‘ಪಠ್ಯ ಪರಿಷ್ಕರಣೆ ಸಮಿತಿಯು ಎಂಟು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಆಗ ಮಾತನಾಡದೆ ಈಗ ಆ ಪಠ್ಯ ಕೈಬಿಟ್ಟಿದ್ದಾರೆ, ಈ ಪಠ್ಯ ಕೈ ಬಿಟ್ಟಿದ್ದಾರೆ ಎಂದು ಆರೋಪಿಸಿದರು. ಪಠ್ಯ ಪುಸ್ತಕ ಹೊರ ಬಂದಾಗ ಆರೋಪಗಳೆಲ್ಲವೂ ಸುಳ್ಳು ಎಂದಾಯಿತು. ಪಠ್ಯ ಪರಿಷ್ಕರಣೆ ಆರಂಭವಾಗುವುದಕ್ಕೂ ಮೊದಲೇ ಟಿಪ್ಪು ಪಠ್ಯ ಕೈ ಬಿಟ್ಟಿದ್ದಾರೆ ಎಂದು ಹೇಳಿದರು. ಟಿಪ್ಪು ಪಠ್ಯ ಇದೆ ಎಂದು ಗೊತ್ತಾಯಿತೋ, ಭಗತ್ ಸಿಂಗ್ ಪಠ್ಯ ಇಲ್ಲ ಎಂದರು. ಅದು ಸುಳ್ಳು ಎಂದಾದ ಮೇಲೆ ನಾರಾಯಣ ಗುರು, ಬಸವಣ್ಣ, ಕುವೆಂಪು ಅವರ ಪಠ್ಯದ ಬಗ್ಗೆ ಮಾತನಾಡಿದರು. ಈ ಆರೋಪಗಳೂ ಸುಳ್ಳಾದ ನಂತರ ಈಗ ಜಾತಿಯ ವಿಚಾರವನ್ನು ಮುಂದಿಟ್ಟುಕೊಂಡು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ವೈಚಾರಿಕತೆಯ ಅದಃಪತನಕ್ಕೆ ಇಳಿದಿದೆ’ ಎಂದು ಸಚಿವರು ಟೀಕಿಸಿದರು.