ಸ್ವಾಮೀಜಿಗಳ ಪಾದಪೂಜೆ, ತೊಟ್ಟಿಲು ಶಾಸ್ತ್ರ, ಬಸವ ಜಯಂತಿ, ಮಠದ ಆರಾಧನೆಗಳು ಹಾಗೂ ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ. ಗುರುಮಲ್ಲೇಶ್ವರ, ಬಸವಣ್ಣ, ಅಕ್ಕಮಹಾದೇವಿ ವಚನಗಳು ಸೇರಿದಂತೆ ಮಹದೇಶ್ವರ, ಜಾನಪದ ಹಾಗೂ ದೇವರ ನಾಮಗಳನ್ನು ಹಾಡುತ್ತಾ ಜನರನ್ನು ರಂಜಿಸುತ್ತಾರೆ. ಇವರೊಟ್ಟಿಗೆ ಸಹ ಕಲಾವಿದರು ತಾಳ ಕಂಜರಿಯೊಂದಿಗೆ ದನಿಗೂಡಿಸುತ್ತಾರೆ.