ಗ್ರಾಹಕರ ವೇದಿಕೆಯ ಪ್ರಭಾರ ಅಧ್ಯಕ್ಷೆ ಎಂ.ವಿ.ಭಾರತೀ ಹಾಗೂ ಸದಸ್ಯ ಕೆ.ಎಸ್.ರಾಜು ಅವರು ದೂರುದಾರರು ಹಾಗೂ ಎದುರುದಾರರ ವಾದ ಪ್ರತಿವಾದ ಆಲಿಸಿ ಪ್ರಕರಣದಲ್ಲಿ ರೈತನಿಗೆ ನಷ್ಟ ಉಂಟಾಗಿರುವುದು ಖಚಿತವಾಗಿದೆ ಎಂದು ಹೇಳಿದ್ದರು. ಇದಕ್ಕಾಗಿ ಬೆಳೆ ನಷ್ಟ ಆಗಿರುವುದಕ್ಕೆ ₹3 ಲಕ್ಷ , ಭೂಮಿ ಹದ ಹಾಗೂ ಉಳುಮೆಗೆ, ಕಾರ್ಮಿಕರ ಕೂಲಿ ವೆಚ್ಚ ₹30 ಸಾವಿರ, ಘಟನೆಯಿಂದ ರೈತನಿಗಾಗಿರುವ ಮಾನಸಿಕ ವೇದನೆಗೆ ₹20 ಸಾವಿರ, ಪ್ರಕರಣದ ಖರ್ಚು ₹5 ಸಾವಿರ ಸೇರಿದಂತೆ ಒಟ್ಟು ₹3.55 ಲಕ್ಷ ದಂಡ ವಿಧಿಸಿ ಇದೇ 19 ರಂದು ಆದೇಶ ನೀಡಿದ್ದಾರೆ.