ಕೃಷಿ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಮಾತನಾಡಿ, ‘ಕೃಷಿ ಇಲಾಖೆ ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸಲು ಹಾಗೂ ಅವುಗಳ ಮಹತ್ವ ತಿಳಿಸುವ ದೆಸೆಯಲ್ಲಿ ಕೃಷಿಕರನ್ನು ಮೇಳಕ್ಕೆ ಕಳುಹಿಸಲಾಗಿದೆ. ಸರ್ಕಾರ ನೀಡುವ ಧನಸಹಾಯ ಪಡೆದು ಅನ್ನದಾತರು ಮುಂದಿನ ದಿನಗಳಲ್ಲಿ ಸಿರಿಧಾನ್ಯ ಕೃಷಿಯಲ್ಲಿ ತೊಡಗಲು ಸಹಾಯ ಆಗಲಿದೆ. ಹೊಸ ತಳಿಯ ಹಸುಗಳ ಪರಿಚಯ, ಆಡಿನ ಹಾಲಿನ ಮಹತ್ವ, ಕಪ್ಪು ಬೆಲ್ಲ ಹಾಗೂ ಸವಿರುಚಿ ಆಹಾರಗಳ ಸಮಗ್ರ ವಿಷಯಗಳ ಬಗ್ಗೆ ಬೇಸಾಯಗಾರರು ತಿಳಿಯುವರು’ ಎಂದರು.