ತಾಲ್ಲೂಕಿನ ಚಿಕ್ಕಮೋಳೆ ಗ್ರಾಮದ ಮಹೇಶ್ ಅವರ ತಂದೆ ತಮ್ಮ 1 ಎಕರೆ 22 ಗುಂಟೆ ಜಮೀನಿನ ಪೈಕಿ 31 ಗುಂಟೆ ಜಮೀನಿನ ಪೋಡಿ ಮಾಡಿಕೊಡಲು ನವೆಂಬರ್ 12ರಂದು ಹರದನಹಳ್ಳಿಯ ಉಪತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಮಹೇಶ್ ಅವರು ಇದೇ 5ರಂದು ತಾಲ್ಲೂಕು ಕಚೇರಿಯಲ್ಲಿ ಸೂಪರ್ ವೈಸರ್ ನಾಗರಾಜು ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ, ಕೆಲಸ ಮಾಡಿಕೊಡಲು ₹2,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.