ಮುನಿವೆಂಕಟೇಗೌಡ ಅವರು ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿರುವ ಚಂಗಡಿ ಗ್ರಾಮದಿಂದ ಕೌದಳ್ಳಿಯಲ್ಲಿ ನಡೆಯುವ ಸಂತೆಗೆ ನಡೆದುಕೊಂಡು ಹೋಗುತ್ತಿದ್ದರು. ಕಾಡಿನ ದಾರಿ ಮಧ್ಯೆ, ಒಂಟಿ ಆನೆಯೊಂದು ದಾಳಿ ಮಾಡಿದೆ. ಮುನಿವೆಂಕಟೇಗೌಡ ಅವರ ಬಲಕಾಲು ಮುರಿದಿದೆ. ಸೊಂಟದ ಭಾಗಕ್ಕೂ ಗಾಯವಾಗಿದೆ.ಅವರನ್ನು ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.