ಇದೇ ದ್ವೇಷದಿಂದ 2016ರ ಫೆ.13ರಂದು ಸಂಜೆ 4.30ರಲ್ಲಿ ರತ್ನಮ್ಮ ಅವರು ಚಿನ್ನಮ್ಮ ಎಂಬುವವರೊಡನೆ ತೆರಕಣಾಂಬಿಯ ರಾಮಮಂದಿರದ ಬಳಿನಡೆದು ಹೋಗುತ್ತಿದ್ದಾಗ, ಸೈಕಲ್ನಲ್ಲಿ ಬಂದ ಆನಂದಕುಮಾರ, ‘ಸಾಲದ ಹಣ ಪಾವತಿ ಮಾಡಲು ಬಂದರೆ ಹೆಚ್ಚು ಹಣ ಕೇಳುತ್ತೀರಾ’ ಎಂದು ಅವಾಚ್ಯ ಶಬ್ದಗಳಿಂದ ಬೈದು ರತ್ನಮ್ಮಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ರತ್ನಮ್ಮ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ, ಆರೋಪ ಪಟ್ಟಿ ಸಲ್ಲಿಸಿದ್ದರು.