಣೆ, ಶಿಕ್ಷಣ, ಗೆಳೆತನ, ಬಾಂಧವ್ಯದ ಜೊತೆಗೆ ಸಮಕಾಲೀನ ವಿಷಯಗಳಾದ ಶಾದಿಭಾಗ್ಯವನ್ನು ಕವನದ ವಸ್ತುವಾಗಿಸಿ ವಾಚನೆ ಮಾಡಿದ್ದು ಸೆಳೆಯಿತು. ಕವನವನ್ನು ಕೆಲವರು ವಾಚಿಸಿದರೆ, ಕೆಲವರು ಓದಿದರು.<br /> <br /> ಅರುಂಧತಿ ಚಾಂದ್ಕವಡೆ ಅವರಿಗೆ ಹೆಣ್ಣಿನ ಕ್ಷಮಯಾಧರಿತ್ರಿ ಗುಣವೇ ಕವನದ ವಸ್ತುವಾದರೆ; ಶಾಂತಾ ಖಂಡ್ರೆ ಅವರು ‘ಹೆಣ್ಣೆ ನೀ ಹೇಡಿಯಾಗಬೇಡ; ಬೆಂಕಿಯೊಳಗಿನ ಉಪ್ಪು ಸಿಡಿವಂತೆ ನೀ ಸಿಡಿದೇಳು’ ಎಂದು ಕರೆ ನೀಡಿದರು.<br /> ಸುಮನ್ ಹೆಬ್ಬಾರ್ ಅವರು ಶಾದಿಭಾಗ್ಯವನ್ನೇ ಕವನದ ವಸ್ತುವಾಗಿಸಿ ಗಮನಸೆಳೆದರು. ‘ಜಾತಿಗೊಂದು ಜಯಂತಿ, ಜಾತಿಗೊಂದು ಭಾಗ್ಯ..ಇವು ಕಾಳಸಂತೆಕೋರರಿಗೆ ಬಯಸದೇ ಬಂದ ಭಾಗ್ಯ’ ಎಂದು ವ್ಯಂಗ್ಯವಾಡುವ ಜೊತೆಗೆ, ‘ಬೇಕಾಗಿದೆ ಉದ್ಯೋಗ ಭಾಗ್ಯ, ಶೌಚಾಲಯ ಭಾಗ್ಯ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯ ಭಾಗ್ಯ’ ಎಂಬ ಬೇಡಿಕೆಯನ್ನುಮಂಡಿಸಿದವು. ಈ ಬೇಡಿಕೆಗೆ ಚಪ್ಪಾಳೆಗಳ ಅನುಮೋದನೆಯೂ ದೊರೆಯಿತು.<br /> <br /> ನೀಲಾಂಬಿಕಾ ಗುರಶೆಟ್ಟಿ ಅವರು, ‘ಸಂಬಂಧಗಳೇ ಹೀಗೆ..’ ಕವನದಲ್ಲಿ ಅದರ ವ್ಯಾಖ್ಯಾನವನ್ನು ಕಟ್ಟಿಕೊಟ್ಟರೆ, ಲಾವಣ್ಯ ಹಂಗಲಗಿ ಅವರು, ಗೆಳೆತಿಯ ಆಪ್ತತೆಯನ್ನೇ ಕವನವಾಗಿಸಿದ್ದರು. ರಾಜಮ್ಮ ಚಿಕ್ಕಪೇಟೆ ಅವರು ವರದಕ್ಷಿಣೆ ಸಮಸ್ಯೆಯತ್ತ ಬೆಳೆಕು ಚೆಲ್ಲಿದರೆ; ಶೈಲಜಾ ದಿವಾಕರ್ ಅವರು, ಕನ್ನಡ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಕವನದಲ್ಲಿ ಬಣ್ಣಿಸಿದರು.<br /> <br /> ಇದೇ ಸಂದರ್ಭದಲ್ಲಿ ಶೈಲಜಾ ದಿವಾಕರ್ ಅವರ ‘ಭಾವನಾ ಹಕ್ಕಿ’ ಕವನ ಸಂಕಲದ ಬಿಡುಗಡೆಯೂ ಆಯಿತು. ಸಾರಿಕಾ ಗಂಗಾ, ಕರುಣಾ ಸಲಗಾರ ಮೀನಾ ಬೋರಾಳಕರ ಅವರು ಕವನ ವಾಚಿಸಿದರು. ಜಗದೇವಿ ಬೋಸ್ಲೆ ಸ್ವಾಗತಿಸಿದರು. ಪ್ರತಿಭಾ ಚಾಮಾ ನಿರೂಪಿಸಿದರು. ನಿರ್ಮಲಾ ಗುತ್ತೆ ವಂದಿಸಿದರು.<br /> <br /> ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ನೀಲಾ ಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಸಿದ್ರಾಮಪ್ಪಾ ಮಾಸಿಮಾಡೆ ಅವರು ವೇದಿಕೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>