<p><strong>ಕೊಳ್ಳೇಗಾಲ</strong>: ತಾಲ್ಲೂಕಿನ ಕಾವೇರಿ ನದಿ ತೀರದ ಗ್ರಾಮಗಳಲ್ಲಿ ಮರಳು ಅಕ್ರಮ ದಂಧೆ ಎಗ್ಗಿಲ್ಲದೇ ನಡೆದಿದೆ.</p>.<p>ತಾಲ್ಲೂಕು ಆಡಳಿತದ ಅಧಿಕಾರಿಗಳು, ಪೊಲೀಸರು ಇದಕ್ಕೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<p>ತಾಲ್ಲೂಕಿನಲ್ಲಿ ಹಾದು ಹೋಗಿರುವ ಕಾವೇರಿ ನದಿ ಪಾತ್ರದಲ್ಲಿ 9 ಗ್ರಾಮಗಳು ಬರುತ್ತವೆ. ಈ ಪೈಕಿ ಹಳೇ ಹಂಪಾಪುರ, ದಾಸನಪುರ ಗ್ರಾಮಗಳಲ್ಲಿ ಮರಳು ಅಕ್ರಮ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ.</p>.<p>‘ಮರಳು ಗಣಿಗಾರಿಕೆಯಿಂದ ಹಲವು ಸಮಸ್ಯೆಗಳು ಉಂಟಾಗಿದೆ.ಭೂಮಿಯನ್ನು ಆಳವಾಗಿ ಬಗೆಯುವುದರಿಂದ ಕೃಷಿ ಭೂಮಿ ಬರಡಾಗುತ್ತಿದೆ. ಮರಳು ಫಿಲ್ಟರ್ಗೆ ಕೆರೆ ಕಟ್ಟೆಗಳ ನೀರು ಬಳಸುವುದು, ಕೆರೆ–ಕಟ್ಟೆಗಳ ಅಂಗಳದಲ್ಲೇ ಮರಳು ದೋಚುವುದರಿಂದ ನೀರಿನ ಮೂಲಗಳು ಬರಿದಾಗುತ್ತಿವೆ’ ಎಂದು ನದಿ ತೀರದ ಗ್ರಾಮಸ್ಥರು ಆರೋಪಿಸುತ್ತಾರೆ.</p>.<p class="Subhead">ರಾತ್ರಿಯ ಚಟುವಟಿಕೆ: ರಾತ್ರಿ ಹೊತ್ತಿನಲ್ಲಿ ಮರಳಿನಅಕ್ರಮ ಚಟುವಟಿಕೆ ನಡೆಯುತ್ತಿದೆ. ಮರಳು ಸಂಗ್ರಹ, ಸಾಗಾಟ ಎಲ್ಲವೂ ರಾತ್ರಿಯೇ ಮುಗಿದುಹೋಗುತ್ತದೆ. ಬೆಳಗಾಗುವಷ್ಟರಲ್ಲಿ ಏನೂ ನಡೆದಿಲ್ಲವೆನೋ ಎಂಬಂತಹ ವಾತಾವರಣ ಕಂಡು ಬರುತ್ತದೆ. ಪೊಲೀಸರಿಗೆ ತಿಳಿದೇ ಈ ಮರಳು ಸಂಗ್ರಹ, ಸಾಗಾಟ ನಡೆಯುತ್ತದೆ ಎಂದು ನೇರ ಆರೋಪ ಮಾಡುತ್ತಾರೆ ಗ್ರಾಮಸ್ಥರು.</p>.<p class="Subhead">ಎತ್ತಿನ ಗಾಡಿಗಳಲ್ಲಿ ಸಾಗಾಟ: ಸಂಗ್ರಹಿಸಿದ ಮರಳನ್ನು ಎತ್ತಿನ ಬಂಡಿಗಳಲ್ಲಿ ಸಾಗಾಟ ಮಾಡಲಾಗುತ್ತದೆ.</p>.<p>‘ಲಾರಿ, ಟ್ರಾಕ್ಟರ್ಗಳಲ್ಲಿ ಮರಳು ದಂಧೆ ನಡೆಯುವುದಿಲ್ಲ. ಹೊರಗಿನವರು ಯಾರೂ ಇಲ್ಲಿಗೆ ಬರುವುದಿಲ್ಲ. ಕೆಲವು ಗ್ರಾಮಸ್ಥರೇ ಈ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ. ಗ್ರಾಮಗಳಲ್ಲಿ ಅನೇಕರು ಎತ್ತಿನಗಾಡಿಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಎಲ್ಲರೂ ಈ ದಂಧೆಯಲ್ಲಿ ತೊಡಗಿಲ್ಲ. ಕೆಲವರು ಮಾತ್ರ ಕಳ್ಳ ಕೆಲಸ ಮಾಡುತ್ತಿದ್ದಾರೆ’ ಎಂದು ನದಿ ತೀರದ ಗ್ರಾಮಸ್ಥ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ರಾತ್ರಿಯಾದರೆ ಸಾಕು ದಂಧೆ ಶುರುವಾಗುತ್ತದೆ. ಇದನ್ನು ಕೇಳುವುದಕ್ಕೆ ಯಾರೂ ಇಲ್ಲ. ನಾವು ಕೇಳಿದರೆ ಜಗಳಕ್ಕೇ ಬರುತ್ತಾರೆ’ ಎಂದುಗ್ರಾಮಸ್ಥ ಸಿದ್ದರಾಜು ಅಸಹಾಯಕತೆ ವ್ಯಕ್ತಪಡಿಸಿದರು.</p>.<p class="Briefhead">ಬೈಕ್ಗಳಲ್ಲೂ ಸಾಗಾಟ!</p>.<p>ನದಿಯಿಂದ ಸಂಗ್ರಹಿಸಿದ ಮರಳನ್ನು ಎತ್ತಿನಗಾಡಿಗಳಲ್ಲಿ ತಂದು ಗ್ರಾಮದ ಹೊರವಲಯದ ನಿರ್ಜನ ಪ್ರದೇಶ, ಜಮೀನು ಸೇರಿದಂತೆ ವಿವಿಧೆಡೆ ಮರಳನ್ನು ಸಂಗ್ರಹಿಸಲಾಗುತ್ತದೆ. ಅಲ್ಲಿಂದ ಬೇರೆ ಕಡೆಗಳಿಗೆ ಸರಬರಾಜು ಮಾಡಲಾಗುತ್ತಿದೆ.</p>.<p>‘ಬೆಳಗಿನ ಹೊತ್ತು ಮರಳನ್ನು ಚೀಲಗಳಲ್ಲಿ ತುಂಬಿ ಬೈಕ್ಗಳಲ್ಲಿ ನಗರಕ್ಕೆ ಸರಬರಾಜು ಮಾಡುತ್ತಾರೆ. 25 ಕೆ.ಜಿ. ಚೀಲದಲ್ಲಿ ಮರಳನ್ನು ಸಾಗಿಸುತ್ತಾರೆ. ಒಂದು ಚೀಲಕ್ಕೆ ₹ 150ರಿಂದ ₹ 200ರವರೆಗೆ ಬೆಲೆ ಇದೆ. ಕೆಲವು ಸಂದರ್ಭದಲ್ಲಿ ಮರಳು ಮೂಟೆಗಳನ್ನು ಕಾರಿನಲ್ಲಿ ಸಾಗಿಸುವವರೂ ಇದ್ದಾರೆ. ಮರಳು ಬೇಕಾದರೆ, ಕಟ್ಟಡ ನಿರ್ಮಾಣ ನಡೆಯುತ್ತಿರುವ ಜಾಗಕ್ಕೆ ನೇರವಾಗಿ ಬೈಕ್ಗಳಲ್ಲಿ ಪೂರೈಸುತ್ತಾರೆ’ ಎಂದು ನಗರದ ನಿವಾಸಿ ಮಹದೇವ ಹೇಳಿದರು.</p>.<p>--</p>.<p>ಮರಳು ದಂಧೆಗೆ ಅವಕಾಶ ಇಲ್ಲ. ನಡೆಸುತ್ತಿರುವವರ ವಿರುದ್ಧ ಕ್ರಮ ಖಚಿತ. ನದಿ ತೀರದ ಗ್ರಾಮಗಳಲ್ಲಿ ನಿಗಾ ವಹಿಸಲು ಸೂಚಿಸಿದ್ದೇನೆ<br />ಕೆ.ಎಸ್.ಸುಂದರ್ರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ</p>.<p>---</p>.<p>ಪೊಲೀಸರಿಗೆ ಪರಿಶೀಲಿಸಲು ಸೂಚಿಸುತ್ತೇನೆ. ನಾನೂ ಗಮನಿಸತ್ತೇನೆ. ದಂಧೆ ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು<br />ಕುನಾಲ್, ತಹಶೀಲ್ದಾರ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ</strong>: ತಾಲ್ಲೂಕಿನ ಕಾವೇರಿ ನದಿ ತೀರದ ಗ್ರಾಮಗಳಲ್ಲಿ ಮರಳು ಅಕ್ರಮ ದಂಧೆ ಎಗ್ಗಿಲ್ಲದೇ ನಡೆದಿದೆ.</p>.<p>ತಾಲ್ಲೂಕು ಆಡಳಿತದ ಅಧಿಕಾರಿಗಳು, ಪೊಲೀಸರು ಇದಕ್ಕೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<p>ತಾಲ್ಲೂಕಿನಲ್ಲಿ ಹಾದು ಹೋಗಿರುವ ಕಾವೇರಿ ನದಿ ಪಾತ್ರದಲ್ಲಿ 9 ಗ್ರಾಮಗಳು ಬರುತ್ತವೆ. ಈ ಪೈಕಿ ಹಳೇ ಹಂಪಾಪುರ, ದಾಸನಪುರ ಗ್ರಾಮಗಳಲ್ಲಿ ಮರಳು ಅಕ್ರಮ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ.</p>.<p>‘ಮರಳು ಗಣಿಗಾರಿಕೆಯಿಂದ ಹಲವು ಸಮಸ್ಯೆಗಳು ಉಂಟಾಗಿದೆ.ಭೂಮಿಯನ್ನು ಆಳವಾಗಿ ಬಗೆಯುವುದರಿಂದ ಕೃಷಿ ಭೂಮಿ ಬರಡಾಗುತ್ತಿದೆ. ಮರಳು ಫಿಲ್ಟರ್ಗೆ ಕೆರೆ ಕಟ್ಟೆಗಳ ನೀರು ಬಳಸುವುದು, ಕೆರೆ–ಕಟ್ಟೆಗಳ ಅಂಗಳದಲ್ಲೇ ಮರಳು ದೋಚುವುದರಿಂದ ನೀರಿನ ಮೂಲಗಳು ಬರಿದಾಗುತ್ತಿವೆ’ ಎಂದು ನದಿ ತೀರದ ಗ್ರಾಮಸ್ಥರು ಆರೋಪಿಸುತ್ತಾರೆ.</p>.<p class="Subhead">ರಾತ್ರಿಯ ಚಟುವಟಿಕೆ: ರಾತ್ರಿ ಹೊತ್ತಿನಲ್ಲಿ ಮರಳಿನಅಕ್ರಮ ಚಟುವಟಿಕೆ ನಡೆಯುತ್ತಿದೆ. ಮರಳು ಸಂಗ್ರಹ, ಸಾಗಾಟ ಎಲ್ಲವೂ ರಾತ್ರಿಯೇ ಮುಗಿದುಹೋಗುತ್ತದೆ. ಬೆಳಗಾಗುವಷ್ಟರಲ್ಲಿ ಏನೂ ನಡೆದಿಲ್ಲವೆನೋ ಎಂಬಂತಹ ವಾತಾವರಣ ಕಂಡು ಬರುತ್ತದೆ. ಪೊಲೀಸರಿಗೆ ತಿಳಿದೇ ಈ ಮರಳು ಸಂಗ್ರಹ, ಸಾಗಾಟ ನಡೆಯುತ್ತದೆ ಎಂದು ನೇರ ಆರೋಪ ಮಾಡುತ್ತಾರೆ ಗ್ರಾಮಸ್ಥರು.</p>.<p class="Subhead">ಎತ್ತಿನ ಗಾಡಿಗಳಲ್ಲಿ ಸಾಗಾಟ: ಸಂಗ್ರಹಿಸಿದ ಮರಳನ್ನು ಎತ್ತಿನ ಬಂಡಿಗಳಲ್ಲಿ ಸಾಗಾಟ ಮಾಡಲಾಗುತ್ತದೆ.</p>.<p>‘ಲಾರಿ, ಟ್ರಾಕ್ಟರ್ಗಳಲ್ಲಿ ಮರಳು ದಂಧೆ ನಡೆಯುವುದಿಲ್ಲ. ಹೊರಗಿನವರು ಯಾರೂ ಇಲ್ಲಿಗೆ ಬರುವುದಿಲ್ಲ. ಕೆಲವು ಗ್ರಾಮಸ್ಥರೇ ಈ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ. ಗ್ರಾಮಗಳಲ್ಲಿ ಅನೇಕರು ಎತ್ತಿನಗಾಡಿಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಎಲ್ಲರೂ ಈ ದಂಧೆಯಲ್ಲಿ ತೊಡಗಿಲ್ಲ. ಕೆಲವರು ಮಾತ್ರ ಕಳ್ಳ ಕೆಲಸ ಮಾಡುತ್ತಿದ್ದಾರೆ’ ಎಂದು ನದಿ ತೀರದ ಗ್ರಾಮಸ್ಥ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ರಾತ್ರಿಯಾದರೆ ಸಾಕು ದಂಧೆ ಶುರುವಾಗುತ್ತದೆ. ಇದನ್ನು ಕೇಳುವುದಕ್ಕೆ ಯಾರೂ ಇಲ್ಲ. ನಾವು ಕೇಳಿದರೆ ಜಗಳಕ್ಕೇ ಬರುತ್ತಾರೆ’ ಎಂದುಗ್ರಾಮಸ್ಥ ಸಿದ್ದರಾಜು ಅಸಹಾಯಕತೆ ವ್ಯಕ್ತಪಡಿಸಿದರು.</p>.<p class="Briefhead">ಬೈಕ್ಗಳಲ್ಲೂ ಸಾಗಾಟ!</p>.<p>ನದಿಯಿಂದ ಸಂಗ್ರಹಿಸಿದ ಮರಳನ್ನು ಎತ್ತಿನಗಾಡಿಗಳಲ್ಲಿ ತಂದು ಗ್ರಾಮದ ಹೊರವಲಯದ ನಿರ್ಜನ ಪ್ರದೇಶ, ಜಮೀನು ಸೇರಿದಂತೆ ವಿವಿಧೆಡೆ ಮರಳನ್ನು ಸಂಗ್ರಹಿಸಲಾಗುತ್ತದೆ. ಅಲ್ಲಿಂದ ಬೇರೆ ಕಡೆಗಳಿಗೆ ಸರಬರಾಜು ಮಾಡಲಾಗುತ್ತಿದೆ.</p>.<p>‘ಬೆಳಗಿನ ಹೊತ್ತು ಮರಳನ್ನು ಚೀಲಗಳಲ್ಲಿ ತುಂಬಿ ಬೈಕ್ಗಳಲ್ಲಿ ನಗರಕ್ಕೆ ಸರಬರಾಜು ಮಾಡುತ್ತಾರೆ. 25 ಕೆ.ಜಿ. ಚೀಲದಲ್ಲಿ ಮರಳನ್ನು ಸಾಗಿಸುತ್ತಾರೆ. ಒಂದು ಚೀಲಕ್ಕೆ ₹ 150ರಿಂದ ₹ 200ರವರೆಗೆ ಬೆಲೆ ಇದೆ. ಕೆಲವು ಸಂದರ್ಭದಲ್ಲಿ ಮರಳು ಮೂಟೆಗಳನ್ನು ಕಾರಿನಲ್ಲಿ ಸಾಗಿಸುವವರೂ ಇದ್ದಾರೆ. ಮರಳು ಬೇಕಾದರೆ, ಕಟ್ಟಡ ನಿರ್ಮಾಣ ನಡೆಯುತ್ತಿರುವ ಜಾಗಕ್ಕೆ ನೇರವಾಗಿ ಬೈಕ್ಗಳಲ್ಲಿ ಪೂರೈಸುತ್ತಾರೆ’ ಎಂದು ನಗರದ ನಿವಾಸಿ ಮಹದೇವ ಹೇಳಿದರು.</p>.<p>--</p>.<p>ಮರಳು ದಂಧೆಗೆ ಅವಕಾಶ ಇಲ್ಲ. ನಡೆಸುತ್ತಿರುವವರ ವಿರುದ್ಧ ಕ್ರಮ ಖಚಿತ. ನದಿ ತೀರದ ಗ್ರಾಮಗಳಲ್ಲಿ ನಿಗಾ ವಹಿಸಲು ಸೂಚಿಸಿದ್ದೇನೆ<br />ಕೆ.ಎಸ್.ಸುಂದರ್ರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ</p>.<p>---</p>.<p>ಪೊಲೀಸರಿಗೆ ಪರಿಶೀಲಿಸಲು ಸೂಚಿಸುತ್ತೇನೆ. ನಾನೂ ಗಮನಿಸತ್ತೇನೆ. ದಂಧೆ ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು<br />ಕುನಾಲ್, ತಹಶೀಲ್ದಾರ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>