ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಯಿಂದ ಉರುಳಿಬಿದ್ದು ಕಾಲು ಮುರಿದುಕೊಂಡ ಕಾಡುಕೋಣ

Last Updated 8 ಡಿಸೆಂಬರ್ 2019, 4:39 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ತಾಲ್ಲೂಕಿನ ಆಗುಂಬೆ ಸಮೀಪ ನಾಲೂರಿನ ಬಿಳಚಿಕಟ್ಟೆ ಬಳಿ ಶನಿವಾರ ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದ ಧರೆಯ ಮೇಲಿಂದ ಕಾಡುಕೋಣವೊಂದು ಉರುಳಿಬಿದ್ದು ಗಾಯಗೊಂಡಿದೆ.

ಕಾಲು ಮುರಿದಿರಬಹುದು ಎಂದು ಶಂಕಿಸಲಾಗಿದೆ. ತೀವ್ರವಾದ ಪೆಟ್ಟು ಬಿದ್ದ ಕಾರಣ ನರಳುತ್ತಿದ್ದ ಕಾಡುಕೋಣ ಸ್ಥಳದಿಂದ ಕದಲಲಿಲ್ಲ.
ಈ ಮಾರ್ಗದಲ್ಲಿ ಸಂಚರಿಸುತ್ತಿರವ ಪ್ರಯಾಣಿಕರು ಕಾಡುಕೋಣವೊಂದು ಚರಂಡಿಯಲ್ಲಿ ಬಿದ್ದಿರುವುದನ್ನು ಗಮನಿಸಿದರು. ಪ್ರಯಾಣಿಕರಲ್ಲಿ ಹಲವರು ತಮ್ಮ ಮೊಬೈಲ್‌ನಲ್ಲಿ ಫೋಟೊ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾಡುಕೋಣ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಂಡರು.

ಕೆಲ ದಿನಗಳ ಹಿಂದೆ ಸಮೀಪದ ಕೊಳಗಿಯಲ್ಲಿ ಕಾಡುಕೋಣವೊಂದು ಮೃತಪಟ್ಟಿರುವುದು ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT