ಯುಗಾದಿ ವರ್ಷ ತೊಡಕು ನಿಮಿತ್ತ ಬೆಳಿಗ್ಗೆಯೇ ಗ್ರಾಮೀಣ ಭಾಗಗಳಿಂದ ಪಟ್ಟಣದಲ್ಲಿ ಇರುವ ಕುರಿ,ಕೋಳಿ, ದನದ ಮಾಂಸದ ಅಂಗಡಿಗಳಿಗೆ ಗ್ರಾಹಕರು ಬಂದಿದ್ದರು. ಎರಡು ಅಡಿ ಅಂತರ ಮತ್ತು ನಿಯಮಗಳನ್ನು ಪಾಲನೆ ಮಾಡದೇ ಇದ್ದುದರಿಂದ ಪೊಲೀಸರು ಲಾಠಿ ಬೀಸಿದರು. ಬಳಿಕ ಅಂಗಡಿಗಳನ್ನು ಬಂದ್ ಮಾಡಿಸಿದರು. ಆದರೂ ಅಂಗಡಿಯವರು ಗ್ರಾಹಕರನ್ನು ಒಳಗೆ ಸೇರಿಸಿಕೊಂಡು ಮಾರಾಟ ಮಾಡಿದರು.