ದಕ್ಷಯಜ್ಞ, ತ್ರಿಜನ್ಮ ಮೋಕ್ಷ, ಕುರುಕ್ಷೇತ್ರ ರಾಜಸುಯಾಗ, ಸಂಪೂರ್ಣ ರಾಮಾಯಣ, ದಾನಶೂರ ಕರ್ಣ, ರತ್ನ ಮಾಂಗಲ್ಯ, ಗಂಡನ ಮನೆ, ಅರಿಸಿನ ಕುಂಕುಮ... ಹೀಗೆ ಹಲವು ಪ್ರತಿಷ್ಠಿತ ನಾಟಕಗಳಲ್ಲಿ ಬಣ್ಣ ಹಚ್ಚಿ ಜನಮೆಚ್ಚುಗೆ ಗಳಿಸಿದ್ದಾರೆ.ಬಿಳಿಗಿರಿರಂಗನಬೆಟ್ಟ, ಮಹದೇಶ್ವರ ಬೆಟ್ಟ, ಚಿಕ್ಕಲ್ಲೂರು, ಕಪ್ಪಡಿ, ಚಾಮರಾಜನಗರ ದಸರಾ ಮಹೋತ್ಸವದಲ್ಲಿ ನಡೆಯುವ ನಾಟಕೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.