<p><strong>ಮಹದೇಶ್ವರ ಬೆಟ್ಟ: </strong>ಕೊರೊನಾ ವೈರಸ್ ವಿರುದ್ಧ ನಡೆದ ಜನತಾ ಕರ್ಫ್ಯೂ ಕಾರಣದಿಂದ ಸುಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟ ಭಾನುವಾರ ಖಾಲಿ ಖಾಲಿಯಾಗಿತ್ತು.</p>.<p>ಬೆಟ್ಟದ ನಿವಾಸಿಗಳು ಕೂಡ ಮನೆಯಲ್ಲೇ ಉಳಿದರು. ಅರ್ಚಕರು, ಆನೆ ಪಾಲಕರು, ಪ್ರಾಧಿಕಾರದ ಬೆರಳೆಣಿಕೆಯಷ್ಟು ಸಿಬ್ಬಂದಿ ಬಿಟ್ಟರೆ ಸ್ಥಳೀಯರಾಗಲಿ, ಹೊರಗಿನ ಭಕ್ತರಾಗಲಿ ಯಾರೊಬ್ಬರೂ ದೇವಸ್ಥಾನದತ್ತ ಸುಳಿಯಲಿಲ್ಲ. ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. ವಾಹನ ಸಂಚಾರವೂ.</p>.<p>ಸೋಂಕು ಹರಡುವುದನ್ನು ತಡೆಗಟ್ಟುವುದಕ್ಕಾಗಿ ದೇವಾಲಯಕ್ಕೆ ಭಕ್ತರ ಭೇಟಿಯನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಆದರೆ, ಸ್ಥಳೀಯರಾದರೂ ಮಾದಪ್ಪನ ದರ್ಶನಕ್ಕೆ ಬರುತ್ತಿದ್ದರು.</p>.<p class="Subhead"><strong>ಜಾತ್ರೆ ಸಮಯ: </strong>ಬೆಟ್ಟದಲ್ಲಿ ಈಗ ಯುಗಾದಿ ಜಾತ್ರೆಯ ಸಮಯ. ವೇಳಾಪಟ್ಟಿ ಪ್ರಕಾರ 21ರಿಂದಲೇ ಜಾತ್ರೆ ಆರಂಭವಾಗುತ್ತದೆ. ಈ ಬಾರಿ ಕೊರೊನಾ ಕಾರಣಕ್ಕೆ ಜಾತ್ರೆಯನ್ನು ರದ್ದುಪಡಿಸಲಾಗಿದೆ.</p>.<p>ಈ ಅವಧಿಯಲ್ಲಿ ದೇವಾಲಯಕ್ಕೆ ಲಕ್ಷಾಂತರ ಮಂದಿ ಬರುತ್ತಾರೆ. ಎಲ್ಲವೂ ಸರಿಯಾಗಿದ್ದರೆ, ಭಾನುವಾರ ಬೆಟ್ಟದಲ್ಲಿ ಒಂದರಿಂದ ಒಂದೂವರೆ ಲಕ್ಷದಷ್ಟು ಜನ ಸೇರುತ್ತಿದ್ದರು. ಆದರೆ, ನಿರ್ಬಂಧ ಹಾಗೂ ಜನತಾ ಕರ್ಫ್ಯೂ ಕಾರಣಕ್ಕೆ ಬೆಟ್ಟದತ್ತ ಯಾರೂ ಬಂದಿಲ್ಲ.</p>.<p class="Subhead"><strong>200 ಸಿಬ್ಬಂದಿಗೆ ರಜೆ: </strong>ದೇವಾಲಯದಲ್ಲಿ ಪ್ರಾಧಿಕಾರದ ಅಡಿಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುವ 200 ಸಿಬ್ಬಂದಿಗೆ ಮುಂದಿನ ಆದೇಶವರೆಗೆ ರಜೆ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇಶ್ವರ ಬೆಟ್ಟ: </strong>ಕೊರೊನಾ ವೈರಸ್ ವಿರುದ್ಧ ನಡೆದ ಜನತಾ ಕರ್ಫ್ಯೂ ಕಾರಣದಿಂದ ಸುಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟ ಭಾನುವಾರ ಖಾಲಿ ಖಾಲಿಯಾಗಿತ್ತು.</p>.<p>ಬೆಟ್ಟದ ನಿವಾಸಿಗಳು ಕೂಡ ಮನೆಯಲ್ಲೇ ಉಳಿದರು. ಅರ್ಚಕರು, ಆನೆ ಪಾಲಕರು, ಪ್ರಾಧಿಕಾರದ ಬೆರಳೆಣಿಕೆಯಷ್ಟು ಸಿಬ್ಬಂದಿ ಬಿಟ್ಟರೆ ಸ್ಥಳೀಯರಾಗಲಿ, ಹೊರಗಿನ ಭಕ್ತರಾಗಲಿ ಯಾರೊಬ್ಬರೂ ದೇವಸ್ಥಾನದತ್ತ ಸುಳಿಯಲಿಲ್ಲ. ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. ವಾಹನ ಸಂಚಾರವೂ.</p>.<p>ಸೋಂಕು ಹರಡುವುದನ್ನು ತಡೆಗಟ್ಟುವುದಕ್ಕಾಗಿ ದೇವಾಲಯಕ್ಕೆ ಭಕ್ತರ ಭೇಟಿಯನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಆದರೆ, ಸ್ಥಳೀಯರಾದರೂ ಮಾದಪ್ಪನ ದರ್ಶನಕ್ಕೆ ಬರುತ್ತಿದ್ದರು.</p>.<p class="Subhead"><strong>ಜಾತ್ರೆ ಸಮಯ: </strong>ಬೆಟ್ಟದಲ್ಲಿ ಈಗ ಯುಗಾದಿ ಜಾತ್ರೆಯ ಸಮಯ. ವೇಳಾಪಟ್ಟಿ ಪ್ರಕಾರ 21ರಿಂದಲೇ ಜಾತ್ರೆ ಆರಂಭವಾಗುತ್ತದೆ. ಈ ಬಾರಿ ಕೊರೊನಾ ಕಾರಣಕ್ಕೆ ಜಾತ್ರೆಯನ್ನು ರದ್ದುಪಡಿಸಲಾಗಿದೆ.</p>.<p>ಈ ಅವಧಿಯಲ್ಲಿ ದೇವಾಲಯಕ್ಕೆ ಲಕ್ಷಾಂತರ ಮಂದಿ ಬರುತ್ತಾರೆ. ಎಲ್ಲವೂ ಸರಿಯಾಗಿದ್ದರೆ, ಭಾನುವಾರ ಬೆಟ್ಟದಲ್ಲಿ ಒಂದರಿಂದ ಒಂದೂವರೆ ಲಕ್ಷದಷ್ಟು ಜನ ಸೇರುತ್ತಿದ್ದರು. ಆದರೆ, ನಿರ್ಬಂಧ ಹಾಗೂ ಜನತಾ ಕರ್ಫ್ಯೂ ಕಾರಣಕ್ಕೆ ಬೆಟ್ಟದತ್ತ ಯಾರೂ ಬಂದಿಲ್ಲ.</p>.<p class="Subhead"><strong>200 ಸಿಬ್ಬಂದಿಗೆ ರಜೆ: </strong>ದೇವಾಲಯದಲ್ಲಿ ಪ್ರಾಧಿಕಾರದ ಅಡಿಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುವ 200 ಸಿಬ್ಬಂದಿಗೆ ಮುಂದಿನ ಆದೇಶವರೆಗೆ ರಜೆ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>