<p><strong>ಯಳಂದೂರು: </strong>ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿಗ್ರಾಮದೇವತೆಯ ಉತ್ಸವ ಮೂರ್ತಿಯ ಮೆರವಣಿಗೆ ಪರಿಶಿಷ್ಟ ಜಾತಿಯವರ ಬೀದಿಗಳಿಗೂ ಬರಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದಕ್ಕೆ, ಗ್ರಾಮದ ಯಜಮಾನರು ತಮಗೆ ₹52,101 ದಂಡ ವಿಧಿಸಿದ್ದಾರೆ ಎಂದು ನಿಂಗರಾಜು ಎಂಬುವವರು ಆರೋಪಿಸಿದ್ದ ಪ್ರಕರಣ ಇತ್ಯರ್ಥವಾಗಿದೆ.</p>.<p>ತಹಶೀಲ್ದಾರ್ ಸುದರ್ಶನ್ ಅವರು ಸೋಮವಾರ ಗ್ರಾಮದ ಯಜಮಾನರು, ಮುಖಂಡರು ಹಾಗೂ ದೂರುದಾರರ ಜೊತೆ ಸಮಾಲೋಚನೆ ನಡೆಸಿದರು.</p>.<p>ಸುದರ್ಶನ್ ಅವರು ಮಾತನಾಡಿ, ‘ಇಂತಹ ಪ್ರಕರಣಗಳು ನಡೆಯಬಾರದು. ಒಂದು ವೇಳೆ ದಂಡ ವಿಧಿಸಿದ್ದೇ ಆದರೆ ಆ ದುಡ್ಡನ್ನು ವಾಪಸ್ ನೀಡಬೇಕು’ ಎಂದು ಹೇಳಿದರು.</p>.<p>ಗ್ರಾಮದ ಯಜಮಾನ ನಿರಂಜನ್ ಅವರು ಮಾತನಾಡಿ, ‘ಹತ್ತು ಮುಖಂಡರು ಯಾರಿಗೂ ದಂಡ ವಿಧಿಸಿಲ್ಲ. ಹಾಗಾಗಿ, ಸಮಸ್ಯೆ ಉದ್ಭವಿಸಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿ’ ಎಂದು ಹೇಳಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅವರು, ‘ಪೊಲೀಸರಿಗೆ ದೂರು ನೀಡಿ. ಅವರು ತನಿಖೆ ನಡೆಸಲಿ’ ಎಂದು ನಿಂಗರಾಜು ಅವರಿಗೆ ತಿಳಿಸಿದರು.</p>.<p>ದೂರು ನೀಡುವುದಕ್ಕಾಗಿ ನಿಂಗರಾಜು ಠಾಣೆಗೆ ಹೋದರು.ಪೊಲೀಸರು ಅಲ್ಲಿಗೆ ಯಜಮಾನರನ್ನೂ ಕರೆಸಿ ಪರಸ್ಪರ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡ ನಂತರ ದೂರು ನೀಡಿ ಎಂದು ಸಲಹೆ ನೀಡಿದರು.</p>.<p>ಯಜಮಾನರು, ಮುಖಂಡರು, ನಿಂಗರಾಜು ಹಾಗೂ ಇತರರು ಪರಸ್ಪರ ಮಾತನಾಡಿಕೊಂಡು ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ತೀರ್ಮಾನಿಸಿದರು.</p>.<p>‘ಹೊನ್ನೂರು ಪ್ರಕರಣಕ್ಕೆಸಂಬಂಧಿಸಿದಂತೆ ದೂರು ದಾಖಲಾಗಿಲ್ಲ. ಗ್ರಾಮಸ್ಥರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ’ ಎಂದು ಸಬ್ ಇನ್ಸ್ಪೆಕ್ಟರ್ ಲೋಕೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಸರ್ಕಲ್ ಇನ್ಸ್ಪೆಕ್ಟರ್ ಎಂ.ಎಲ್.ಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕಿ ಭಾಗೀರಥಿ, ಜಯಕಾಂತ್, ಎಲ್ಲ ಕೋಮಿನ ಮುಖಂಡರು ಮತ್ತು ಯಜಮಾನರು ಸಭೆಯಲ್ಲಿ ಇದ್ದರು.</p>.<p class="Briefhead"><strong>ಏನಿದು ಘಟನೆ?</strong></p>.<p>ಹೊನ್ನೂರು ಗ್ರಾಮದಲ್ಲಿರುವ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನದಲ್ಲಿ ಪ್ರತಿ ವರ್ಷ ನವರಾತ್ರಿ ಆಚರಿಸಲಾಗುತ್ತದೆ. ವಿಜಯದಶಮಿ ದಿನ ಚಾಮುಂಡೇಶ್ವರಿ, ವೀರಭದ್ರೇಶ್ವರ, ಮಂಟೇಸ್ವಾಮಿ, ಬಸವೇಶ್ವರ, ದೊಡ್ಡತಾಯಮ್ಮ ಹಾಗೂ ಚಿಕ್ಕತಾಯಮ್ಮ ಅವರ ಉತ್ಸವ ಮೂರ್ತಿಗಳನ್ನು ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.</p>.<p>ಪ್ರತಿ ವರ್ಷ ಮೆರವಣಿಗೆಯು ಪರಿಶಿಷ್ಟ ಜಾತಿಯವರ ಬೀದಿಗೆ ಹೋಗುವುದಿಲ್ಲ. ಈ ವರ್ಷ ತಮ್ಮ ಬೀದಿಗಳಲ್ಲೂ ಮೆರವಣಿಗೆ ಮಾಡಬೇಕು ಎಂದು ನಿಂಗರಾಜು ಹಾಗೂ ಇತರರು ತಹಶೀಲ್ದಾರ್ಗೆ ಮನವಿ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಊರಿನ ಯಜಮಾನರು ನಿಂಗರಾಜು ಅವರಿಗೆ ₹52,101 ಹಾಗೂ ಅವರ ಬೆಂಬಲಕ್ಕೆ ನಿಂತ ಶಂಕರಮೂರ್ತಿ ಎಂಬುವವರಿಗೆ ₹10,101 ದಂಡ ವಿಧಿಸಿದ್ದಾರೆ ಎಂಬುದು ಆರೋಪ.</p>.<p class="Subhead"><strong>ಭಿನ್ನ ಹೇಳಿಕೆ: </strong>ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯು ಗ್ರಾಮದ ಯಜಮಾನ ನಿರಂಜನ್ ಹಾಗೂ ದೂರುದಾರ ನಿಂಗರಾಜು ಅವರೊಂದಿಗೆ ಮಾತನಾಡಿದಾಗ ಇಬ್ಬರೂ ಭಿನ್ನ ಹೇಳಿಕೆ ನೀಡಿದ್ದಾರೆ.</p>.<p>‘ಗ್ರಾಮದಲ್ಲಿ ನಾವು 13 ಕೋಮಿನವರು ಒಗ್ಗಟ್ಟಿನಿಂದ ಇದ್ದೇವೆ. ನಾವು ನಿಂಗರಾಜು ಅವರಿಗೆ ದಂಡ ವಿಧಿಸಿಲ್ಲ. ಪರಿಶಿಷ್ಟ ಜಾತಿಯವರ ಬೀದಿಗೆ ಉತ್ಸವಮೂರ್ತಿ ಮೆರವಣಿಗೆ ಬರಬೇಕು ಎಂದು ತಹಶೀಲ್ದಾರ್ ಅವರಿಗೆ ನಿಂಗರಾಜು ಮನವಿ ಮಾಡಿದ್ದರು. ತಕ್ಷಣ ತಹಶೀಲ್ದಾರ್ ಹಾಗೂ ಪೊಲೀಸರು ಗ್ರಾಮಕ್ಕೆ ಬಂದು ವಿಚಾರಿಸಿದ್ದರು. ಆ ಸಂದರ್ಭದಲ್ಲಿ ನಿಂಗರಾಜು ಇರಲಿಲ್ಲ. ಸಂಪ್ರದಾಯದಂತೆ ಈ ವರ್ಷವೂ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿ. ಪರಿಶಿಷ್ಟ ಜಾತಿಯರ ಬೀದಿಗೆ ಮೆರವಣಿಗೆ ಬರುವುದು ಬೇಡ ಎಂದು ಆ ಸಮುದಾಯದವರೇ ತಹಶೀಲ್ದಾರ್ ಅವರಿಗೆ ತಿಳಿಸಿದ್ದರು. ತಡವಾಗಿ ಬಂದ ನಿಂಗರಾಜು ಅವರ ಬಳಿ, ‘ಯಾಕೆ ಈ ರೀತಿ ಮನವಿ ಮಾಡಿದೆ’ ಎಂದು ನಾವು ವಿಚಾರಿಸಿದ್ದೆವು. ಅಷ್ಟಕ್ಕೇ ಈ ರೀತಿ ಆರೋಪ ಮಾಡಿದ್ದಾರೆ’ ಎಂದು ನಿರಂಜನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಸೋಮವಾರ ತಹಶೀಲ್ದಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಕರಣ ಇತ್ಯರ್ಥವಾಗಿದೆ. ತನ್ನ ಹೇಳಿಕೆಯನ್ನು ವಾಪಸ್ ಪಡೆಯುವುದಾಗಿ ನಿಂಗರಾಜು ಹೇಳಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.</p>.<p>‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಿಂಗರಾಜು ಅವರು, ‘ಈ ಪ್ರಕರಣ ಬಗೆಹರಿದಿದೆ. ದಂಡ ವಿಧಿಸಿರುವುದನ್ನು ಯಜಮಾನರು ಸಭೆಯಲ್ಲಿ ಒಪ್ಪಿಕೊಂಡರು. ಪೊಲೀಸರೊಂದಿಗೆ ನಡೆದ ಮಾತುಕತೆಯಲ್ಲಿ ದುಡ್ಡು ವಾಪಸ್ ನೀಡಲೂ ಸಮ್ಮತಿಸಿದ್ದಾರೆ. ನಾನು ಪಾವತಿಸಿದ ಮೊತ್ತವನ್ನು ವಾಪಸ್ ಕೊಟ್ಟಿದ್ದಾರೆ. ಶಂಕರಮೂರ್ತಿಯವರಿಗೆ ಕೊಡಬೇಕಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು: </strong>ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿಗ್ರಾಮದೇವತೆಯ ಉತ್ಸವ ಮೂರ್ತಿಯ ಮೆರವಣಿಗೆ ಪರಿಶಿಷ್ಟ ಜಾತಿಯವರ ಬೀದಿಗಳಿಗೂ ಬರಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದಕ್ಕೆ, ಗ್ರಾಮದ ಯಜಮಾನರು ತಮಗೆ ₹52,101 ದಂಡ ವಿಧಿಸಿದ್ದಾರೆ ಎಂದು ನಿಂಗರಾಜು ಎಂಬುವವರು ಆರೋಪಿಸಿದ್ದ ಪ್ರಕರಣ ಇತ್ಯರ್ಥವಾಗಿದೆ.</p>.<p>ತಹಶೀಲ್ದಾರ್ ಸುದರ್ಶನ್ ಅವರು ಸೋಮವಾರ ಗ್ರಾಮದ ಯಜಮಾನರು, ಮುಖಂಡರು ಹಾಗೂ ದೂರುದಾರರ ಜೊತೆ ಸಮಾಲೋಚನೆ ನಡೆಸಿದರು.</p>.<p>ಸುದರ್ಶನ್ ಅವರು ಮಾತನಾಡಿ, ‘ಇಂತಹ ಪ್ರಕರಣಗಳು ನಡೆಯಬಾರದು. ಒಂದು ವೇಳೆ ದಂಡ ವಿಧಿಸಿದ್ದೇ ಆದರೆ ಆ ದುಡ್ಡನ್ನು ವಾಪಸ್ ನೀಡಬೇಕು’ ಎಂದು ಹೇಳಿದರು.</p>.<p>ಗ್ರಾಮದ ಯಜಮಾನ ನಿರಂಜನ್ ಅವರು ಮಾತನಾಡಿ, ‘ಹತ್ತು ಮುಖಂಡರು ಯಾರಿಗೂ ದಂಡ ವಿಧಿಸಿಲ್ಲ. ಹಾಗಾಗಿ, ಸಮಸ್ಯೆ ಉದ್ಭವಿಸಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿ’ ಎಂದು ಹೇಳಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅವರು, ‘ಪೊಲೀಸರಿಗೆ ದೂರು ನೀಡಿ. ಅವರು ತನಿಖೆ ನಡೆಸಲಿ’ ಎಂದು ನಿಂಗರಾಜು ಅವರಿಗೆ ತಿಳಿಸಿದರು.</p>.<p>ದೂರು ನೀಡುವುದಕ್ಕಾಗಿ ನಿಂಗರಾಜು ಠಾಣೆಗೆ ಹೋದರು.ಪೊಲೀಸರು ಅಲ್ಲಿಗೆ ಯಜಮಾನರನ್ನೂ ಕರೆಸಿ ಪರಸ್ಪರ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡ ನಂತರ ದೂರು ನೀಡಿ ಎಂದು ಸಲಹೆ ನೀಡಿದರು.</p>.<p>ಯಜಮಾನರು, ಮುಖಂಡರು, ನಿಂಗರಾಜು ಹಾಗೂ ಇತರರು ಪರಸ್ಪರ ಮಾತನಾಡಿಕೊಂಡು ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ತೀರ್ಮಾನಿಸಿದರು.</p>.<p>‘ಹೊನ್ನೂರು ಪ್ರಕರಣಕ್ಕೆಸಂಬಂಧಿಸಿದಂತೆ ದೂರು ದಾಖಲಾಗಿಲ್ಲ. ಗ್ರಾಮಸ್ಥರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ’ ಎಂದು ಸಬ್ ಇನ್ಸ್ಪೆಕ್ಟರ್ ಲೋಕೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಸರ್ಕಲ್ ಇನ್ಸ್ಪೆಕ್ಟರ್ ಎಂ.ಎಲ್.ಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕಿ ಭಾಗೀರಥಿ, ಜಯಕಾಂತ್, ಎಲ್ಲ ಕೋಮಿನ ಮುಖಂಡರು ಮತ್ತು ಯಜಮಾನರು ಸಭೆಯಲ್ಲಿ ಇದ್ದರು.</p>.<p class="Briefhead"><strong>ಏನಿದು ಘಟನೆ?</strong></p>.<p>ಹೊನ್ನೂರು ಗ್ರಾಮದಲ್ಲಿರುವ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನದಲ್ಲಿ ಪ್ರತಿ ವರ್ಷ ನವರಾತ್ರಿ ಆಚರಿಸಲಾಗುತ್ತದೆ. ವಿಜಯದಶಮಿ ದಿನ ಚಾಮುಂಡೇಶ್ವರಿ, ವೀರಭದ್ರೇಶ್ವರ, ಮಂಟೇಸ್ವಾಮಿ, ಬಸವೇಶ್ವರ, ದೊಡ್ಡತಾಯಮ್ಮ ಹಾಗೂ ಚಿಕ್ಕತಾಯಮ್ಮ ಅವರ ಉತ್ಸವ ಮೂರ್ತಿಗಳನ್ನು ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.</p>.<p>ಪ್ರತಿ ವರ್ಷ ಮೆರವಣಿಗೆಯು ಪರಿಶಿಷ್ಟ ಜಾತಿಯವರ ಬೀದಿಗೆ ಹೋಗುವುದಿಲ್ಲ. ಈ ವರ್ಷ ತಮ್ಮ ಬೀದಿಗಳಲ್ಲೂ ಮೆರವಣಿಗೆ ಮಾಡಬೇಕು ಎಂದು ನಿಂಗರಾಜು ಹಾಗೂ ಇತರರು ತಹಶೀಲ್ದಾರ್ಗೆ ಮನವಿ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಊರಿನ ಯಜಮಾನರು ನಿಂಗರಾಜು ಅವರಿಗೆ ₹52,101 ಹಾಗೂ ಅವರ ಬೆಂಬಲಕ್ಕೆ ನಿಂತ ಶಂಕರಮೂರ್ತಿ ಎಂಬುವವರಿಗೆ ₹10,101 ದಂಡ ವಿಧಿಸಿದ್ದಾರೆ ಎಂಬುದು ಆರೋಪ.</p>.<p class="Subhead"><strong>ಭಿನ್ನ ಹೇಳಿಕೆ: </strong>ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯು ಗ್ರಾಮದ ಯಜಮಾನ ನಿರಂಜನ್ ಹಾಗೂ ದೂರುದಾರ ನಿಂಗರಾಜು ಅವರೊಂದಿಗೆ ಮಾತನಾಡಿದಾಗ ಇಬ್ಬರೂ ಭಿನ್ನ ಹೇಳಿಕೆ ನೀಡಿದ್ದಾರೆ.</p>.<p>‘ಗ್ರಾಮದಲ್ಲಿ ನಾವು 13 ಕೋಮಿನವರು ಒಗ್ಗಟ್ಟಿನಿಂದ ಇದ್ದೇವೆ. ನಾವು ನಿಂಗರಾಜು ಅವರಿಗೆ ದಂಡ ವಿಧಿಸಿಲ್ಲ. ಪರಿಶಿಷ್ಟ ಜಾತಿಯವರ ಬೀದಿಗೆ ಉತ್ಸವಮೂರ್ತಿ ಮೆರವಣಿಗೆ ಬರಬೇಕು ಎಂದು ತಹಶೀಲ್ದಾರ್ ಅವರಿಗೆ ನಿಂಗರಾಜು ಮನವಿ ಮಾಡಿದ್ದರು. ತಕ್ಷಣ ತಹಶೀಲ್ದಾರ್ ಹಾಗೂ ಪೊಲೀಸರು ಗ್ರಾಮಕ್ಕೆ ಬಂದು ವಿಚಾರಿಸಿದ್ದರು. ಆ ಸಂದರ್ಭದಲ್ಲಿ ನಿಂಗರಾಜು ಇರಲಿಲ್ಲ. ಸಂಪ್ರದಾಯದಂತೆ ಈ ವರ್ಷವೂ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿ. ಪರಿಶಿಷ್ಟ ಜಾತಿಯರ ಬೀದಿಗೆ ಮೆರವಣಿಗೆ ಬರುವುದು ಬೇಡ ಎಂದು ಆ ಸಮುದಾಯದವರೇ ತಹಶೀಲ್ದಾರ್ ಅವರಿಗೆ ತಿಳಿಸಿದ್ದರು. ತಡವಾಗಿ ಬಂದ ನಿಂಗರಾಜು ಅವರ ಬಳಿ, ‘ಯಾಕೆ ಈ ರೀತಿ ಮನವಿ ಮಾಡಿದೆ’ ಎಂದು ನಾವು ವಿಚಾರಿಸಿದ್ದೆವು. ಅಷ್ಟಕ್ಕೇ ಈ ರೀತಿ ಆರೋಪ ಮಾಡಿದ್ದಾರೆ’ ಎಂದು ನಿರಂಜನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಸೋಮವಾರ ತಹಶೀಲ್ದಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಕರಣ ಇತ್ಯರ್ಥವಾಗಿದೆ. ತನ್ನ ಹೇಳಿಕೆಯನ್ನು ವಾಪಸ್ ಪಡೆಯುವುದಾಗಿ ನಿಂಗರಾಜು ಹೇಳಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.</p>.<p>‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಿಂಗರಾಜು ಅವರು, ‘ಈ ಪ್ರಕರಣ ಬಗೆಹರಿದಿದೆ. ದಂಡ ವಿಧಿಸಿರುವುದನ್ನು ಯಜಮಾನರು ಸಭೆಯಲ್ಲಿ ಒಪ್ಪಿಕೊಂಡರು. ಪೊಲೀಸರೊಂದಿಗೆ ನಡೆದ ಮಾತುಕತೆಯಲ್ಲಿ ದುಡ್ಡು ವಾಪಸ್ ನೀಡಲೂ ಸಮ್ಮತಿಸಿದ್ದಾರೆ. ನಾನು ಪಾವತಿಸಿದ ಮೊತ್ತವನ್ನು ವಾಪಸ್ ಕೊಟ್ಟಿದ್ದಾರೆ. ಶಂಕರಮೂರ್ತಿಯವರಿಗೆ ಕೊಡಬೇಕಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>