ಬಂಡೀಪುರ ಮಾತ್ರವಲ್ಲದೇ, ನಾಗರಹೊಳೆ, ಕೊಡಗು ಸೇರಿದಂತೆ ಬೇರೆ ಕಡೆಗಳಲ್ಲೂ ಅರಣ್ಯ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಸೂಕ್ಷ್ಮ ಮತಿ, ಬುದ್ಧಿವಂತಿಕೆಗೆ ಹೆಸರಾಗಿದ್ದ ರಾಣಾ, ಅಧಿಕಾರಿಗಳಿಂದ ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದ ಅನೇಕ ಪ್ರಕರಣಗಳನ್ನೂ ‘ರಾಣಾ’ ಭೇದಿಸಿತ್ತು.ವನ್ಯಜೀವಿಗಳ ಇರುವಿಕೆ ಹಾಗೂ ಜಾಡನ್ನು ಹಲವು ಕಿ.ಮೀ ದೂರದಿಂದಲೇ ಪತ್ತೆ ಹಚ್ಚುವುದರಲ್ಲೂ ನಿಷ್ಣಾತವಾಗಿದ್ದ ಈ ಶ್ವಾನದ ನೆರವನ್ನು ಹುಲಿಗಳ ಸೆರೆ ಕಾರ್ಯಾಚರಣೆಗಳಲ್ಲಿ ಅಧಿಕಾರಿಗಳು ಬಳಸುತ್ತಿದ್ದರು.