‘ಕತ್ತಿ ಪವಾಡದ ಸಂದರ್ಭದಲ್ಲಿ ಸಾಲೂರು ಮಠದ ಪೀಠಾಧಿಪತಿಗಳು ಕತ್ತಿ ಪವಾಡ ಜರುಗುವವ ಕತ್ತಿಯನ್ನು ಪೂಜಿಸಿ, ಪವಾಡ ಮಾಡುವ ಅರ್ಚಕನಿಗೆ ಅವರ ಕೈಯಿಂದ ಮಾಲಾರ್ಪಣೆಯನ್ನು ಮಾಡುವುದು ಕ್ರಮ. ಅದು ಈ ವರ್ಷ ಜರುಗಲಿಲ್ಲ.ನಮ್ಮ ಸಮುದಾಯದ ಹೆಣ್ಣು ಮಕ್ಕಳು ಹಾಲಹಳ್ಳಕ್ಕೆ ಹೋಗಿ 101 ಕಳಶಗಳನ್ನು ಪೂಜಿಸಿ ತಂಬಡಿಗೇರಿ ಮಾರ್ಗವಾಗಿ ಮೆರವಣಿಗೆ ಬಂದು, ಆ ಜಲವನ್ನು ಮಾದೇಶ್ವರ ಸ್ವಾಮಿಗೆ ಅಭಿಷೇಕ ಮಾಡಿ ತೀರ್ಥವನ್ನು ಮಕ್ಕಳಿಗೆ ನೀಡಲಾಗುತಿತ್ತು. ಈ ವರ್ಷ ತೀರ್ಥ ಪ್ರಸಾದ ನೀಡಿಲ್ಲ’ ಎಂದು ಅವರು ಆರೋಪಿಸಿದ್ದಾರೆ.