<p><strong>ಹನೂರು: </strong>ತಾಲ್ಲೂಕಿನ ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ₹13.34 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿವಿಧ ಕಾಮಗಾರಿಗಳನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಶುಕ್ರವಾರ ಉದ್ಘಾಟಿಸಿದರು.</p>.<p>ಲೊಕ್ಕನಹಳ್ಳಿ ಸಮೀಪದ ಶಿರಗೋಡು ಬಳಿ ₹4.63 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ66/11 ಕೆ.ವಿ ವಿದ್ಯತ್ ಉಪಕೇಂದ್ರದ ಶಂಕುಸ್ಥಾಪನೆ , ₹1.95 ಕೋಟಿ ವೆಚ್ಚದಲ್ಲಿ ಲೊಕ್ಕನಹಳ್ಳಿ ಗ್ರಾಮದಲ್ಲಿ ಪ್ರಗತಿ ಹಂತದಲ್ಲಿರುವ ಪಬ್ಲಿಕ್ ಶಾಲೆ ಕಟ್ಟಡ ನಿರ್ಮಾಣದ ಕಾಮಗಾರಿ ಪರಿಶೀಲನೆ, ₹2 ಕೋಟಿ ವೆಚ್ಚದಲ್ಲಿ ಒಡೆಯರಪಾಳ್ಯ ಟಿಬೆಟಿಯನ್ ಕಾಲೋನಿ ರಸ್ತೆಗೆ ಭೂಮಿಪೂಜೆ ನಡೆಸಿದರು.</p>.<p>₹1.99 ಕೋಟಿ ವೆಚ್ಚದಲ್ಲಿ ಹಿರಿಯಂಬಲ ಗ್ರಾಮದಲ್ಲಿ ನಿರ್ಮಿಸಿರುವ ಗಿರಿಜನ ಆಶ್ರಮ ಶಾಲೆ, ₹1.99 ಕೋಟಿ ವೆಚ್ಚದಲ್ಲಿ ಅರ್ಧನಾರೀಪುರ ಗ್ರಾಮದಲ್ಲಿ ನಿರ್ಮಿಸಿರುವ ಗಿರಿಜನ ಆಶ್ರಮ ವಸತಿ ಶಾಲೆ ಹಾಗೂ ₹78 ಲಕ್ಷ ವೆಚ್ಚದಲ್ಲಿ ಬೈಲೂರು ಗ್ರಾಮದಲ್ಲಿ ನಿರ್ಮಿಸಿರುವ ಮಾಧ್ಯಮಿಕ ಶಾಲಾ ಕಟ್ಟಡಗಳನ್ನೂ ಅವರು ಉದ್ಘಾಟಿಸಿದರು.</p>.<p>ಶಿರಗೋಡು ಗ್ರಾಮದಲ್ಲಿ 66/11 ಕೆ.ವಿ ವಿದ್ಯತ್ ಉಪಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಲೊಕ್ಕನಹಳ್ಳಿ ವ್ಯಾಪ್ತಿಯ ಶಿರಗೋಡು, ಚಿಕ್ಕಮಾಲಾಪುರ, ಕಂಡಯ್ಯನಪಾಳ್ಯ, ಬೂದಿಪಡಗ ಮುಂತಾದ ಗ್ರಾಮಗಳಿಗೆ ವಿದ್ಯುತ್ ಪೂರೈಸಲು ಇದರಿಂದ ಸಹಾಯವಾಗಲಿದೆ. ಯಾವುದೇ ಅಡಚಣೆಯಿಲ್ಲದೇ ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಸಬೇಕು ಉದ್ದೇಶದಿಂದ ಈ ಭಾಗದಲ್ಲಿ ಉಪ ಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದರು.</p>.<p>ಲೊಕ್ಕನಹಳ್ಳಿನ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಇಂಗ್ಲಿಷ್ ಪಬ್ಲಿಕ್ ಶಾಲಾ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.</p>.<p>ಮಕ್ಕಳೊಂದಿಗೆ ಸಂವಾದ: ಕಟ್ಟಡ ಕಾಮಗಾರಿ ಪರಿಶೀಲನೆ ಬಳಿಕ ಸಚಿವರು ಕಾಲೇಜು ಮಕ್ಕಳೊಂದಿಗೆ ಕೆಲ ಕಾಲ ಸಂವಾದ ನಡೆಸಿದರು. ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬೇಕೇ ಬೇಡವೇ ಎಂದು ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿದರು.</p>.<p>‘ತಾಲ್ಲೂಕಿನಅರ್ಧನಾರಿಪುರಮತ್ತುಹಿರಿಯಂಬಲಗ್ರಾಮಗಳಲ್ಲಿತಲಾ ₹2ಕೋಟಿ ವೆಚ್ಚದಲ್ಲಿನಿರ್ಮಾಣಮಾಡಿರುವ ಗಿರಿಜನ ಬುಡಕಟ್ಟು ಆಶ್ರಮಶಾಲೆಗಳಕಟ್ಟಡಗಳನ್ನುನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 120 ಆಶ್ರಮಶಾಲೆಗಳಿದ್ದು, ಅದರಲ್ಲಿತಾಲ್ಲೂಕಿನಲ್ಲಿಮೂರು ಆಶ್ರಮ ಶಾಲೆ ಹಾಗೂ10 ಹಾಸ್ಟೆಲ್ಗಳನ್ನುನಿರ್ಮಾಣಮಾಡಲಾಗಿದೆ. ಗ್ರಾಮದಲ್ಲಿ ಹಲವಾರುವಿದ್ಯಾರ್ಥಿಗಳು ಪಿಯುಸಿ,ಬಿ.ಎ,ಎಂ.ಎಸ್ಸಿ ಓದಿಈಗಾಗಲೇಉತ್ತಮಶಿಕ್ಷಣಪಡೆಯುವತ್ತಗಿರಿಜನರುಹೆಜ್ಜೆಹಾಕಿದ್ದು ಮುಂದಿನವರ್ಷಗಳಲ್ಲಿಗಿರಿಜನಗ್ರಾಮಗಳು ಶೇ 100 ಸಾಕ್ಷರಗ್ರಾಮಗಳಾಗಲಿವೆ. ಪೋಷಕರುಹೆಣ್ಣುಮಕ್ಕಳಿಗೆಉತ್ತಮಶಿಕ್ಷಣಕೊಡಿಸಬೇಕುಅರ್ಥದಲ್ಲೇಶಿಕ್ಷಣವನ್ನುಮುಟುಕುಗೊಳಿಸಿಮದುವೆ ಮಾಡಬಾರದು’ ಎಂದುಸಲಹೆನೀಡಿದರು.</p>.<p>ಶಾಸಕಆರ್.ನರೇಂದ್ರ,ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಶಶಿಕಲಾ,ಶಿಕ್ಷಣಮತ್ತುಸ್ಥಾಯಿಸಮಿತಿಅಧ್ಯಕ್ಷರಮೇಶ್, ಸದಸ್ಯೆಮರಗದಮಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಸವಿತಾ, ಉಪಾಧ್ಯಕ್ಷೆರುಕ್ಮಿಣಿಗ್ರಾಮಪಂಚಾಯಿತಿ ಅಧ್ಯಕ್ಷೆಗೌರಿ,ಉಪಾಧ್ಯಕ್ಷೆಮೇಘ, ತಹಸೀಲ್ದಾರ್ ನಾಗರಾಜು, ಜಿಲ್ಲಾಪರಿಶಿಷ್ಟ ವರ್ಗಗಳಕಲ್ಯಾಣಾಧಿಕಾರಿಹೊನ್ನೇಗೌಡಇ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನೂರು: </strong>ತಾಲ್ಲೂಕಿನ ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ₹13.34 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿವಿಧ ಕಾಮಗಾರಿಗಳನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಶುಕ್ರವಾರ ಉದ್ಘಾಟಿಸಿದರು.</p>.<p>ಲೊಕ್ಕನಹಳ್ಳಿ ಸಮೀಪದ ಶಿರಗೋಡು ಬಳಿ ₹4.63 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ66/11 ಕೆ.ವಿ ವಿದ್ಯತ್ ಉಪಕೇಂದ್ರದ ಶಂಕುಸ್ಥಾಪನೆ , ₹1.95 ಕೋಟಿ ವೆಚ್ಚದಲ್ಲಿ ಲೊಕ್ಕನಹಳ್ಳಿ ಗ್ರಾಮದಲ್ಲಿ ಪ್ರಗತಿ ಹಂತದಲ್ಲಿರುವ ಪಬ್ಲಿಕ್ ಶಾಲೆ ಕಟ್ಟಡ ನಿರ್ಮಾಣದ ಕಾಮಗಾರಿ ಪರಿಶೀಲನೆ, ₹2 ಕೋಟಿ ವೆಚ್ಚದಲ್ಲಿ ಒಡೆಯರಪಾಳ್ಯ ಟಿಬೆಟಿಯನ್ ಕಾಲೋನಿ ರಸ್ತೆಗೆ ಭೂಮಿಪೂಜೆ ನಡೆಸಿದರು.</p>.<p>₹1.99 ಕೋಟಿ ವೆಚ್ಚದಲ್ಲಿ ಹಿರಿಯಂಬಲ ಗ್ರಾಮದಲ್ಲಿ ನಿರ್ಮಿಸಿರುವ ಗಿರಿಜನ ಆಶ್ರಮ ಶಾಲೆ, ₹1.99 ಕೋಟಿ ವೆಚ್ಚದಲ್ಲಿ ಅರ್ಧನಾರೀಪುರ ಗ್ರಾಮದಲ್ಲಿ ನಿರ್ಮಿಸಿರುವ ಗಿರಿಜನ ಆಶ್ರಮ ವಸತಿ ಶಾಲೆ ಹಾಗೂ ₹78 ಲಕ್ಷ ವೆಚ್ಚದಲ್ಲಿ ಬೈಲೂರು ಗ್ರಾಮದಲ್ಲಿ ನಿರ್ಮಿಸಿರುವ ಮಾಧ್ಯಮಿಕ ಶಾಲಾ ಕಟ್ಟಡಗಳನ್ನೂ ಅವರು ಉದ್ಘಾಟಿಸಿದರು.</p>.<p>ಶಿರಗೋಡು ಗ್ರಾಮದಲ್ಲಿ 66/11 ಕೆ.ವಿ ವಿದ್ಯತ್ ಉಪಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಲೊಕ್ಕನಹಳ್ಳಿ ವ್ಯಾಪ್ತಿಯ ಶಿರಗೋಡು, ಚಿಕ್ಕಮಾಲಾಪುರ, ಕಂಡಯ್ಯನಪಾಳ್ಯ, ಬೂದಿಪಡಗ ಮುಂತಾದ ಗ್ರಾಮಗಳಿಗೆ ವಿದ್ಯುತ್ ಪೂರೈಸಲು ಇದರಿಂದ ಸಹಾಯವಾಗಲಿದೆ. ಯಾವುದೇ ಅಡಚಣೆಯಿಲ್ಲದೇ ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಸಬೇಕು ಉದ್ದೇಶದಿಂದ ಈ ಭಾಗದಲ್ಲಿ ಉಪ ಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದರು.</p>.<p>ಲೊಕ್ಕನಹಳ್ಳಿನ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಇಂಗ್ಲಿಷ್ ಪಬ್ಲಿಕ್ ಶಾಲಾ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.</p>.<p>ಮಕ್ಕಳೊಂದಿಗೆ ಸಂವಾದ: ಕಟ್ಟಡ ಕಾಮಗಾರಿ ಪರಿಶೀಲನೆ ಬಳಿಕ ಸಚಿವರು ಕಾಲೇಜು ಮಕ್ಕಳೊಂದಿಗೆ ಕೆಲ ಕಾಲ ಸಂವಾದ ನಡೆಸಿದರು. ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬೇಕೇ ಬೇಡವೇ ಎಂದು ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿದರು.</p>.<p>‘ತಾಲ್ಲೂಕಿನಅರ್ಧನಾರಿಪುರಮತ್ತುಹಿರಿಯಂಬಲಗ್ರಾಮಗಳಲ್ಲಿತಲಾ ₹2ಕೋಟಿ ವೆಚ್ಚದಲ್ಲಿನಿರ್ಮಾಣಮಾಡಿರುವ ಗಿರಿಜನ ಬುಡಕಟ್ಟು ಆಶ್ರಮಶಾಲೆಗಳಕಟ್ಟಡಗಳನ್ನುನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 120 ಆಶ್ರಮಶಾಲೆಗಳಿದ್ದು, ಅದರಲ್ಲಿತಾಲ್ಲೂಕಿನಲ್ಲಿಮೂರು ಆಶ್ರಮ ಶಾಲೆ ಹಾಗೂ10 ಹಾಸ್ಟೆಲ್ಗಳನ್ನುನಿರ್ಮಾಣಮಾಡಲಾಗಿದೆ. ಗ್ರಾಮದಲ್ಲಿ ಹಲವಾರುವಿದ್ಯಾರ್ಥಿಗಳು ಪಿಯುಸಿ,ಬಿ.ಎ,ಎಂ.ಎಸ್ಸಿ ಓದಿಈಗಾಗಲೇಉತ್ತಮಶಿಕ್ಷಣಪಡೆಯುವತ್ತಗಿರಿಜನರುಹೆಜ್ಜೆಹಾಕಿದ್ದು ಮುಂದಿನವರ್ಷಗಳಲ್ಲಿಗಿರಿಜನಗ್ರಾಮಗಳು ಶೇ 100 ಸಾಕ್ಷರಗ್ರಾಮಗಳಾಗಲಿವೆ. ಪೋಷಕರುಹೆಣ್ಣುಮಕ್ಕಳಿಗೆಉತ್ತಮಶಿಕ್ಷಣಕೊಡಿಸಬೇಕುಅರ್ಥದಲ್ಲೇಶಿಕ್ಷಣವನ್ನುಮುಟುಕುಗೊಳಿಸಿಮದುವೆ ಮಾಡಬಾರದು’ ಎಂದುಸಲಹೆನೀಡಿದರು.</p>.<p>ಶಾಸಕಆರ್.ನರೇಂದ್ರ,ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಶಶಿಕಲಾ,ಶಿಕ್ಷಣಮತ್ತುಸ್ಥಾಯಿಸಮಿತಿಅಧ್ಯಕ್ಷರಮೇಶ್, ಸದಸ್ಯೆಮರಗದಮಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಸವಿತಾ, ಉಪಾಧ್ಯಕ್ಷೆರುಕ್ಮಿಣಿಗ್ರಾಮಪಂಚಾಯಿತಿ ಅಧ್ಯಕ್ಷೆಗೌರಿ,ಉಪಾಧ್ಯಕ್ಷೆಮೇಘ, ತಹಸೀಲ್ದಾರ್ ನಾಗರಾಜು, ಜಿಲ್ಲಾಪರಿಶಿಷ್ಟ ವರ್ಗಗಳಕಲ್ಯಾಣಾಧಿಕಾರಿಹೊನ್ನೇಗೌಡಇ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>