ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ 17,266 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿತ್ತು.ಕೃಷಿ ಇಲಾಖೆಯ ಪ್ರಕಾರ, ಮಳೆಯಿಂದಾಗಿ 1,335 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ನಷ್ಟವಾಗಿದೆ. ಆ ಪೈಕಿ, ಹನೂರು ತಾಲ್ಲೂಕಿನಲ್ಲೇ 1,100 ಹೆಕ್ಟೇರ್ನಲ್ಲಿ ಫಸಲು ನೀರು ಪಾಲಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 205 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. 120 ಹೆಕ್ಟೇರ್ ಕಡಲೆ, 91 ಹೆಕ್ಟೇರ್ ಜೋಳ, 10 ಹೆಕ್ಟೇರ್ ನೆಲಗಡಲೆ ಬೆಳೆ ನಷ್ಟವಾಗಿದೆ.