<p><strong>ಚಾಮರಾಜನಗರ</strong>: ಸ್ವಾಮಿ ಪೊನ್ನಾಚಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಹನೂರು ತಾಲ್ಲೂಕಿನ ಪೊನ್ನಾಚಿಯವರಾದ ಯುವ ಸಾಹಿತಿ ಕೆ.ಎಸ್.ಮಹದೇವಸ್ವಾಮಿ ಅವರ ‘ಧೂಪದ ಮಕ್ಕಳು’ ಕಥಾ ಸಂಕಲನಕ್ಕೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಲಭಿಸಿದೆ.</p>.<p>‘ಧೂಪದ ಮಕ್ಕಳು’ ಕಥಾ ಸಂಕಲನಕ್ಕೆ 2018ರಲ್ಲಿ ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪಾಪು ಪುರಸ್ಕಾರ ಹಾಗೂ ಛಂದ ಪುಸ್ತಕ ಪ್ರಕಾಶನ ಸಂಸ್ಥೆಯ ಛಂದ ಪುಸ್ತಕ ಬಹುಮಾನ ಬಂದಿದೆ. ಬೆಳಗಾವಿಯ ಕಟ್ಟೇ ಬಸವರಾಜ ಕಟ್ಟೇಮನಿ ಪ್ರತಿಷ್ಠಾನ ನೀಡುವ ಯುವ ಸಾಹಿತ್ಯ ಪ್ರಶಸ್ತಿಗೂ ಈ ಕೃತಿ ಆಯ್ಕೆಯಾಗಿತ್ತು. ಸುಚಿತ್ರಾ ಗ್ಯಾಲರಿಯಲ್ಲಿ ಈ ಕೃತಿಯ ಬಗ್ಗೆ ಸಂವಾದವೂ ನಡೆದಿದೆ.</p>.<p>ಬೆಂಗಳೂರಿನ ಬೇಂದ್ರ ಪ್ರತಿಷ್ಠಾನ ನೀಡುವ ಶಾ.ಬಾಲುರಾವ್ ಯುವ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.</p>.<p>ಸೃಜನಶೀಲ ಸಾಹಿತ್ಯ ಹಾಗೂ ಕವನಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಸ್ವಾಮಿ ಪೊನ್ನಾಚಿ ಅವರು ಯಳಂದೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.</p>.<p>1986ರಲ್ಲಿ ಪೊನ್ನಾಚಿಯಲ್ಲಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ಊರಿನಲ್ಲೇ ಪಡೆದರು. ಉನ್ನತ ಶಿಕ್ಷಣವನ್ನು ಕೊಳ್ಳೇಗಾಲ ಹಾಗೂ ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಜಾನಪದ ಸಾಹಿತ್ಯಕ್ಕೆ ಹೆಚ್ಚು ಆಸಕ್ತಿ ಹೊಂದಿರುವ ಅವರು ಮಂಟೇಸ್ವಾಮಿ ಹಾಗೂ ಮಹದೇಶ್ವರ ಕಾವ್ಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಸ್ವಾಮಿ ಪೊನ್ನಾಚಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಹನೂರು ತಾಲ್ಲೂಕಿನ ಪೊನ್ನಾಚಿಯವರಾದ ಯುವ ಸಾಹಿತಿ ಕೆ.ಎಸ್.ಮಹದೇವಸ್ವಾಮಿ ಅವರ ‘ಧೂಪದ ಮಕ್ಕಳು’ ಕಥಾ ಸಂಕಲನಕ್ಕೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಲಭಿಸಿದೆ.</p>.<p>‘ಧೂಪದ ಮಕ್ಕಳು’ ಕಥಾ ಸಂಕಲನಕ್ಕೆ 2018ರಲ್ಲಿ ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪಾಪು ಪುರಸ್ಕಾರ ಹಾಗೂ ಛಂದ ಪುಸ್ತಕ ಪ್ರಕಾಶನ ಸಂಸ್ಥೆಯ ಛಂದ ಪುಸ್ತಕ ಬಹುಮಾನ ಬಂದಿದೆ. ಬೆಳಗಾವಿಯ ಕಟ್ಟೇ ಬಸವರಾಜ ಕಟ್ಟೇಮನಿ ಪ್ರತಿಷ್ಠಾನ ನೀಡುವ ಯುವ ಸಾಹಿತ್ಯ ಪ್ರಶಸ್ತಿಗೂ ಈ ಕೃತಿ ಆಯ್ಕೆಯಾಗಿತ್ತು. ಸುಚಿತ್ರಾ ಗ್ಯಾಲರಿಯಲ್ಲಿ ಈ ಕೃತಿಯ ಬಗ್ಗೆ ಸಂವಾದವೂ ನಡೆದಿದೆ.</p>.<p>ಬೆಂಗಳೂರಿನ ಬೇಂದ್ರ ಪ್ರತಿಷ್ಠಾನ ನೀಡುವ ಶಾ.ಬಾಲುರಾವ್ ಯುವ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.</p>.<p>ಸೃಜನಶೀಲ ಸಾಹಿತ್ಯ ಹಾಗೂ ಕವನಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಸ್ವಾಮಿ ಪೊನ್ನಾಚಿ ಅವರು ಯಳಂದೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.</p>.<p>1986ರಲ್ಲಿ ಪೊನ್ನಾಚಿಯಲ್ಲಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ಊರಿನಲ್ಲೇ ಪಡೆದರು. ಉನ್ನತ ಶಿಕ್ಷಣವನ್ನು ಕೊಳ್ಳೇಗಾಲ ಹಾಗೂ ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಜಾನಪದ ಸಾಹಿತ್ಯಕ್ಕೆ ಹೆಚ್ಚು ಆಸಕ್ತಿ ಹೊಂದಿರುವ ಅವರು ಮಂಟೇಸ್ವಾಮಿ ಹಾಗೂ ಮಹದೇಶ್ವರ ಕಾವ್ಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>