‘ಧೂಪದ ಮಕ್ಕಳು’ ಕಥಾ ಸಂಕಲನಕ್ಕೆ 2018ರಲ್ಲಿ ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪಾಪು ಪುರಸ್ಕಾರ ಹಾಗೂ ಛಂದ ಪುಸ್ತಕ ಪ್ರಕಾಶನ ಸಂಸ್ಥೆಯ ಛಂದ ಪುಸ್ತಕ ಬಹುಮಾನ ಬಂದಿದೆ. ಬೆಳಗಾವಿಯ ಕಟ್ಟೇ ಬಸವರಾಜ ಕಟ್ಟೇಮನಿ ಪ್ರತಿಷ್ಠಾನ ನೀಡುವ ಯುವ ಸಾಹಿತ್ಯ ಪ್ರಶಸ್ತಿಗೂ ಈ ಕೃತಿ ಆಯ್ಕೆಯಾಗಿತ್ತು. ಸುಚಿತ್ರಾ ಗ್ಯಾಲರಿಯಲ್ಲಿ ಈ ಕೃತಿಯ ಬಗ್ಗೆ ಸಂವಾದವೂ ನಡೆದಿದೆ.