ನಾಟಿಗೆ ಹಿಂದೇಟು: ‘ಈ ಸಲ ಮುಂಗಾರು ಮಳೆ ಕೊರತೆ ಬಾಧಿಸಿದೆ. ಭೂಮಿ ತಂಪಾಗಿಲ್ಲ. ಜಮೀನು ಹದ ಮಾಡಲು ಬೇಸಾಯಗಾರ ಮನಸ್ಸು ಮಾಡಿಲ್ಲ. ತೆಂಗು, ಕಂಗು, ಹಣ್ಣಿನ ಗಿಡ ನೆಡಲು ಯಾವುದೇ ಯೋಜನೆ ರೂಪಿಸಿಲ್ಲ. ಹಾಗಾಗಿ, ಭೂಮಿಯನ್ನು ಬಿತ್ತನೆಗೆ ಅಣಿ ಮಾಡಿದ್ದೇವೆ. ಮಳೆ ಕೈಕೊಟ್ಟರೆ, ತೆಂಗು ಹಾಕಿದರೂ ಪ್ರಯೋಜನ ಇಲ್ಲ. ಹಾಗಾಗಿ, ಬಿತ್ತನೆ ಅವಧಿಯನ್ನು ಮುಂದೂಡಿದ್ದೇವೆ’ ಎನ್ನುತ್ತಾರೆ ಮಲಾರಪಾಳ್ಯ ರೈತ ಪ್ರದೀಪನಾಯಕ್.