ಹಿಂದಿನ ಕಾಲದಲ್ಲಿ ತಟ್ಟೆ, ಲೋಟ, ಮುಚ್ಚಳ ಸೇರಿದಂತೆ ಅಡುಗೆ ಮಾಡಲು ಮಣ್ಣಿನ ಪಾತ್ರೆಗಳನ್ನೇ ಬಳಸುತ್ತಿದ್ದರು. ಈಗ ಇವುಗಳನ್ನು ಬಳಸುವವರು ಬೆರಳೆಣಿಯಕಷ್ಟು ಜನರು ಮಾತ್ರ. ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ತಿಂದರೆ ಅನಾರೋಗ್ಯ ಬರುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಆದರೆ ಈಗ ಯಾರೂ ಬಳಸುವುದಿಲ್ಲ. ಕೆಲವರು ಈಗಲೂ ಮಣ್ಣಿನ ಮಡಕೆಯಲ್ಲೇ ರಾಗಿ ಮುದ್ದೆ ಮಾಡುತ್ತಾರೆ’ ಎಂದುಹೇಳುತ್ತಾರೆ ವ್ಯಾಪಾರಿಗಳು.