<p><strong>ಗುಂಡ್ಲುಪೇಟೆ:</strong> ಮತ ಎಣಿಕೆಗೆ ಇನ್ನು ಒಂದು ದಿನ ಬಾಕಿ ಇರುವಂತೆಯೇ ತಾಲ್ಲೂಕಿನ ಪಟ್ಟಣ, ಹೋಬಳಿ, ಗ್ರಾಮೀಣ ಪ್ರದೇಶಗಳಲ್ಲಿ ಫಲಿತಾಂಶದ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.</p>.<p>ಅಭ್ಯರ್ಥಿಗಳು ಸೋಲು ಗೆಲುವಿನ ಚಿಂತೆಯಲ್ಲಿದ್ದರೆ, ಜನಸಮಾನ್ಯರು ಕೂಡ ಜಗಲಿ ಕಟ್ಟೆ, ಟೀ ಅಂಗಡಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಸೋಲು ಗೆಲುವಿನ ಬಗ್ಗೆ ಚರ್ಚಿಸುತ್ತಿದ್ದಾರೆ.</p>.<p>ಇದು ಪಕ್ಷ ರಹಿತ ಚುನಾವಣೆಯಾಗಿದ್ದರೂ ಈ ಬಾರಿ ಪಕ್ಷಗಳ ಮುಖಂಡರ ಕಾರುಬಾರು ಪ್ರಬಲವಾಗಿತ್ತು. ಜನರು ಕೂಡ ಪಕ್ಷದ ಆಧಾರದಲ್ಲೇ ಚುನಾವಣೆಯನ್ನು ವಿಶ್ಲೇಷಿಸುತ್ತಿದ್ದಾರೆ.</p>.<p>ಈ ಅಭ್ಯರ್ಥಿಗೆ ಇಂತಿಷ್ಟು ಮನೆಗಳ ಮತಗಳು ಬಿದ್ದಿದ್ದರೆ ಗೆಲುವು ಖಚಿತ. ಯಾರೆಲ್ಲ ಮತಗಳನ್ನು ಹಾಕಿರಬಹುದು, ಯಾರು ಕೈಕೊಟ್ಟಿರಬಹುದು? ಎಂಬ ಚರ್ಚೆಗಳೇ ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿವೆ.</p>.<p>ಬೇರೆ ಗ್ರಾಮಗಳಲ್ಲಿರುವ ಬಂಧುಗಳು, ಸ್ನೇಹಿತರು ಹಾಗೂ ಮುಖಂಡರಿಗೆ ಕರೆ ಮಾಡಿ ಅಲ್ಲಿನ ಚಿತ್ರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವವರು ಪ್ರತಿ ಊರಿನಲ್ಲೂ ಕಾಣಸಿಗುತ್ತಿದ್ದಾರೆ.</p>.<p>ಅಭ್ಯರ್ಥಿಗಳ ವರ್ಚಸ್ಸು ಹೇಗಿದೆ? ಹೊಸಬರೇ ಅಥವಾ ಹಳಬರೇ? ಹಿಂದೆ ಹೇಗೆ ಕೆಲಸ ಮಾಡಿದ್ದಾರೆ? ಈ ಬಾರಿ ಮತದಾರರಿಗೆ ಎಷ್ಟು ಹಣ ಕೊಟ್ಟರು ಎಂಬ ಪ್ರಶ್ನೆಗಳು ಜನರ ಸಂಭಾಷಣೆಯ ನಡು ನಡುವೆ ಕೇಳಿಬರುತ್ತಿವೆ.</p>.<p>ತಾಲ್ಲೂಕಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.</p>.<p>ಪಂಚಾಯಿತಿಗಳಲ್ಲಿರುವ ಪಕ್ಷಗಳ ಮುಖಂಡರುಗ್ರಾಮದ ಯುವಕರಿಗೆ ಮತ್ತು ಗ್ರಾಮದ ನಂಬಿಕಸ್ಥ ಮುಖಂಡರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಊರಲ್ಲಿ ಯಾರ್ಯಾರು ಪ್ರತಿಸ್ಪರ್ಧಿ ಅಭ್ಯರ್ಥಿಗಳನ್ನು ಬೆಂಬಲಿಸಿರಬಹುದು ಎಂಬ ಶೋಧನೆಗೂ ಇಳಿದಿದ್ದಾರೆ.</p>.<p class="Briefhead"><strong>ಗೆಲುವು ನಮ್ಮದೇ: ಬಿಜೆಪಿ, ಕಾಂಗ್ರೆಸ್</strong></p>.<p>ಈ ಮಧ್ಯೆ, ಚುನಾವಣೆಯಲ್ಲಿ ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಹೆಚ್ಚಿನ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದಾರೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.</p>.<p>ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು, ‘ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹರವೆ ಸೇರಿದಂತೆ 40 ಗ್ರಾಮ ಪಂಚಾಯಿತಿಯಲ್ಲಿ ಈ ಬಾರಿ 30ಕ್ಕಿಂತ ಅಧಿಕ ಪಂಚಾಯಿತಿಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳುಗದ್ದುಗೆ ಹಿಡಿಯಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಈ ಸಲ ನಮ್ಮ ಕೈ ಹಿಡಿಯಲಿದೆ. ಜೊತೆಗೆ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ಹೆಚ್ಚಿನ ಅಭಿವೃದ್ಧಿ ಮಾಡಿರುವುದರಿಂದ ಜನರು ಒಲವು ತೋರಿದ್ದಾರೆ’ ಎಂದರು.</p>.<p>ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಅವರು ಪ್ರತಿಕ್ರಿಯಿಸಿ, ‘ಈ ಸಲ 23 ರಿಂದ 25 ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಹಿಡಿಯಲಿದ್ದಾರೆ. ಈ ಹಿಂದೆ ಎಂ.ಸಿ.ಮೋಹನಕುಮಾರಿ ಮತ್ತು ಎಚ್.ಎಸ್.ಮಹದೇವಪ್ರಸಾದ್ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಒಲವು ತೋರಿದ್ದು, ಚುನಾವಣೆಗೂ ಮುನ್ನ ಅಧಿಕ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ:</strong> ಮತ ಎಣಿಕೆಗೆ ಇನ್ನು ಒಂದು ದಿನ ಬಾಕಿ ಇರುವಂತೆಯೇ ತಾಲ್ಲೂಕಿನ ಪಟ್ಟಣ, ಹೋಬಳಿ, ಗ್ರಾಮೀಣ ಪ್ರದೇಶಗಳಲ್ಲಿ ಫಲಿತಾಂಶದ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.</p>.<p>ಅಭ್ಯರ್ಥಿಗಳು ಸೋಲು ಗೆಲುವಿನ ಚಿಂತೆಯಲ್ಲಿದ್ದರೆ, ಜನಸಮಾನ್ಯರು ಕೂಡ ಜಗಲಿ ಕಟ್ಟೆ, ಟೀ ಅಂಗಡಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಸೋಲು ಗೆಲುವಿನ ಬಗ್ಗೆ ಚರ್ಚಿಸುತ್ತಿದ್ದಾರೆ.</p>.<p>ಇದು ಪಕ್ಷ ರಹಿತ ಚುನಾವಣೆಯಾಗಿದ್ದರೂ ಈ ಬಾರಿ ಪಕ್ಷಗಳ ಮುಖಂಡರ ಕಾರುಬಾರು ಪ್ರಬಲವಾಗಿತ್ತು. ಜನರು ಕೂಡ ಪಕ್ಷದ ಆಧಾರದಲ್ಲೇ ಚುನಾವಣೆಯನ್ನು ವಿಶ್ಲೇಷಿಸುತ್ತಿದ್ದಾರೆ.</p>.<p>ಈ ಅಭ್ಯರ್ಥಿಗೆ ಇಂತಿಷ್ಟು ಮನೆಗಳ ಮತಗಳು ಬಿದ್ದಿದ್ದರೆ ಗೆಲುವು ಖಚಿತ. ಯಾರೆಲ್ಲ ಮತಗಳನ್ನು ಹಾಕಿರಬಹುದು, ಯಾರು ಕೈಕೊಟ್ಟಿರಬಹುದು? ಎಂಬ ಚರ್ಚೆಗಳೇ ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿವೆ.</p>.<p>ಬೇರೆ ಗ್ರಾಮಗಳಲ್ಲಿರುವ ಬಂಧುಗಳು, ಸ್ನೇಹಿತರು ಹಾಗೂ ಮುಖಂಡರಿಗೆ ಕರೆ ಮಾಡಿ ಅಲ್ಲಿನ ಚಿತ್ರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವವರು ಪ್ರತಿ ಊರಿನಲ್ಲೂ ಕಾಣಸಿಗುತ್ತಿದ್ದಾರೆ.</p>.<p>ಅಭ್ಯರ್ಥಿಗಳ ವರ್ಚಸ್ಸು ಹೇಗಿದೆ? ಹೊಸಬರೇ ಅಥವಾ ಹಳಬರೇ? ಹಿಂದೆ ಹೇಗೆ ಕೆಲಸ ಮಾಡಿದ್ದಾರೆ? ಈ ಬಾರಿ ಮತದಾರರಿಗೆ ಎಷ್ಟು ಹಣ ಕೊಟ್ಟರು ಎಂಬ ಪ್ರಶ್ನೆಗಳು ಜನರ ಸಂಭಾಷಣೆಯ ನಡು ನಡುವೆ ಕೇಳಿಬರುತ್ತಿವೆ.</p>.<p>ತಾಲ್ಲೂಕಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.</p>.<p>ಪಂಚಾಯಿತಿಗಳಲ್ಲಿರುವ ಪಕ್ಷಗಳ ಮುಖಂಡರುಗ್ರಾಮದ ಯುವಕರಿಗೆ ಮತ್ತು ಗ್ರಾಮದ ನಂಬಿಕಸ್ಥ ಮುಖಂಡರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಊರಲ್ಲಿ ಯಾರ್ಯಾರು ಪ್ರತಿಸ್ಪರ್ಧಿ ಅಭ್ಯರ್ಥಿಗಳನ್ನು ಬೆಂಬಲಿಸಿರಬಹುದು ಎಂಬ ಶೋಧನೆಗೂ ಇಳಿದಿದ್ದಾರೆ.</p>.<p class="Briefhead"><strong>ಗೆಲುವು ನಮ್ಮದೇ: ಬಿಜೆಪಿ, ಕಾಂಗ್ರೆಸ್</strong></p>.<p>ಈ ಮಧ್ಯೆ, ಚುನಾವಣೆಯಲ್ಲಿ ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಹೆಚ್ಚಿನ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದಾರೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.</p>.<p>ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು, ‘ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹರವೆ ಸೇರಿದಂತೆ 40 ಗ್ರಾಮ ಪಂಚಾಯಿತಿಯಲ್ಲಿ ಈ ಬಾರಿ 30ಕ್ಕಿಂತ ಅಧಿಕ ಪಂಚಾಯಿತಿಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳುಗದ್ದುಗೆ ಹಿಡಿಯಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಈ ಸಲ ನಮ್ಮ ಕೈ ಹಿಡಿಯಲಿದೆ. ಜೊತೆಗೆ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ಹೆಚ್ಚಿನ ಅಭಿವೃದ್ಧಿ ಮಾಡಿರುವುದರಿಂದ ಜನರು ಒಲವು ತೋರಿದ್ದಾರೆ’ ಎಂದರು.</p>.<p>ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಅವರು ಪ್ರತಿಕ್ರಿಯಿಸಿ, ‘ಈ ಸಲ 23 ರಿಂದ 25 ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಹಿಡಿಯಲಿದ್ದಾರೆ. ಈ ಹಿಂದೆ ಎಂ.ಸಿ.ಮೋಹನಕುಮಾರಿ ಮತ್ತು ಎಚ್.ಎಸ್.ಮಹದೇವಪ್ರಸಾದ್ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಒಲವು ತೋರಿದ್ದು, ಚುನಾವಣೆಗೂ ಮುನ್ನ ಅಧಿಕ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>