ಹನೂರು ತಾಲ್ಲೂಕಿನ ಕೆ.ಗುಂಡಾಪುರ ಬಳಿಯಿರುವ ಉಡುತೊರೆ ಜಲಾಶಯದಲ್ಲಿ ನೀರು ಬಹುತೇಕ ಖಾಲಿಯಾಗಿದೆ
ಹೂಳೆತ್ತಿಸಲು ಸಕಾಲ
ಜಲಾಶಯಗಳಲ್ಲಿ ನೀರು ತಳಮಟ್ಟದವರೆಗೆ ಸಂಪೂರ್ಣವಾಗಿ ಬತ್ತಿಹೋಗಿ ನೀರಿನ ಸಮಸ್ಯೆ ತಲೆದೋರುವ ಸಂಭವ ಇದ್ದರೂ ಇದೇ ಸಮಯಲ್ಲಿ ಜಲಾಶಯಗಳಲ್ಲಿನ ಹೂಳನ್ನು ತೆರವು ಮಾಡುವುದಕ್ಕೆ ಅವಕಾಶ ಇದೆ. ‘ನೀರಾವರಿ ಇಲಾಖೆಗಳು ಈ ಸಂದರ್ಭವನ್ನು ಬಳಸಿಕೊಂಡು ಜಲಾಶಯಗಳಲ್ಲಿ ಹೂಳೆತ್ತಿಸಿದರೆ ಜಲಾಶಯಗಳ ನೀರಿನ ಸಂಗ್ರಹಣಾ ಸಾಮಾರ್ಥ್ಯ ಹೆಚ್ಚುವುದರ ಜತೆಗೆ ಧೀರ್ಘಕಾಲ ನೀರು ಜಲಾಶಯಗಳಲ್ಲಿ ಉಳಿಸಯುವಂತೆ ಮಾಡಬಹುದು. ಇದನ್ನು ಅಧಿಕಾರಿಗಳು ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದು ತಾಲ್ಲೂಕಿನ ರೈತರು ಒತ್ತಾಯಿಸಿದರು.