ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು. ಪಕ್ಷದಲ್ಲಿ ಹೆಚ್ಚು ಪೈಪೋಟಿ ಇದ್ದುದರಿಂದ ವರಿಷ್ಠರು ತಲಾ 15 ತಿಂಗಳ ಅವಧಿಗೆ ನಾಲ್ವರು ಉಪಾಧ್ಯಕ್ಷರನ್ನಾಗಿ ಮಾಡುವ ತೀರ್ಮಾನ ಕೈಗೊಂಡಿದ್ದರು. ಅದರಂತೆ ಆಂತರಿಕ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೊದಲ ಅವಧಿಗೆ ಬಸವರಾಜು, ಎರಡನೇ ಅವಧಿಗೆ ಯೋಗೇಶ್ ಹಾಗೂ ಮೂರನೇ ಅವಧಿಗೆ ಕೆ.ಎಸ್.ಮಹೇಶ್ ಉಪಾಧ್ಯಕ್ಷರಾಗಿದ್ದರು.