<p><strong>ಮಹದೇಶ್ವರ ಬೆಟ್ಟ:</strong> ‘ಬೆಟ್ಟದಲ್ಲಿ ಜರುಗಿದ ದೀಪಾವಳಿ ಜಾತ್ರೆಯಲ್ಲಿ ನಡೆದ ಹಾಲರವಿ ಉತ್ಸವವು ಸಾಂಪ್ರದಾಯಿಕವಾಗಿ ನೆರವೇರಿಲ್ಲ. ಹಾಲರವಿ ತಂದ ಹೆಣ್ಣು ಮಕ್ಕಳಿಗೆ ಮಾದಪ್ಪನ ತೀರ್ಥ ಪ್ರಸಾದ ನೀಡಿಲ್ಲ’ ಎಂದು ಬೇಡಗಂಪಣದ ಸಮುದಾಯದ ಜೆ.ಪುಟ್ಟಮಾದಯ್ಯ ಅವರು ಆರೋಪಿಸಿದ್ದಾರೆ.</p>.<p>ಜೆ ಪುಟ್ಟಮಾದಯ್ಯ ಮನೆತನದವರು ಪೂರ್ವಜರ ಕಾಲದಿಂದಲೂ ಬೆಟ್ಟದಲ್ಲಿ ಕತ್ತಿ ಪವಾಡ ಕಾರ್ಯವನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ.</p>.<p>ಈ ಬಾರಿ ಹಾಲರವಿ ಹಾಗೂ ಕತ್ತಿಪವಾಡದ ಹೊಣೆಯನ್ನು ಹೊತ್ತು ಮುಂದಾಳತ್ವ ವಹಿಸಿದ್ದವರು ಉತ್ಸವವನ್ನು ಹಾಗೂ ಕತ್ತಿ ಪವಾಡ ಪೂಜೆಗಳನ್ನು ಬೇಡಗಂಪಣ ಸಾಂಪ್ರದಾಯದಂತೆ ನಡೆಸಲಿಲ್ಲ ಎಂದು ಅವರು ದೂರಿದ್ದಾರೆ.</p>.<p>‘ಕತ್ತಿ ಪವಾಡದ ಸಂದರ್ಭದಲ್ಲಿ ಸಾಲೂರು ಮಠದ ಪೀಠಾಧಿಪತಿಗಳು ಕತ್ತಿ ಪವಾಡ ಜರುಗುವವ ಕತ್ತಿಯನ್ನು ಪೂಜಿಸಿ, ಪವಾಡ ಮಾಡುವ ಅರ್ಚಕನಿಗೆ ಅವರ ಕೈಯಿಂದ ಮಾಲಾರ್ಪಣೆಯನ್ನು ಮಾಡುವುದು ಕ್ರಮ. ಅದು ಈ ವರ್ಷ ಜರುಗಲಿಲ್ಲ.ನಮ್ಮ ಸಮುದಾಯದ ಹೆಣ್ಣು ಮಕ್ಕಳು ಹಾಲಹಳ್ಳಕ್ಕೆ ಹೋಗಿ 101 ಕಳಶಗಳನ್ನು ಪೂಜಿಸಿ ತಂಬಡಿಗೇರಿ ಮಾರ್ಗವಾಗಿ ಮೆರವಣಿಗೆ ಬಂದು, ಆ ಜಲವನ್ನು ಮಾದೇಶ್ವರ ಸ್ವಾಮಿಗೆ ಅಭಿಷೇಕ ಮಾಡಿ ತೀರ್ಥವನ್ನು ಮಕ್ಕಳಿಗೆ ನೀಡಲಾಗುತಿತ್ತು. ಈ ವರ್ಷ ತೀರ್ಥ ಪ್ರಸಾದ ನೀಡಿಲ್ಲ’ ಎಂದು ಅವರು ಆರೋಪಿಸಿದ್ದಾರೆ.</p>.<p>‘ರಥೋತ್ಸವದ ಬದಲಿಗೆ ಆನೆ ವಾಹನ ಉತ್ಸವ ನಡೆಸಲಾಗಿತ್ತು. ಈ ಉತ್ಸವದ ವೇಳೆ ಹೆಣ್ಣು ಮಕ್ಕಳು ಬೆಲ್ಲದ ಆರತಿಯನ್ನು ಮಾಡಬೇಕಿತ್ತು. ಅದು ಕೂಡ ನಡೆದಿಲ್ಲ’ ಎಂದು ಪುಟ್ಟಮಾದಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead">ಆರೋಪ ನಿರಾಕರಣೆ: ಬೇಡಗಂಪಣ ಸಮುದಾಯದ ಅಧ್ಯಕ್ಷ ಪುಟ್ಟಣ್ಣ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಮಕ್ಕಳಿಗೆ ತೀರ್ಥಪ್ರಸಾದ ಸಿಕ್ಕಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.</p>.<p>‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅವರು, ‘ವರ್ಷಕ್ಕೊಮ್ಮೆ ಜರುಗುವ ಹಾಲರವಿ ಉತ್ಸವದಲ್ಲಿ ತೀರ್ಥ ಪ್ರಸಾದ ದೊರೆಯದಿರುವುದು ನಮಗೂ ಬೇಸರ ತರಿಸಿದೆ. ಈ ಬಾರಿ ಕೋವಿಡ್ ಕಾರಣದಿಂದ ಪೂಜಾ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗಿದೆ. ಕತ್ತಿ ಪವಾಡದ ಸ್ಥಳದಲ್ಲಿ ಎಲ್ಲ ಸಂಪ್ರದಾಯಗಳನ್ನು ಪಾಲಿಸಲಾಗಿದೆ. ಯಾವುದೇ ತೊಂದರೆಯಾಗದೆ ಕತ್ತಿ ಪವಾಡ ಸೇವೆ ಸರಾಗವಾಗಿ ಜರುಗಿದೆ’ ಎಂದು ಸ್ಪಷ್ಟಪಡಿಸಿದರು.</p>.<p>‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇಶ್ವರ ಬೆಟ್ಟ:</strong> ‘ಬೆಟ್ಟದಲ್ಲಿ ಜರುಗಿದ ದೀಪಾವಳಿ ಜಾತ್ರೆಯಲ್ಲಿ ನಡೆದ ಹಾಲರವಿ ಉತ್ಸವವು ಸಾಂಪ್ರದಾಯಿಕವಾಗಿ ನೆರವೇರಿಲ್ಲ. ಹಾಲರವಿ ತಂದ ಹೆಣ್ಣು ಮಕ್ಕಳಿಗೆ ಮಾದಪ್ಪನ ತೀರ್ಥ ಪ್ರಸಾದ ನೀಡಿಲ್ಲ’ ಎಂದು ಬೇಡಗಂಪಣದ ಸಮುದಾಯದ ಜೆ.ಪುಟ್ಟಮಾದಯ್ಯ ಅವರು ಆರೋಪಿಸಿದ್ದಾರೆ.</p>.<p>ಜೆ ಪುಟ್ಟಮಾದಯ್ಯ ಮನೆತನದವರು ಪೂರ್ವಜರ ಕಾಲದಿಂದಲೂ ಬೆಟ್ಟದಲ್ಲಿ ಕತ್ತಿ ಪವಾಡ ಕಾರ್ಯವನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ.</p>.<p>ಈ ಬಾರಿ ಹಾಲರವಿ ಹಾಗೂ ಕತ್ತಿಪವಾಡದ ಹೊಣೆಯನ್ನು ಹೊತ್ತು ಮುಂದಾಳತ್ವ ವಹಿಸಿದ್ದವರು ಉತ್ಸವವನ್ನು ಹಾಗೂ ಕತ್ತಿ ಪವಾಡ ಪೂಜೆಗಳನ್ನು ಬೇಡಗಂಪಣ ಸಾಂಪ್ರದಾಯದಂತೆ ನಡೆಸಲಿಲ್ಲ ಎಂದು ಅವರು ದೂರಿದ್ದಾರೆ.</p>.<p>‘ಕತ್ತಿ ಪವಾಡದ ಸಂದರ್ಭದಲ್ಲಿ ಸಾಲೂರು ಮಠದ ಪೀಠಾಧಿಪತಿಗಳು ಕತ್ತಿ ಪವಾಡ ಜರುಗುವವ ಕತ್ತಿಯನ್ನು ಪೂಜಿಸಿ, ಪವಾಡ ಮಾಡುವ ಅರ್ಚಕನಿಗೆ ಅವರ ಕೈಯಿಂದ ಮಾಲಾರ್ಪಣೆಯನ್ನು ಮಾಡುವುದು ಕ್ರಮ. ಅದು ಈ ವರ್ಷ ಜರುಗಲಿಲ್ಲ.ನಮ್ಮ ಸಮುದಾಯದ ಹೆಣ್ಣು ಮಕ್ಕಳು ಹಾಲಹಳ್ಳಕ್ಕೆ ಹೋಗಿ 101 ಕಳಶಗಳನ್ನು ಪೂಜಿಸಿ ತಂಬಡಿಗೇರಿ ಮಾರ್ಗವಾಗಿ ಮೆರವಣಿಗೆ ಬಂದು, ಆ ಜಲವನ್ನು ಮಾದೇಶ್ವರ ಸ್ವಾಮಿಗೆ ಅಭಿಷೇಕ ಮಾಡಿ ತೀರ್ಥವನ್ನು ಮಕ್ಕಳಿಗೆ ನೀಡಲಾಗುತಿತ್ತು. ಈ ವರ್ಷ ತೀರ್ಥ ಪ್ರಸಾದ ನೀಡಿಲ್ಲ’ ಎಂದು ಅವರು ಆರೋಪಿಸಿದ್ದಾರೆ.</p>.<p>‘ರಥೋತ್ಸವದ ಬದಲಿಗೆ ಆನೆ ವಾಹನ ಉತ್ಸವ ನಡೆಸಲಾಗಿತ್ತು. ಈ ಉತ್ಸವದ ವೇಳೆ ಹೆಣ್ಣು ಮಕ್ಕಳು ಬೆಲ್ಲದ ಆರತಿಯನ್ನು ಮಾಡಬೇಕಿತ್ತು. ಅದು ಕೂಡ ನಡೆದಿಲ್ಲ’ ಎಂದು ಪುಟ್ಟಮಾದಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead">ಆರೋಪ ನಿರಾಕರಣೆ: ಬೇಡಗಂಪಣ ಸಮುದಾಯದ ಅಧ್ಯಕ್ಷ ಪುಟ್ಟಣ್ಣ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಮಕ್ಕಳಿಗೆ ತೀರ್ಥಪ್ರಸಾದ ಸಿಕ್ಕಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.</p>.<p>‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅವರು, ‘ವರ್ಷಕ್ಕೊಮ್ಮೆ ಜರುಗುವ ಹಾಲರವಿ ಉತ್ಸವದಲ್ಲಿ ತೀರ್ಥ ಪ್ರಸಾದ ದೊರೆಯದಿರುವುದು ನಮಗೂ ಬೇಸರ ತರಿಸಿದೆ. ಈ ಬಾರಿ ಕೋವಿಡ್ ಕಾರಣದಿಂದ ಪೂಜಾ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗಿದೆ. ಕತ್ತಿ ಪವಾಡದ ಸ್ಥಳದಲ್ಲಿ ಎಲ್ಲ ಸಂಪ್ರದಾಯಗಳನ್ನು ಪಾಲಿಸಲಾಗಿದೆ. ಯಾವುದೇ ತೊಂದರೆಯಾಗದೆ ಕತ್ತಿ ಪವಾಡ ಸೇವೆ ಸರಾಗವಾಗಿ ಜರುಗಿದೆ’ ಎಂದು ಸ್ಪಷ್ಟಪಡಿಸಿದರು.</p>.<p>‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>