<p><strong>ಚಾಮರಾಜನಗರ: </strong>ಜಿಲ್ಲೆಯಲ್ಲಿ ಭಾನುವಾರ ಕೊರೊನಾ ಸೋಂಕಿತರು ಮಾತ್ರವಲ್ಲ ಮರಣ ಹೊಂದುವವರ ಸಂಖ್ಯೆಯಲ್ಲೂ ಇಳಿಕೆ ಕಂಡು ಬಂದಿದ್ದು, ಜನಸಾಮಾನ್ಯರಲ್ಲಿ ತುಸು ನೆಮ್ಮದಿ ತರಿಸಿದೆ.</p>.<p>ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಸಂಜೆ 6 ಗಂಟೆಯವರೆಗೆ ಒಟ್ಟು 6 ಮಂದಿ ಕೋವಿಡ್ ರೋಗಿಗಳು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ 799, ಶುಕ್ರವಾರ 622, ಶನಿವಾರ 535 ಮಂದಿ ಸೋಂಕಿತರಾಗಿದ್ದರು. ಭಾನುವಾರ ಇವರ ಸಂಖ್ಯೆ 444ಕ್ಕೆ ಇಳಿಕೆಯಾಗಿದೆ. 822 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.</p>.<p>ಭಾನುವಾರ ಒಟ್ಟು 931 ಮಂದಿಯನ್ನು ಹೋಂಐಸೋಲೇಷನ್ಗೆ ಕಳುಹಿಸಲಾಗಿದೆ. ಒಟ್ಟು 2,386 ಮಂದಿ ಹೋಂ ಐಸೋಲೇಷನ್ಲ್ಲಿಯೇ ಇದ್ದಾರೆ. 50 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಹೊಸ ಸೋಂಕಿತರ ಪೈಕಿ 96 ಮಂದಿ ಮಾತ್ರವೇ ಪಟ್ಟಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದ 348 ಮಂದಿ ವಿವಿಧ ಹಳ್ಳಿಗಳಿಗೆ ಸೇರಿದವರೇ ಆಗಿದ್ದಾರೆ. ಇವರಲ್ಲಿ 12 ಮಂದಿ ಮಕ್ಕಳೂ ಸೇರಿದ್ದಾರೆ.</p>.<p>ಚಾಮರಾಜನಗರ ತಾಲ್ಲೂಕಿನಲ್ಲಿ 170, ಕೊಳ್ಳೇಗಾಲದಲ್ಲಿ 108, ಹನೂರಿನಲ್ಲಿ 68, ಗುಂಡ್ಲುಪೇಟೆಯಲ್ಲಿ 67, ಯಳಂದೂರಿನಲ್ಲಿ 26 ಹಾಗೂ ಹೊರಜಿಲ್ಲೆಯ ಐವರಲ್ಲಿ ಹೊಸದಾಗಿ ಸೋಂಕು<br />ಕಾಣಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಜಿಲ್ಲೆಯಲ್ಲಿ ಭಾನುವಾರ ಕೊರೊನಾ ಸೋಂಕಿತರು ಮಾತ್ರವಲ್ಲ ಮರಣ ಹೊಂದುವವರ ಸಂಖ್ಯೆಯಲ್ಲೂ ಇಳಿಕೆ ಕಂಡು ಬಂದಿದ್ದು, ಜನಸಾಮಾನ್ಯರಲ್ಲಿ ತುಸು ನೆಮ್ಮದಿ ತರಿಸಿದೆ.</p>.<p>ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಸಂಜೆ 6 ಗಂಟೆಯವರೆಗೆ ಒಟ್ಟು 6 ಮಂದಿ ಕೋವಿಡ್ ರೋಗಿಗಳು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ 799, ಶುಕ್ರವಾರ 622, ಶನಿವಾರ 535 ಮಂದಿ ಸೋಂಕಿತರಾಗಿದ್ದರು. ಭಾನುವಾರ ಇವರ ಸಂಖ್ಯೆ 444ಕ್ಕೆ ಇಳಿಕೆಯಾಗಿದೆ. 822 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.</p>.<p>ಭಾನುವಾರ ಒಟ್ಟು 931 ಮಂದಿಯನ್ನು ಹೋಂಐಸೋಲೇಷನ್ಗೆ ಕಳುಹಿಸಲಾಗಿದೆ. ಒಟ್ಟು 2,386 ಮಂದಿ ಹೋಂ ಐಸೋಲೇಷನ್ಲ್ಲಿಯೇ ಇದ್ದಾರೆ. 50 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಹೊಸ ಸೋಂಕಿತರ ಪೈಕಿ 96 ಮಂದಿ ಮಾತ್ರವೇ ಪಟ್ಟಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದ 348 ಮಂದಿ ವಿವಿಧ ಹಳ್ಳಿಗಳಿಗೆ ಸೇರಿದವರೇ ಆಗಿದ್ದಾರೆ. ಇವರಲ್ಲಿ 12 ಮಂದಿ ಮಕ್ಕಳೂ ಸೇರಿದ್ದಾರೆ.</p>.<p>ಚಾಮರಾಜನಗರ ತಾಲ್ಲೂಕಿನಲ್ಲಿ 170, ಕೊಳ್ಳೇಗಾಲದಲ್ಲಿ 108, ಹನೂರಿನಲ್ಲಿ 68, ಗುಂಡ್ಲುಪೇಟೆಯಲ್ಲಿ 67, ಯಳಂದೂರಿನಲ್ಲಿ 26 ಹಾಗೂ ಹೊರಜಿಲ್ಲೆಯ ಐವರಲ್ಲಿ ಹೊಸದಾಗಿ ಸೋಂಕು<br />ಕಾಣಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>