‘ಬೆಳಿಗ್ಗೆ ಒಂದು ಪಕ್ಷ, ಸಂಜೆಮತ್ತೊಂದು ಪಕ್ಷದಲ್ಲಿ ಗುರುತಿಸಿಕೊಳ್ಳುವ ಶಾಸಕರಿಗೆ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆಜಾರಿಗೆ ತರಲಾಗಿತ್ತು.ಮಿಸ್ಟರ್ ಯಡ್ಡಿಯೂರಪ್ಪ, ಮಿಸ್ಟರ್ ಈಶ್ವರಪ್ಪ ನೀವು ಸಂವಿಧಾನ ಓದಿಕೊಂಡಿದ್ದೀರಾ?’ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ನಿಮ್ಮ ಬಣ್ಣ ಈಗ ಬಯಲಾಗುತ್ತಿದೆ. ಯಡಿಯೂರಪ್ಪ ಅವರ ಆಡಿಯೊಸಾಕ್ಷ್ಯ ಸುಪ್ರೀಂ ಕೋರ್ಟ್ ಪರಿಗಣಿಸುತ್ತದೆ. ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರಕ್ರಮ ಕೋರ್ಟ್ ಎತ್ತಿ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.