ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ₹13 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಆಶ್ರಮ ಶಾಲೆಗಳ ಕಟ್ಟಡ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌
Last Updated 16 ಏಪ್ರಿಲ್ 2021, 14:44 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ₹13.34 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿವಿಧ ಕಾಮಗಾರಿಗಳನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಶುಕ್ರವಾರ ಉದ್ಘಾಟಿಸಿದರು.

ಲೊಕ್ಕನಹಳ್ಳಿ ಸಮೀಪದ ಶಿರಗೋಡು ಬಳಿ ₹4.63 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ66/11 ಕೆ.ವಿ ವಿದ್ಯತ್ ಉಪಕೇಂದ್ರದ ಶಂಕುಸ್ಥಾಪನೆ , ₹1.95 ಕೋಟಿ ವೆಚ್ಚದಲ್ಲಿ ಲೊಕ್ಕನಹಳ್ಳಿ ಗ್ರಾಮದಲ್ಲಿ ಪ್ರಗತಿ ಹಂತದಲ್ಲಿರುವ ಪಬ್ಲಿಕ್ ಶಾಲೆ ಕಟ್ಟಡ ನಿರ್ಮಾಣದ ಕಾಮಗಾರಿ ಪರಿಶೀಲನೆ, ₹2 ಕೋಟಿ ವೆಚ್ಚದಲ್ಲಿ ಒಡೆಯರಪಾಳ್ಯ ಟಿಬೆಟಿಯನ್ ಕಾಲೋನಿ ರಸ್ತೆಗೆ ಭೂಮಿಪೂಜೆ ನಡೆಸಿದರು.

₹1.99 ಕೋಟಿ ವೆಚ್ಚದಲ್ಲಿ ಹಿರಿಯಂಬಲ ಗ್ರಾಮದಲ್ಲಿ ನಿರ್ಮಿಸಿರುವ ಗಿರಿಜನ ಆಶ್ರಮ ಶಾಲೆ, ₹1.99 ಕೋಟಿ ವೆಚ್ಚದಲ್ಲಿ ಅರ್ಧನಾರೀಪುರ ಗ್ರಾಮದಲ್ಲಿ ನಿರ್ಮಿಸಿರುವ ಗಿರಿಜನ ಆಶ್ರಮ ವಸತಿ ಶಾಲೆ ಹಾಗೂ ₹78 ಲಕ್ಷ ವೆಚ್ಚದಲ್ಲಿ ಬೈಲೂರು ಗ್ರಾಮದಲ್ಲಿ ನಿರ್ಮಿಸಿರುವ ಮಾಧ್ಯಮಿಕ ಶಾಲಾ ಕಟ್ಟಡಗಳನ್ನೂ ಅವರು ಉದ್ಘಾಟಿಸಿದರು.

ಶಿರಗೋಡು ಗ್ರಾಮದಲ್ಲಿ 66/11 ಕೆ.ವಿ ವಿದ್ಯತ್ ಉಪಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಲೊಕ್ಕನಹಳ್ಳಿ ವ್ಯಾಪ್ತಿಯ ಶಿರಗೋಡು, ಚಿಕ್ಕಮಾಲಾಪುರ, ಕಂಡಯ್ಯನಪಾಳ್ಯ, ಬೂದಿಪಡಗ ಮುಂತಾದ ಗ್ರಾಮಗಳಿಗೆ ವಿದ್ಯುತ್ ಪೂರೈಸಲು ಇದರಿಂದ ಸಹಾಯವಾಗಲಿದೆ. ಯಾವುದೇ ಅಡಚಣೆಯಿಲ್ಲದೇ ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಸಬೇಕು ಉದ್ದೇಶದಿಂದ ಈ ಭಾಗದಲ್ಲಿ ಉಪ ಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದರು.

ಲೊಕ್ಕನಹಳ್ಳಿನ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಇಂಗ್ಲಿಷ್ ಪಬ್ಲಿಕ್ ಶಾಲಾ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಮಕ್ಕಳೊಂದಿಗೆ ಸಂವಾದ: ಕಟ್ಟಡ ಕಾಮಗಾರಿ ಪರಿಶೀಲನೆ ಬಳಿಕ ಸಚಿವರು ಕಾಲೇಜು ಮಕ್ಕಳೊಂದಿಗೆ ಕೆಲ ಕಾಲ ಸಂವಾದ ನಡೆಸಿದರು. ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬೇಕೇ ಬೇಡವೇ ಎಂದು ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿದರು.

‘ತಾಲ್ಲೂಕಿನಅರ್ಧನಾರಿಪುರಮತ್ತುಹಿರಿಯಂಬಲಗ್ರಾಮಗಳಲ್ಲಿತಲಾ ₹2ಕೋಟಿ ವೆಚ್ಚದಲ್ಲಿನಿರ್ಮಾಣಮಾಡಿರುವ ಗಿರಿಜನ ಬುಡಕಟ್ಟು ಆಶ್ರಮಶಾಲೆಗಳಕಟ್ಟಡಗಳನ್ನುನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 120 ಆಶ್ರಮಶಾಲೆಗಳಿದ್ದು, ಅದರಲ್ಲಿತಾಲ್ಲೂಕಿನಲ್ಲಿಮೂರು ಆಶ್ರಮ ಶಾಲೆ ಹಾಗೂ10 ಹಾಸ್ಟೆಲ್‌ಗಳನ್ನುನಿರ್ಮಾಣಮಾಡಲಾಗಿದೆ. ಗ್ರಾಮದಲ್ಲಿ ಹಲವಾರುವಿದ್ಯಾರ್ಥಿಗಳು ಪಿಯುಸಿ,ಬಿ.ಎ,ಎಂ.ಎಸ್‌ಸಿ ಓದಿಈಗಾಗಲೇಉತ್ತಮಶಿಕ್ಷಣಪಡೆಯುವತ್ತಗಿರಿಜನರುಹೆಜ್ಜೆಹಾಕಿದ್ದು ಮುಂದಿನವರ್ಷಗಳಲ್ಲಿಗಿರಿಜನಗ್ರಾಮಗಳು ಶೇ 100 ಸಾಕ್ಷರಗ್ರಾಮಗಳಾಗಲಿವೆ. ಪೋಷಕರುಹೆಣ್ಣುಮಕ್ಕಳಿಗೆಉತ್ತಮಶಿಕ್ಷಣಕೊಡಿಸಬೇಕುಅರ್ಥದಲ್ಲೇಶಿಕ್ಷಣವನ್ನುಮುಟುಕುಗೊಳಿಸಿಮದುವೆ ಮಾಡಬಾರದು’ ಎಂದುಸಲಹೆನೀಡಿದರು.

ಶಾಸಕಆರ್.ನರೇಂದ್ರ,ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಶಶಿಕಲಾ,ಶಿಕ್ಷಣಮತ್ತುಸ್ಥಾಯಿಸಮಿತಿಅಧ್ಯಕ್ಷರಮೇಶ್, ಸದಸ್ಯೆಮರಗದಮಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಸವಿತಾ, ಉಪಾಧ್ಯಕ್ಷೆರುಕ್ಮಿಣಿಗ್ರಾಮಪಂಚಾಯಿತಿ ಅಧ್ಯಕ್ಷೆಗೌರಿ,ಉಪಾಧ್ಯಕ್ಷೆಮೇಘ, ತಹಸೀಲ್ದಾರ್ ನಾಗರಾಜು, ಜಿಲ್ಲಾಪರಿಶಿಷ್ಟ ವರ್ಗಗಳಕಲ್ಯಾಣಾಧಿಕಾರಿಹೊನ್ನೇಗೌಡಇ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT