'ನನ್ನ ಒಡೆತನದ 1 ಎಕರೆ 1 ಗುಂಟೆ ಜಮೀನನ್ನು ಗ್ರಾಮದ ಯಜಮಾನರು ನಿವೇಶನವಾಗಿ ಪರಿವರ್ತಿಸಲು ಬೇಡಿಕೆ ಇಟ್ಟಿದ್ದರು. ಇದಕ್ಕೆ
ಒಪ್ಪದಿದ್ದಾಗ ಗ್ರಾಮದ ಚರಂಡಿ ನೀರನ್ನು ಕೃಷಿ ಭೂಮಿಗೆ ತುಂಬಿಸಿ, ಅನಾರೋಗ್ಯಕ್ಕೆಕಾರಣರಾಗಿದ್ದಾರೆ. ನನಗೆ ದೇವಾಲಯದ ಮಾರಮ್ಮ ದೇವರ ತೀರ್ಥವನ್ನು ನೀಡುತ್ತಿಲ್ಲ. ಮಕ್ಕಳನ್ನುಯಾರು ಮಾತನಾಡಿಸುತ್ತಿಲ್ಲ. ಇದರಿಂದ ಬದುಕುವುದೇ ಕಷ್ಟವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೇವೆ' ಎಂದು ನಂಜುಂಡಯ್ಯ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.